ಶ್ರೀಗಳು ಸದಾ ಪಾಠ ಪ್ರವಚನ ಕೇಳಬೇಕು ಎಂದು ಬಯಸುತ್ತಿದ್ದರು.ಈ ಹಿಂದೆ ಶ್ರೀಗಳು ಬಯಸಿದ್ದಂತೆ ವಿದ್ಯಾಪೀಠ ಆವರಣದ ಹುಲ್ಲುಹಾಸಿನಲ್ಲಿ ಬೃಂದಾವನಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಶ್ರೀಗಳ ದೇಹದ ಎತ್ತರದ ಎರಡು ಪಟ್ಟು ಆಳದ ಗುಂಡಿ ತೋಡಿ, ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ. ಸ್ವಸ್ತಿಕಾಸನದಲ್ಲಿ ಇರಿಸಿದ ಪಾರ್ಥಿವ ಶರೀರದ ಸುತ್ತಲೂ ವಿವಿಧ ಕ್ಷೇತ್ರಗಳಿಂದ ತಂದ ಮಣ್ಣು,ಕರ್ಪೂರ, ಹತ್ತಿ, ಉಪ್ಪು ಇತ್ಯಾದಿ ಪರಿಕರಗಳನ್ನುತುಂಬಲಾಗುತ್ತದೆ.