<p><strong>ಬೆಂಗಳೂರು: </strong>ವಸ್ತು ಪ್ರದರ್ಶನ, ಮಾರಾಟ ಸೇರಿದಂತೆ ಯಾವುದೇ ವಾಣಿಜ್ಯ ಬಳಕೆಗೆ ನಗರದ ಅರಮನೆ ಮೈದಾನದಲ್ಲಿ ಇನ್ನು ಮುಂದೆ ಪ್ರವೇಶ ನಿಷಿದ್ಧ. ವಿವಾಹ, ರ್ಯಾಲಿ, ರಾಜಕೀಯ ಸಭೆ ನಡೆಸುವವರಿಗೆ ಮಾತ್ರ ಮೈದಾನ ಸೀಮಿತ. <br /> <br /> ಜೂನ್ 26ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರೂಪಿಸಿರುವ ಮಾರ್ಗಸೂಚಿ ಇದು. ಈ ಮಾರ್ಗಸೂಚಿಯನ್ನು ಶೀಘ್ರದಲ್ಲೇ ಸರ್ಕಾರ ಜಾರಿ ಮಾಡಲಿದೆ. 2001ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಆಧಾರದ ಮೇಲೆ ಈ ಮಾರ್ಗಸೂಚಿ ರೂಪಿಸಲಾಗಿದೆ. <br /> <br /> ವಾಣಿಜ್ಯ ಚಟುವಟಿಕೆ ಬಿಟ್ಟು ಬೇರೆ ಉದ್ದೇಶಗಳಿಗೆ ಮೈದಾನದಲ್ಲಿ ಅನುಮತಿ ನೀಡಲು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದ್ದರೂ, ಎರಡು ತಿಂಗಳಿನಿಂದ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡದ ಇಲಾಖೆಯ ವಿರುದ್ಧ ಅಲ್ಲಿಯ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. `ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಅಧಿಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ಏಕಗವಾಕ್ಷಿ ಸಮಿತಿಗೆ ಇದೆ. ಎರಡು ತಿಂಗಳಿನಿಂದ ಯಾವುದೇ ಅನುಮತಿಯನ್ನು ಸಮಿತಿ ನೀಡಿಲ್ಲ. ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಈ ರೀತಿ ಮಾಡುತ್ತಿರುವುದು ಸರಿಯಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ವಾಣಿಜ್ಯ ಚಟುವಟಿಕೆಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳ ಆದಾಯ ಬರುತ್ತಿತ್ತು. ಏಪ್ರಿಲ್ನಿಂದ ವಾಣಿಜ್ಯ ತೆರಿಗೆ ಕೂಡ ಸರ್ಕಾರ ವಿಧಿಸುತ್ತಿದ್ದ ಕಾರಣ, ಎರಡು ತಿಂಗಳಿನಲ್ಲಿಯೇ ಸುಮಾರು 25 ಲಕ್ಷ ರೂಪಾಯಿ ಬೊಕ್ಕಸಕ್ಕೆ ಜಮಾ ಆಗಿತ್ತು. ಈ ಮಾರ್ಗಸೂಚಿಯಿಂದ ಸರ್ಕಾರ ನಷ್ಟ ಅನುಭವಿಸಲಿದೆ ಎಂಬ ಮಾಹಿತಿಯನ್ನು ಮೂಲಗಳು ತಿಳಿಸಿವೆ.</p>.<p><strong>ಮಾರ್ಗಸೂಚಿಗಳು</strong><br /> ಕಾರ್ಯಕ್ರಮಗಳು ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1996ಕ್ಕೆ ಅನುಗುಣವಾಗಿ ಇರಬೇಕು. <br /> <br /> ಮೈದಾನಕ್ಕೆ ಧಕ್ಕೆ ಆಗಬಾರದು.<br /> <br /> ರಾತ್ರಿ 10ರ ನಂತರ ಧ್ವನಿವರ್ಧಕ ಬಳಕೆ ಇಲ್ಲ<br /> <br /> ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ `ಬೆಸ್ಕಾಂ~ನಿಂದ ವಿಶೇಷ ಅನುಮತಿ ಪಡೆದುಕೊಳ್ಳಬೇಕು.<br /> <br /> ತ್ಯಾಜ್ಯ ವಸ್ತುಗಳನ್ನು ಶುಚಿಗೊಳಿಸಲು ಪ್ರತ್ಯೇಕ ಸೌಲಭ್ಯ ಕಲ್ಪಿಸಬೇಕು ಅಥವಾ ಲೋಡ್ ಒಂದಕ್ಕೆ ಪಾಲಿಕೆಗೆ 5 ಸಾವಿರ ರೂಪಾಯಿ ನೀಡಬೇಕು.<br /> <br /> ವಾಹನ ಸಂಚಾರಕ್ಕೆ ತೊಂದರೆ ಆಗಬಾರದು.<br /> <br /> ಸರ್ಕಾರಿ ಅಧಿಕಾರಿಗಳು ತಪಾಸಣೆಗೆ ಬಂದರೆ ಅವರಿಗೆ ಸಹಕರಿಸಬೇಕು.<br /> <br /> ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಭದ್ರತೆಗೆ ಆಯೋಜಕರು ಕ್ರಮ ತೆಗೆದುಕೊಳ್ಳಬೇಕು.<br /> <br /> ಮದ್ಯ ಪೂರೈಕೆ ಅಥವಾ ಕಾನೂನು ಬಾಹಿರ ಚಟುವಟಿಕೆ ನಡೆಸಕೂಡದು.<br /> <br /> ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸುವ ಸಂದರ್ಭಗಳಲ್ಲಿ ಅವರ ಭದ್ರತೆಗಾಗಿ ಪೊಲೀಸರಿಗೆ ಮುಂಚೆಯೇ ಮಾಹಿತಿ ನೀಡಿರಬೇಕು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವಸ್ತು ಪ್ರದರ್ಶನ, ಮಾರಾಟ ಸೇರಿದಂತೆ ಯಾವುದೇ ವಾಣಿಜ್ಯ ಬಳಕೆಗೆ ನಗರದ ಅರಮನೆ ಮೈದಾನದಲ್ಲಿ ಇನ್ನು ಮುಂದೆ ಪ್ರವೇಶ ನಿಷಿದ್ಧ. ವಿವಾಹ, ರ್ಯಾಲಿ, ರಾಜಕೀಯ ಸಭೆ ನಡೆಸುವವರಿಗೆ ಮಾತ್ರ ಮೈದಾನ ಸೀಮಿತ. <br /> <br /> ಜೂನ್ 26ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರೂಪಿಸಿರುವ ಮಾರ್ಗಸೂಚಿ ಇದು. ಈ ಮಾರ್ಗಸೂಚಿಯನ್ನು ಶೀಘ್ರದಲ್ಲೇ ಸರ್ಕಾರ ಜಾರಿ ಮಾಡಲಿದೆ. 2001ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಆಧಾರದ ಮೇಲೆ ಈ ಮಾರ್ಗಸೂಚಿ ರೂಪಿಸಲಾಗಿದೆ. <br /> <br /> ವಾಣಿಜ್ಯ ಚಟುವಟಿಕೆ ಬಿಟ್ಟು ಬೇರೆ ಉದ್ದೇಶಗಳಿಗೆ ಮೈದಾನದಲ್ಲಿ ಅನುಮತಿ ನೀಡಲು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದ್ದರೂ, ಎರಡು ತಿಂಗಳಿನಿಂದ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡದ ಇಲಾಖೆಯ ವಿರುದ್ಧ ಅಲ್ಲಿಯ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. `ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಅಧಿಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ಏಕಗವಾಕ್ಷಿ ಸಮಿತಿಗೆ ಇದೆ. ಎರಡು ತಿಂಗಳಿನಿಂದ ಯಾವುದೇ ಅನುಮತಿಯನ್ನು ಸಮಿತಿ ನೀಡಿಲ್ಲ. ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಈ ರೀತಿ ಮಾಡುತ್ತಿರುವುದು ಸರಿಯಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ವಾಣಿಜ್ಯ ಚಟುವಟಿಕೆಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳ ಆದಾಯ ಬರುತ್ತಿತ್ತು. ಏಪ್ರಿಲ್ನಿಂದ ವಾಣಿಜ್ಯ ತೆರಿಗೆ ಕೂಡ ಸರ್ಕಾರ ವಿಧಿಸುತ್ತಿದ್ದ ಕಾರಣ, ಎರಡು ತಿಂಗಳಿನಲ್ಲಿಯೇ ಸುಮಾರು 25 ಲಕ್ಷ ರೂಪಾಯಿ ಬೊಕ್ಕಸಕ್ಕೆ ಜಮಾ ಆಗಿತ್ತು. ಈ ಮಾರ್ಗಸೂಚಿಯಿಂದ ಸರ್ಕಾರ ನಷ್ಟ ಅನುಭವಿಸಲಿದೆ ಎಂಬ ಮಾಹಿತಿಯನ್ನು ಮೂಲಗಳು ತಿಳಿಸಿವೆ.</p>.<p><strong>ಮಾರ್ಗಸೂಚಿಗಳು</strong><br /> ಕಾರ್ಯಕ್ರಮಗಳು ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1996ಕ್ಕೆ ಅನುಗುಣವಾಗಿ ಇರಬೇಕು. <br /> <br /> ಮೈದಾನಕ್ಕೆ ಧಕ್ಕೆ ಆಗಬಾರದು.<br /> <br /> ರಾತ್ರಿ 10ರ ನಂತರ ಧ್ವನಿವರ್ಧಕ ಬಳಕೆ ಇಲ್ಲ<br /> <br /> ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ `ಬೆಸ್ಕಾಂ~ನಿಂದ ವಿಶೇಷ ಅನುಮತಿ ಪಡೆದುಕೊಳ್ಳಬೇಕು.<br /> <br /> ತ್ಯಾಜ್ಯ ವಸ್ತುಗಳನ್ನು ಶುಚಿಗೊಳಿಸಲು ಪ್ರತ್ಯೇಕ ಸೌಲಭ್ಯ ಕಲ್ಪಿಸಬೇಕು ಅಥವಾ ಲೋಡ್ ಒಂದಕ್ಕೆ ಪಾಲಿಕೆಗೆ 5 ಸಾವಿರ ರೂಪಾಯಿ ನೀಡಬೇಕು.<br /> <br /> ವಾಹನ ಸಂಚಾರಕ್ಕೆ ತೊಂದರೆ ಆಗಬಾರದು.<br /> <br /> ಸರ್ಕಾರಿ ಅಧಿಕಾರಿಗಳು ತಪಾಸಣೆಗೆ ಬಂದರೆ ಅವರಿಗೆ ಸಹಕರಿಸಬೇಕು.<br /> <br /> ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಭದ್ರತೆಗೆ ಆಯೋಜಕರು ಕ್ರಮ ತೆಗೆದುಕೊಳ್ಳಬೇಕು.<br /> <br /> ಮದ್ಯ ಪೂರೈಕೆ ಅಥವಾ ಕಾನೂನು ಬಾಹಿರ ಚಟುವಟಿಕೆ ನಡೆಸಕೂಡದು.<br /> <br /> ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸುವ ಸಂದರ್ಭಗಳಲ್ಲಿ ಅವರ ಭದ್ರತೆಗಾಗಿ ಪೊಲೀಸರಿಗೆ ಮುಂಚೆಯೇ ಮಾಹಿತಿ ನೀಡಿರಬೇಕು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>