‘ಸತ್ಯ, ಅಹಿಂಸೆ, ಶಾಂತಿ, ಧರ್ಮವೆಂಬ ಗಾಂಧೀಜಿ ಅವರ ಗುಜರಾತ್ ಮಾದರಿ ಇಂದಿಗೂ ಪ್ರಸ್ತುತವಾಗಿದೆ. ಆದ್ದರಿಂದ, ಪ್ರತಿ ದಿನ ಗಾಂಧೀಜಿ ಅವರನ್ನು ಕೊಲ್ಲಲಾಗುತ್ತಿದೆ. ಸ್ವಾರ್ಥದ, ಪ್ರತಿಷ್ಠೆಯ, ಅಧಿಕಾರ ಲಾಲಸೆಯ, ನಿರ್ಲಜ್ಜಯ ಹಿಂಸೆಯಿಂದ ಕೂಡಿದ ಈಗಿನ ಗುಜರಾತ್ ಮಾದರಿ ನಮಗೆ ಬೇಕಾಗಿಲ್ಲ. ಕುಸ್ತಿಪಟುಗಳ ನ್ಯಾಯಯುತ ಹೋರಾಟ ಗೆದ್ದೇ ಗೆಲ್ಲುತ್ತದೆ. ಏಕೆಂದರೆ ರೈತ ಚಳವಳಿಯ ಆದರ್ಶಗಳು ನಮ್ಮ ಮುಂದಿವೆ’ ಎಂದರು.