ಬೆಂಗಳೂರು: ಬಾಣಸವಾಡಿಯ ರಾಜಕುಮಾರ ಉದ್ಯಾನದಲ್ಲಿ ವಿದ್ಯುತ್ ಸ್ಪರ್ಶಿಸಿ 9 ವರ್ಷದ ಬಾಲಕ ಉದಯಕುಮಾರ್ ಮೃತಪಟ್ಟಿದ್ದಾನೆ.
ಸ್ಥಳೀಯ ನಿವಾಸಿ ಗೌರಮ್ಮ ಎಂಬುವರ ಮಗನಾಗಿದ್ದ ಉದಯ, ಉದ್ಯಾನದಲ್ಲಿ ಆಟವಾಡಲು ಹೋಗಿದ್ದ. ಉದ್ಯಾನದಲ್ಲಿದ್ದ ವಿದ್ಯುತ್ ಕಂಬದ ತಂತಿ ಹರಿದು ನೀರಿನಲ್ಲಿ ಬಿದ್ದಿತ್ತು. ಆ ನೀರಿನಲ್ಲಿ ಬಾಲಕ ಓಡಾಡುತ್ತಿದ್ದಂತೆ ವಿದ್ಯುತ್ ತಗುಲಿತ್ತು.
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ತಾಯಿ ಗೌರಮ್ಮ ದೂರುತ್ತಿದ್ದಾರೆ.ಘಟನಾ ಸ್ಥಳಕ್ಕೆ ಶಾಸಕ ಕೆ.ಜೆ.ಜಾರ್ಜ್ ಹಾಗೂ ಬಿಬಿಎಂಪಿ ಆಯುಕ್ತರು ಭೇಟಿ ನೀಡಿದರು. ಬಾಲಕನ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು.