ಬೆಂಗಳೂರು: ಕೊಡಗಿನ ಪುಷ್ಪಗಿರಿ ಪಕ್ಷಿಧಾಮ, ಆಭಯಾರಣ್ಯದ ಅನುಸೂಚಿತ ಪ್ರದೇಶದೊಳಗೆ ಕಾನೂನು ಉಲ್ಲಂಘಿಸಿ ರಸ್ತೆ ನಿರ್ಮಿಸಿದ ಆರೋಪ ಹೊತ್ತಿರುವ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ವಿರುದ್ಧ ಹಸಿರು ನ್ಯಾಯಪೀಠ ಆದೇಶದಂತೆ ರಾಜ್ಯ ಸರ್ಕಾರ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಚಂದ್ರಶೇಖರ್ ಒತ್ತಾಯಿಸಿದ್ದಾರೆ.