‘ದೇಶದಲ್ಲಿ ಹಿರಿಯರ ಸಂಖ್ಯೆ ಹೆಚ್ಚುತ್ತಿದೆ. ಕೊನೆ ಕಾಲದಲ್ಲಿ ತಂದೆ, ತಾಯಿಯನ್ನೇ ಪ್ರೀತಿಯಿಂದ ಕಾಣಬೇಕಾದವರೇ ನಿರ್ಲಕ್ಷ್ಯ ವಹಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಬೆಂಗಳೂರಿನಲ್ಲಿ ಸಹಾಯವಾಣಿಗೆ ಬಂದಿರುವ ದೂರು ಗಳಲ್ಲಿ ಶೇ 80ರಷ್ಟು ದೂರುಗಳು ಕಿರುಕುಳ, ನಿರ್ಲಕ್ಷ್ಯ, ದೌರ್ಜನ್ಯ, ಹಣ ಅಥವಾ ಆಸ್ತಿಗಾಗಿ ಬೇಡಿಕೆಯ ದೂರುಗಳಾಗಿವೆ.