<p><strong>ಬೆಂಗಳೂರು:</strong> ‘ಪ್ರಸಕ್ತ ವರ್ಷದಲ್ಲಿ 4,362 ಪ್ರತಿಭಾವಂತರಿಗೆ ₹5.70 ಕೋಟಿ ಯಷ್ಟು ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಇದು ಕಳೆದ ವರ್ಷ ನೀಡಿದ್ದ ವಿದ್ಯಾರ್ಥಿ ವೇತನಕ್ಕಿಂತ (₹2.81 ಕೋಟಿ) ದುಪ್ಪಟ್ಟು’ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್. ದೊರೆಸ್ವಾಮಿ ಹೇಳಿದರು.</p>.<p>ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊರ<br />ವರ್ತುಲ ರಸ್ತೆಯಲ್ಲಿರುವ ವಿಶ್ವವಿದ್ಯಾಲಯ ಕ್ಯಾಂಪಸ್ನ ಸಭಾಂಗಣದಲ್ಲಿ ಇದೇ 29ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿ<br />ಕೊಳ್ಳಲಾಗಿದೆ. ಸಿಸ್ಕೊ ಕಂಪನಿಯ ಭಾರತೀಯ ಘಟಕದ ಅಧ್ಯಕ್ಷ ಸಮೀರ್ ಗಾರಡೆ ಹಾಗೂ ಆಕ್ಸೆಂಚರ್ ಕಂಪನಿಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಮೋಹನ್ ಶೇಖರ್ ಪಾಲ್ಗೊಳ್ಳಲಿದ್ದಾರೆ’ ಎಂದರು.</p>.<p>‘ಪ್ರೊ. ಸಿಎನ್ಆರ್ ರಾವ್’ ಹಾಗೂ ‘ಪ್ರೊ. ಎಂಆರ್ಡಿ’ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಅತ್ಯುನ್ನತ ಶ್ರೇಣಿ ಪುರಸ್ಕಾರದಡಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 2014ರಿಂದ 2020<br />ರವರೆಗೆ ಒಟ್ಟು ₹27.58 ಕೋಟಿಯಷ್ಟು ವಿದ್ಯಾರ್ಥಿ ವೇತನ ನೀಡಿದ ಹೆಮ್ಮೆ ನಮ್ಮದು’ ಎಂದು ಹೇಳಿದರು.</p>.<p class="Subhead">‘ಆತ್ಮತೃಷ – ಸಾಂಸ್ಕೃತಿಕ ಟೆಕ್ನೊ’ ಹಬ್ಬ: ‘ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆ ಪ್ರೋತ್ಸಾಹಿಸಲು ಮಾರ್ಚ್ 5ರಿಂದ 7ರವರೆಗೆ ‘ಆತ್ಮತೃಷ – ಸಾಂಸ್ಕೃತಿಕ ಟೆಕ್ನೊ’ ಹಬ್ಬ ಆಯೋಜಿಸಲಾಗಿದೆ. ದೇಶದ 80 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ’ ಎಂದು ದೊರೆಸ್ವಾಮಿ ತಿಳಿಸಿದರು.</p>.<p>‘ಹಬ್ಬದ ನಿಮಿತ್ತ ಫೆ. 28ರಿಂದ ಆಕಾಶ್ ಗುಪ್ತ ಅವರಿಂದ ಕಾಮಿಡಿ ಶೋ, ಪ್ರೊ. ಚಿದಂಬರ್ ಕಾಳಮಂಜಿ ಅವರಿಂದ ಸಂಗೀತ ದರ್ಪಣ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.5ರಂದು ಸಂಜೆ 5ಕ್ಕೆ ಹಬ್ಬ<br />ವನ್ನು ಉದ್ಘಾಟಿಸಲಿರುವ ಯಕ್ಷ<br />ಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ‘ವಾಲಿ ಮೋಕ್ಷ’<br />ಯಕ್ಷಗಾನ ಪ್ರದರ್ಶನವನ್ನೂ ನೀಡಲಿದ್ದಾರೆ. ಮಾ. 6ರಂದು ಸಾಂಸ್ಕೃತಿಕ ಸಂಜೆ ಹಾಗೂ 7ರಂದು ಗಾಯಕ ಬೆನ್ನಿದಯಾಳ್ ಹಾಗೂ ಕೇರಳದ ‘ತೈಕುಂಡಂಬ್ರಿಡ್ಜ್’ ವಾದ್ಯ ತಂಡದವರು ಕಾರ್ಯ<br />ಕ್ರಮ ನಡೆಸಿಕೊಡಲಿದ್ದಾರೆ’ ಎಂದರು.</p>.