ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಗದ ನಡಿಗೆ ಆರೋಗ್ಯದ ಕಡೆಗೆ’

Last Updated 24 ಮಾರ್ಚ್ 2019, 20:02 IST
ಅಕ್ಷರ ಗಾತ್ರ

ಪೀಣ್ಯದಾಸರಹಳ್ಳಿ: ಬಾಗಲಗುಂಟೆಯ ಹಾವನೂರು ಬಡಾವಣೆಯ ವಾಸ್ಕ್ ಯೋಗ ಕೇಂದ್ರದಿಂದ ಆಯೋಜಿಸಲಾದ 'ಯೋಗ ನಡಿಗೆ ಆರೋಗ್ಯದ ಕಡೆಗೆ' ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿದ್ದರು.

ಯೋಗ ಕೇಂದ್ರದಿಂದ ಪ್ರಾರಂಭವಾದ ನಡಿಗೆಯು ವಿಡಿಯಾ ಶಾಲೆ ತಂಗುದಾಣ, ಬಾಗಲಗುಂಟೆ ಮೂಲಕ ಸಾಗಿ ಎಂಇಐ ಆಟದ ಮೈದಾನದಲ್ಲಿ ಮುಕ್ತಾಯಗೊಂಡಿತು. ಇಲ್ಲಿ ಆಸಕ್ತರು ಒಂದು ಗಂಟೆ ಕಾಲ ಯೋಗ ಮಾಡಿದರು.

ಯೋಗಗುರು ರಾಘವೇಂದ್ರ ಪೈ,‘ಯೋಗ ಆರೋಗ್ಯ ಕೊಡುತ್ತದೆ. ಯೋಗದಿಂದ ನಾವೆಲ್ಲ ಆಯುಷ್ಯವನ್ನು ವೃದ್ಧಿಸಿಕೊಳ್ಳಬೇಕು. ಯೋಗಕೇಂದ್ರಗಳು ಯಾವುದೇ ಪಕ್ಷಕ್ಕೆ ಸೀಮಿತವಲ್ಲ’ ಎಂದರು.

ನಡಿಗೆಯಲ್ಲಿ ಯೋಗಪಟುಗಳು, ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT