<p>ಬೆಂಗಳೂರು: 'ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ಸ್ಥಾಪಿಸಿ ರಾಜ್ಯದಲ್ಲಿ ಸಂಶೋಧನೆಗಳಿಗೆ ಉತ್ತೇಜನ ನೀಡಲಾಗುವುದು' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.</p>.<p>ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ ಅರಮನೆ ಆವರಣದಲ್ಲಿ ಆಯೋಜಿಸಿರುವ ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟಿಸಿ ಅವರು ಮಾತನಾಡಿದರು.</p>.<p>'ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ. ಈ ಸಂಸ್ಥೆಯ ಮೂಲಕ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಗಳನ್ನು ಕಾಯುವ ಕೆಲಸ ಮಾಡಲಾಗುವುದು. ನವೋದ್ಯಮಗಳಿಗೂ ಪ್ರೋತ್ಸಾಹ ನೀಡಲಾಗುವುದು' ಎಂದರು.</p>.<p>'ಆವಿಷ್ಕಾರದ ಚಿಂತನೆಗಳಿಗೆ ನವೋದ್ಯಮದ ರೂಪ ನೀಡಲು ರಾಜ್ಯ ಸರ್ಕಾರ ಈಗಾಗಲೇ ಆಯ್ದ ನವೋದ್ಯಮಿಗಳಿಗೆ ತಲಾ ₹೫೦ ಲಕ್ಷ ಸಹಾಯಧನ ನೀಡುತ್ತಿದೆ. ಇದಕ್ಕೆ ಈ ಬಾರಿ 22 ತಂಡಗಳು ಆಯ್ಕೆ ಆಗಿವೆ. ಅದರಲ್ಲಿ 10 ಹೈದರಾಬಾದ್ ಕರ್ನಾಟಕದ ನವೋದ್ಯಮಗಳಿವೆ' ಎಂದು ತಿಳಿಸಿದರು.</p>.<p>'ರಾಜ್ಯದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಜತೆಗೆ, ಸಿ-ಕ್ಯಾನ್ ಸಂಸ್ಥೆಯ ಸಹಯೋಗದಲ್ಲಿ ೫೦ ಆವಿಷ್ಕಾರ ಕೇಂದ್ರಗಳನ್ನು ಸ್ಥಾಪಿಸುತ್ತೇವೆ' ಎಂದು ಮುಂದಾಲೋಚನೆ ಹಂಚಿಕೊಂಡರು.</p>.<p>ಸಚಿವ ಕೆ.ಜೆ.ಜಾರ್ಜ್, 'ಒಂದು ಕಾಲಕ್ಕೆ ಕಾಲ್ ಸೆಂಟರ್ ಗಳ ನಗರ ಎಂಬ ಅನ್ವರ್ಥನಾಮ ಬೆಂಗಳೂರಿಗೆ ಇತ್ತು. ಯುವ ಜನರ ನವೀನ ಚಿಂತನೆ ಮತ್ತು ಸಂಶೋಧನಾತ್ಮಕ ದುಡಿಮೆಯಿಂದ ತಂತ್ರಜ್ಞಾನದ ನೆಲೆಯಲ್ಲಿ ಜಾಗತಿಕ ಗಮನ ಸೆಳೆಯುತ್ತಿದೆ' ಎಂದು ಶ್ಲಾಘಿಸಿದರು.</p>.<p>'ರಾಜ್ಯದ ಆಯ್ದ 33 ಕಾಲೇಜುಗಳಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಗಳನ್ನು ತೆರೆಯುತ್ತೇವೆ. ಅವುಗಳಿಂದ ವಿದ್ಯಾರ್ಥಿಗಳಲ್ಲಿ ಆವಿಷ್ಕಾರದ ಮಹತ್ವ, ಅಗತ್ಯತೆಯನ್ನು ಮನವರಿಕೆ ಮಾಡುತ್ತೇವೆ' ಎಂದರು.</p>.<p>'ಬ್ಲಾಕ್ ಚೈನ್, ರೊಬೊಟಿಕ್ಸ್, ಇಂಟಲಿಜೆನ್ಸ್ ಆ್ಯಪ್ಸ್, ಟೆಲಿಕಾಂ, ಸೈಬರ್ ಸೆಕ್ಯುರಿಟಿ, ಬಯೊಫಾರ್ಮ್, ಬಯೊ ಎನರ್ಜಿ, ಬಯೊ ಅಗ್ರಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವವರು ಮೊದಲು ಕರ್ನಾಟಕದತ್ತ ನೋಡುವಂತೆ ಮಾಡುವ ಇರಾದೆ ನಮಗಿದೆ. ಇದನ್ನು ೨೦೨೨ರ ಒಳಗೆ ಸಾಧಿಸಬೇಕು ಅಂದುಕೊಂಡಿದ್ದೇವೆ' ಎಂಬ ಕನಸು ಬಿಚ್ಚಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: 'ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ಸ್ಥಾಪಿಸಿ ರಾಜ್ಯದಲ್ಲಿ ಸಂಶೋಧನೆಗಳಿಗೆ ಉತ್ತೇಜನ ನೀಡಲಾಗುವುದು' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.