<p class="Subhead">1,381 ವಿದ್ಯಾರ್ಥಿಗಳಿಗೆ ಉದ್ಯೋಗ: ‘ವಿವಿಧ ವಿಭಾಗಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ 1,381 ವಿದ್ಯಾರ್ಥಿಗಳು 2020ರ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ವಾರ್ಷಿಕ ಗರಿಷ್ಠ ₹49.75 ಲಕ್ಷ ಹಾಗೂ ಕನಿಷ್ಠ ₹8.17 ಲಕ್ಷ ವೇತನಕ್ಕೆ ಅರ್ಹತೆ ಪಡೆದಿದ್ದಾರೆ. ಮೈಕ್ರೊಸಾಫ್ಟ್ ಸೇರಿ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ 52 ವಿದ್ಯಾರ್ಥಿಗಳು 2 ತಿಂಗಳ ಇಂಟರ್ನ್ಶಿಪ್ಗೆ ಆಯ್ಕೆಯಾಗಿದ್ದಾರೆ’ ಎಂದು ದೊರೆಸ್ವಾಮಿ ಹೇಳಿದರು.</p>.<p><strong>ಹುತಾತ್ಮರ ಕುಟುಂಬದವರಿಗೆ ‘ಸಮರ್ಪಣ’</strong></p>.<p>‘ಹುತಾತ್ಮ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅಂಥ ಸೈನಿಕರ ಕುಟುಂಬಗಳಿಗೆ ತಲಾ ₹30,000 ನೀಡಿ ಸನ್ಮಾನಿಸಲು ‘ಸಮರ್ಪಣ’ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಪಿಂಚಣಿ ಹಾಗೂ ಇತರೆ ಸೌಲಭ್ಯ ಒದಗಿಸಲು ಕಾನೂನು ನೆರವು ಸಹ ನೀಡಲಾಗುತ್ತಿದೆ’ ಎಂದು ದೊರೆಸ್ವಾಮಿ ತಿಳಿಸಿದರು.</p>.<p>‘ಮಾ. 22ರಂದು ‘ಸಮರ್ಪಣ ಮ್ಯಾರಥಾನ್’ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 500ಕ್ಕೂ ಹೆಚ್ಚು ಸೈನಿಕರು ಸೇರಿ ಸುಮಾರು 4,000 ಮಂದಿ ಭಾಗವಹಿಸಲಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪ್ರಸಕ್ತ ವರ್ಷದಲ್ಲಿ 4,362 ಪ್ರತಿಭಾವಂತರಿಗೆ ₹5.70 ಕೋಟಿ ಯಷ್ಟು ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಇದು ಕಳೆದ ವರ್ಷ ನೀಡಿದ್ದ ವಿದ್ಯಾರ್ಥಿ ವೇತನಕ್ಕಿಂತ (₹2.81 ಕೋಟಿ) ದುಪ್ಪಟ್ಟು’ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್. ದೊರೆಸ್ವಾಮಿ ಹೇಳಿದರು.</p>.<p>ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊರ<br />ವರ್ತುಲ ರಸ್ತೆಯಲ್ಲಿರುವ ವಿಶ್ವವಿದ್ಯಾಲಯ ಕ್ಯಾಂಪಸ್ನ ಸಭಾಂಗಣದಲ್ಲಿ ಇದೇ 29ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿ<br />ಕೊಳ್ಳಲಾಗಿದೆ. ಸಿಸ್ಕೊ ಕಂಪನಿಯ ಭಾರತೀಯ ಘಟಕದ ಅಧ್ಯಕ್ಷ ಸಮೀರ್ ಗಾರಡೆ ಹಾಗೂ ಆಕ್ಸೆಂಚರ್ ಕಂಪನಿಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಮೋಹನ್ ಶೇಖರ್ ಪಾಲ್ಗೊಳ್ಳಲಿದ್ದಾರೆ’ ಎಂದರು.</p>.<p>‘ಪ್ರೊ. ಸಿಎನ್ಆರ್ ರಾವ್’ ಹಾಗೂ ‘ಪ್ರೊ. ಎಂಆರ್ಡಿ’ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಅತ್ಯುನ್ನತ ಶ್ರೇಣಿ ಪುರಸ್ಕಾರದಡಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 2014ರಿಂದ 2020<br />ರವರೆಗೆ ಒಟ್ಟು ₹27.58 ಕೋಟಿಯಷ್ಟು ವಿದ್ಯಾರ್ಥಿ ವೇತನ ನೀಡಿದ ಹೆಮ್ಮೆ ನಮ್ಮದು’ ಎಂದು ಹೇಳಿದರು.