‘ನಾವೆಲ್ಲಾ ಕಡಬಗೆರೆಯಲ್ಲಿ ವಾಸವಿದ್ದೆವು. ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 6ಗಂಟೆವರೆಗೂ ಕೆಲಸ ಮಾಡುತ್ತಿದ್ದೆವು. ಎಂದಿನಂತೆ ಮಂಗಳವಾರ ಒಟ್ಟು 9 ಮಂದಿ ಕೆಲಸಕ್ಕೆ ಹೋಗಿದ್ದೆವು. ಮಳೆ ಬರುತ್ತಿದ್ದರಿಂದ ಬೇಗನೆ ಮನೆಗೆ ಹೋಗುವ ಆಲೋಚನೆ ಇತ್ತು. ಆದರೂ 6 ಗಂಟೆವರೆಗೂ ಕೆಲಸ ಮಾಡಿದೆವು. ಮನೆಗೆ ಹೊರಡುವ ವೇಳೆ ಸ್ಥಳಕ್ಕೆ ಬಂದ ಎಂ.ಇ.ಐ.ಎಲ್.ಕಂಪನಿಯ ನಾಲ್ವರು ಸಿಬ್ಬಂದಿ ರಾತ್ರಿ 9 ಗಂಟೆವರೆಗೂ ಇದ್ದು, ವೆಲ್ಡಿಂಗ್ ಕೆಲಸ ಮುಗಿಸಿ ಹೋಗುವಂತೆದೇವ್ಭರತ್, ಅಂಕಿತ್ ಹಾಗೂ ನನಗೆ ಸೂಚಿಸಿದರು. ಮಳೆ ಬರುತ್ತಿದೆ, ನಾಳೆ ಬಂದು ಕೆಲಸ ಮುಗಿಸುತ್ತೇವೆ ಎಂದು ಮನವಿ ಮಾಡಿದರೂ ಕೇಳಲಿಲ್ಲ. ನಮ್ಮ ಮನವಿಗೆ ಅವರು ಒಪ್ಪಿದ್ದರೆ ಇಬ್ಬರ ಜೀವ ಉಳಿಯುತ್ತಿತ್ತು’ ಎಂದು ಗದ್ಗದಿತರಾದರು.