</p>.<p>ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ ಅರಮನೆ ಆವರಣದಲ್ಲಿ ಆಯೋಜಿಸಿರುವ ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟಿಸಿ ಅವರು ಮಾತನಾಡಿದರು.</p>.<p>'ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ. ಈ ಸಂಸ್ಥೆಯ ಮೂಲಕ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಗಳನ್ನು ಕಾಯುವ ಕೆಲಸ ಮಾಡಲಾಗುವುದು. ನವೋದ್ಯಮಗಳಿಗೂ ಪ್ರೋತ್ಸಾಹ ನೀಡಲಾಗುವುದು' ಎಂದರು.</p>.<p>'ಆವಿಷ್ಕಾರದ ಚಿಂತನೆಗಳಿಗೆ ನವೋದ್ಯಮದ ರೂಪ ನೀಡಲು ರಾಜ್ಯ ಸರ್ಕಾರ ಈಗಾಗಲೇ ಆಯ್ದ ನವೋದ್ಯಮಿಗಳಿಗೆ ತಲಾ ₹೫೦ ಲಕ್ಷ ಸಹಾಯಧನ ನೀಡುತ್ತಿದೆ. ಇದಕ್ಕೆ ಈ ಬಾರಿ 22 ತಂಡಗಳು ಆಯ್ಕೆ ಆಗಿವೆ. ಅದರಲ್ಲಿ 10 ಹೈದರಾಬಾದ್ ಕರ್ನಾಟಕದ ನವೋದ್ಯಮಗಳಿವೆ' ಎಂದು ತಿಳಿಸಿದರು.</p>.<p>'ರಾಜ್ಯದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಜತೆಗೆ, ಸಿ-ಕ್ಯಾನ್ ಸಂಸ್ಥೆಯ ಸಹಯೋಗದಲ್ಲಿ ೫೦ ಆವಿಷ್ಕಾರ ಕೇಂದ್ರಗಳನ್ನು ಸ್ಥಾಪಿಸುತ್ತೇವೆ' ಎಂದು ಮುಂದಾಲೋಚನೆ ಹಂಚಿಕೊಂಡರು.</p>.<p>ಸಚಿವ ಕೆ.ಜೆ.ಜಾರ್ಜ್, 'ಒಂದು ಕಾಲಕ್ಕೆ ಕಾಲ್ ಸೆಂಟರ್ ಗಳ ನಗರ ಎಂಬ ಅನ್ವರ್ಥನಾಮ ಬೆಂಗಳೂರಿಗೆ ಇತ್ತು. ಯುವ ಜನರ ನವೀನ ಚಿಂತನೆ ಮತ್ತು ಸಂಶೋಧನಾತ್ಮಕ ದುಡಿಮೆಯಿಂದ ತಂತ್ರಜ್ಞಾನದ ನೆಲೆಯಲ್ಲಿ ಜಾಗತಿಕ ಗಮನ ಸೆಳೆಯುತ್ತಿದೆ' ಎಂದು ಶ್ಲಾಘಿಸಿದರು.</p>.<p>'ರಾಜ್ಯದ ಆಯ್ದ 33 ಕಾಲೇಜುಗಳಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಗಳನ್ನು ತೆರೆಯುತ್ತೇವೆ. ಅವುಗಳಿಂದ ವಿದ್ಯಾರ್ಥಿಗಳಲ್ಲಿ ಆವಿಷ್ಕಾರದ ಮಹತ್ವ, ಅಗತ್ಯತೆಯನ್ನು ಮನವರಿಕೆ ಮಾಡುತ್ತೇವೆ' ಎಂದರು.</p>.<p>'ಬ್ಲಾಕ್ ಚೈನ್, ರೊಬೊಟಿಕ್ಸ್, ಇಂಟಲಿಜೆನ್ಸ್ ಆ್ಯಪ್ಸ್, ಟೆಲಿಕಾಂ, ಸೈಬರ್ ಸೆಕ್ಯುರಿಟಿ, ಬಯೊಫಾರ್ಮ್, ಬಯೊ ಎನರ್ಜಿ, ಬಯೊ ಅಗ್ರಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವವರು ಮೊದಲು ಕರ್ನಾಟಕದತ್ತ ನೋಡುವಂತೆ ಮಾಡುವ ಇರಾದೆ ನಮಗಿದೆ. ಇದನ್ನು ೨೦೨೨ರ ಒಳಗೆ ಸಾಧಿಸಬೇಕು ಅಂದುಕೊಂಡಿದ್ದೇವೆ' ಎಂಬ ಕನಸು ಬಿಚ್ಚಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>