</p>.<p class="Subhead">‘ಆತ್ಮತೃಷ – ಸಾಂಸ್ಕೃತಿಕ ಟೆಕ್ನೊ’ ಹಬ್ಬ: ‘ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆ ಪ್ರೋತ್ಸಾಹಿಸಲು ಮಾರ್ಚ್ 5ರಿಂದ 7ರವರೆಗೆ ‘ಆತ್ಮತೃಷ – ಸಾಂಸ್ಕೃತಿಕ ಟೆಕ್ನೊ’ ಹಬ್ಬ ಆಯೋಜಿಸಲಾಗಿದೆ. ದೇಶದ 80 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ’ ಎಂದು ದೊರೆಸ್ವಾಮಿ ತಿಳಿಸಿದರು.</p>.<p>‘ಹಬ್ಬದ ನಿಮಿತ್ತ ಫೆ. 28ರಿಂದ ಆಕಾಶ್ ಗುಪ್ತ ಅವರಿಂದ ಕಾಮಿಡಿ ಶೋ, ಪ್ರೊ. ಚಿದಂಬರ್ ಕಾಳಮಂಜಿ ಅವರಿಂದ ಸಂಗೀತ ದರ್ಪಣ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.5ರಂದು ಸಂಜೆ 5ಕ್ಕೆ ಹಬ್ಬ<br />ವನ್ನು ಉದ್ಘಾಟಿಸಲಿರುವ ಯಕ್ಷ<br />ಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ‘ವಾಲಿ ಮೋಕ್ಷ’<br />ಯಕ್ಷಗಾನ ಪ್ರದರ್ಶನವನ್ನೂ ನೀಡಲಿದ್ದಾರೆ. ಮಾ. 6ರಂದು ಸಾಂಸ್ಕೃತಿಕ ಸಂಜೆ ಹಾಗೂ 7ರಂದು ಗಾಯಕ ಬೆನ್ನಿದಯಾಳ್ ಹಾಗೂ ಕೇರಳದ ‘ತೈಕುಂಡಂಬ್ರಿಡ್ಜ್’ ವಾದ್ಯ ತಂಡದವರು ಕಾರ್ಯ<br />ಕ್ರಮ ನಡೆಸಿಕೊಡಲಿದ್ದಾರೆ’ ಎಂದರು.</p>.<p class="Subhead">1,381 ವಿದ್ಯಾರ್ಥಿಗಳಿಗೆ ಉದ್ಯೋಗ: ‘ವಿವಿಧ ವಿಭಾಗಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ 1,381 ವಿದ್ಯಾರ್ಥಿಗಳು 2020ರ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ವಾರ್ಷಿಕ ಗರಿಷ್ಠ ₹49.75 ಲಕ್ಷ ಹಾಗೂ ಕನಿಷ್ಠ ₹8.17 ಲಕ್ಷ ವೇತನಕ್ಕೆ ಅರ್ಹತೆ ಪಡೆದಿದ್ದಾರೆ. ಮೈಕ್ರೊಸಾಫ್ಟ್ ಸೇರಿ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ 52 ವಿದ್ಯಾರ್ಥಿಗಳು 2 ತಿಂಗಳ ಇಂಟರ್ನ್ಶಿಪ್ಗೆ ಆಯ್ಕೆಯಾಗಿದ್ದಾರೆ’ ಎಂದು ದೊರೆಸ್ವಾಮಿ ಹೇಳಿದರು.</p>.<p><strong>ಹುತಾತ್ಮರ ಕುಟುಂಬದವರಿಗೆ ‘ಸಮರ್ಪಣ’</strong></p>.<p>‘ಹುತಾತ್ಮ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅಂಥ ಸೈನಿಕರ ಕುಟುಂಬಗಳಿಗೆ ತಲಾ ₹30,000 ನೀಡಿ ಸನ್ಮಾನಿಸಲು ‘ಸಮರ್ಪಣ’ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಪಿಂಚಣಿ ಹಾಗೂ ಇತರೆ ಸೌಲಭ್ಯ ಒದಗಿಸಲು ಕಾನೂನು ನೆರವು ಸಹ ನೀಡಲಾಗುತ್ತಿದೆ’ ಎಂದು ದೊರೆಸ್ವಾಮಿ ತಿಳಿಸಿದರು.</p>.<p>‘ಮಾ. 22ರಂದು ‘ಸಮರ್ಪಣ ಮ್ಯಾರಥಾನ್’ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 500ಕ್ಕೂ ಹೆಚ್ಚು ಸೈನಿಕರು ಸೇರಿ ಸುಮಾರು 4,000 ಮಂದಿ ಭಾಗವಹಿಸಲಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>