<p><strong>ರಾಜರಾಜೇಶ್ವರಿನಗರ:</strong> ‘ಸಮಾಜದಲ್ಲಿರುವ ನೊಂದ, ಅಶಕ್ತ ಮಹಿಳೆಯರಿಗೆ ಆಸರೆ ನೀಡಿ, ಧೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಹೇಳಿದರು.</p>.<p>ಲಗ್ಗೆರೆಯಲ್ಲಿ ಆಶ್ರಯ ಮಹಿಳಾ ವೇದಿಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಸ್ತ್ರೀ ಸಂಭ್ರಮ – 2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಗಂಡನಿಲ್ಲದ ಹೆಣ್ಣುಮಕ್ಕಳನ್ನು ಸಮಾಜ ಬಹಳ ಕೆಟ್ಟದಾಗಿ ನೋಡುತ್ತದೆ. ಜನರು ಅಪಪ್ರಚಾರ ಮಾಡುತ್ತಾರೆ. ನನ್ನ ವಿರುದ್ಧವೇ ಅಪಪ್ರಚಾರ ನಡೆಯುತ್ತಿದೆ. ಇದ್ಯಾವುದಕ್ಕೂ ಅಂಜದೇ, ಸಮಾಜ ಸೇವೆಗೆ ಬಂದಿದ್ದೇನೆ’ ಎಂದರು.</p>.<p>ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ‘ಇತಿಹಾಸದಲ್ಲೂ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆದಿದೆ. ಆಗ ಮಹಿಳೆಯರು ಹೋರಾಟದ ಮೂಲಕ ನ್ಯಾಯ ಪಡೆದಿದ್ದಾರೆ’ ಎಂದರು.</p>.<p>ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಬಿ.ಆರ್.ನಂಜುಡಪ್ಪ, ಬಿಬಿಎಂಪಿ ಮಾಜಿ ಸದಸ್ಯ ಎಚ್.ಎಸ್.ಸಿದ್ದೇಗೌಡ, ಪಾಲಿಕೆ ಮಾಜಿ ಸದಸ್ಯರಾದ ವೇಲುನಾಯ್ಕರ್, ಆಶಾಸುರೇಶ್, ಜಿ.ಮೋಹನ್ ಕುಮಾರ್, ರೂಪಲಿಂಗೇಶ್ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯೆ ಮಂಜುಳನಾರಾಯಣಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದರು.</p>.<p>ಕಾರ್ಯಕ್ರಮದಲ್ಲಿ ನಟಿ ರೇಖಾದಾಸ್, ಮೈಸೂರು ಮಂಜುಳ, ಆರೋಗ್ಯ ಇಲಾಖೆಯ ಸೌಭಾಗ್ಯ, ರೂಪದರ್ಶಿ ಅರುಣ ಅಶೋಕ್, ಪೌರಕಾರ್ಮಿಕ ಮಹಿಳೆಯರಾದ ರಜಿಯಾ, ಮುನಿಯಮ್ಮ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 250ಕ್ಕೂ ಹೆಚ್ಚು ಮಂದಿಗೆ ಬಹುಮಾನ ವಿತರಿಸಲಾಯಿತು.</p>.<p>ಆಶ್ರಯ ಮಹಿಳಾ ವೇದಿಕೆಯ ಕಾಂಚನ, ಅನುಸೂಯ, ಗಾಯತ್ರಿ, ಶಶಿಕಲಾ, ಸರಸ್ವತಿ, ಗೀತಾ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ:</strong> ‘ಸಮಾಜದಲ್ಲಿರುವ ನೊಂದ, ಅಶಕ್ತ ಮಹಿಳೆಯರಿಗೆ ಆಸರೆ ನೀಡಿ, ಧೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಹೇಳಿದರು.</p>.<p>ಲಗ್ಗೆರೆಯಲ್ಲಿ ಆಶ್ರಯ ಮಹಿಳಾ ವೇದಿಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಸ್ತ್ರೀ ಸಂಭ್ರಮ – 2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಗಂಡನಿಲ್ಲದ ಹೆಣ್ಣುಮಕ್ಕಳನ್ನು ಸಮಾಜ ಬಹಳ ಕೆಟ್ಟದಾಗಿ ನೋಡುತ್ತದೆ. ಜನರು ಅಪಪ್ರಚಾರ ಮಾಡುತ್ತಾರೆ. ನನ್ನ ವಿರುದ್ಧವೇ ಅಪಪ್ರಚಾರ ನಡೆಯುತ್ತಿದೆ. ಇದ್ಯಾವುದಕ್ಕೂ ಅಂಜದೇ, ಸಮಾಜ ಸೇವೆಗೆ ಬಂದಿದ್ದೇನೆ’ ಎಂದರು.</p>.<p>ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ‘ಇತಿಹಾಸದಲ್ಲೂ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆದಿದೆ. ಆಗ ಮಹಿಳೆಯರು ಹೋರಾಟದ ಮೂಲಕ ನ್ಯಾಯ ಪಡೆದಿದ್ದಾರೆ’ ಎಂದರು.</p>.<p>ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಬಿ.ಆರ್.ನಂಜುಡಪ್ಪ, ಬಿಬಿಎಂಪಿ ಮಾಜಿ ಸದಸ್ಯ ಎಚ್.ಎಸ್.ಸಿದ್ದೇಗೌಡ, ಪಾಲಿಕೆ ಮಾಜಿ ಸದಸ್ಯರಾದ ವೇಲುನಾಯ್ಕರ್, ಆಶಾಸುರೇಶ್, ಜಿ.ಮೋಹನ್ ಕುಮಾರ್, ರೂಪಲಿಂಗೇಶ್ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯೆ ಮಂಜುಳನಾರಾಯಣಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದರು.</p>.<p>ಕಾರ್ಯಕ್ರಮದಲ್ಲಿ ನಟಿ ರೇಖಾದಾಸ್, ಮೈಸೂರು ಮಂಜುಳ, ಆರೋಗ್ಯ ಇಲಾಖೆಯ ಸೌಭಾಗ್ಯ, ರೂಪದರ್ಶಿ ಅರುಣ ಅಶೋಕ್, ಪೌರಕಾರ್ಮಿಕ ಮಹಿಳೆಯರಾದ ರಜಿಯಾ, ಮುನಿಯಮ್ಮ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 250ಕ್ಕೂ ಹೆಚ್ಚು ಮಂದಿಗೆ ಬಹುಮಾನ ವಿತರಿಸಲಾಯಿತು.</p>.<p>ಆಶ್ರಯ ಮಹಿಳಾ ವೇದಿಕೆಯ ಕಾಂಚನ, ಅನುಸೂಯ, ಗಾಯತ್ರಿ, ಶಶಿಕಲಾ, ಸರಸ್ವತಿ, ಗೀತಾ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>