<p><strong>ಬೆಂಗಳೂರು: </strong>ಸಾಂಪ್ರದಾಯಿಕ ತೆಪ್ಪಕ್ಕೆ ಪರ್ಯಾಯವಾಗಿ ಕಡಿಮೆ ತೂಕದ ಹರಿಗೋಲನ್ನು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯದ (ಎನ್ಎಎಲ್) ವೈಜ್ಞಾನಿಕ ಮತ್ತು ಕೈಗಾರಿಕಾ ಅಭಿವೃದ್ಧಿ ಪರಿಷತ್ (ಸಿಎಸ್ಐಆರ್) ಅಭಿವೃದ್ಧಿಪಡಿಸಿದೆ.<br /> <br /> ಪ್ರವಾಹ ಸಂದರ್ಭದಲ್ಲಿ ರಕ್ಷಣೆಗೆ ಸೂಕ್ತವಾಗುವಂತೆ ಹಾಗೂ ಮೀನುಗಾರ ಬಳಕೆಗೆ ಅನುಕೂಲವಾಗುವಂತೆ ಈ ಹರಿಗೋಲನ್ನು ರೂಪಿಸಲಾಗಿದೆ.<br /> ಬಿದಿರು, ಫೈಬರ್, ಅಲ್ಯುಮಿನಿಯಂ ಬಳಸಿ ಹರಿಗೋಲು ನಿರ್ಮಿಸಲಾಗಿದೆ. ‘ಸ್ವರ್ಣಹಂಸ’ ಹೆಸರಿನ ಈ ಆಧುನಿಕ ಹರಿಗೋಲಿನ ಪ್ರಾಯೋಗಿಕ ಓಡಾಟ ಮಂಗಳವಾರ ನಗರದ ಹಲಸೂರು ಕೆರೆಯಲ್ಲಿ ನಡೆಯಿತು.<br /> <br /> ಅಲ್ಯುಮಿನಿಯಂ ಅಸೋಸಿಯೇಷನ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ಅಲ್ಯುಮಿನಿಯಂ ದೋಣಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಆದಿತ್ಯ ಬಿರ್ಲಾ ಸಮೂಹದ ಹಿಂಡಾಲ್ಕೊ ಕಂಪೆನಿಗಾಗಿ ಈ ಪ್ರಾಯೋಗಿಕ ಓಡಾಟ ಆಯೋಜಿಸಲಾಗಿತ್ತು.ಹರಿಗೋಲಿನ ವಿನ್ಯಾಸ ಆಕರ್ಷಕವಾಗಿದೆ. ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗೆ ಈ ವಿನ್ಯಾಸದ ಹರಿಗೋಲನ್ನು ಬಳಸಿಕೊಳ್ಳಬಹುದಾಗಿದೆ ಎಂದು ಕಂಪೆನಿಯ ಸಹಾಯಕ ಉಪಾಧ್ಯಕ್ಷ ವಿ.ರಾಮಸ್ವಾಮಿ ಹೇಳಿದರು.<br /> <br /> ರಾಜ್ಯ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ಮತ್ತು ಮಲ್ಲಘಟ್ಟ ಕೆರೆಗಳಲ್ಲಿ 2012ರ ಜೂನ್ನಲ್ಲಿ ಈ ಹರಿಗೋಲಿನ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ಸಹಾಯಧನ ಯೋಜನೆಯಡಿ ಈ ವಿನ್ಯಾಸದ ಹರಿಗೋಲನ್ನು ಮೀನುಗಾರರಿಗೆ ವಿತರಿಸುವ ಚಿಂತನೆಯೂ ಇದೆ.<br /> <br /> ‘27 ಕೆ.ಜಿ ತೂಕದ 600 ಕೆ.ಜಿ ಭಾರ ಸಾಮರ್ಥ್ಯದ ಹರಿಗೋಲು ಇದಾಗಿದೆ. ಪ್ರತಿ ಹರಿಗೋಲು ನಿರ್ಮಾಣಕ್ಕೆ ₨ 5 ಸಾವಿರ ವೆಚ್ಚವಾಗಲಿದೆ.<br /> ಈ ಹರಿಗೋಲಿನಿಂದ ಮೀನುಗಾರರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಸಿಎಸ್ಐಆರ್ ವಿಜ್ಞಾನಿ ಡಾ.ಎಸ್.ಸೆಲ್ವರಾಜನ್ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸಾಂಪ್ರದಾಯಿಕ ತೆಪ್ಪಕ್ಕೆ ಪರ್ಯಾಯವಾಗಿ ಕಡಿಮೆ ತೂಕದ ಹರಿಗೋಲನ್ನು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯದ (ಎನ್ಎಎಲ್) ವೈಜ್ಞಾನಿಕ ಮತ್ತು ಕೈಗಾರಿಕಾ ಅಭಿವೃದ್ಧಿ ಪರಿಷತ್ (ಸಿಎಸ್ಐಆರ್) ಅಭಿವೃದ್ಧಿಪಡಿಸಿದೆ.<br /> <br /> ಪ್ರವಾಹ ಸಂದರ್ಭದಲ್ಲಿ ರಕ್ಷಣೆಗೆ ಸೂಕ್ತವಾಗುವಂತೆ ಹಾಗೂ ಮೀನುಗಾರ ಬಳಕೆಗೆ ಅನುಕೂಲವಾಗುವಂತೆ ಈ ಹರಿಗೋಲನ್ನು ರೂಪಿಸಲಾಗಿದೆ.<br /> ಬಿದಿರು, ಫೈಬರ್, ಅಲ್ಯುಮಿನಿಯಂ ಬಳಸಿ ಹರಿಗೋಲು ನಿರ್ಮಿಸಲಾಗಿದೆ. ‘ಸ್ವರ್ಣಹಂಸ’ ಹೆಸರಿನ ಈ ಆಧುನಿಕ ಹರಿಗೋಲಿನ ಪ್ರಾಯೋಗಿಕ ಓಡಾಟ ಮಂಗಳವಾರ ನಗರದ ಹಲಸೂರು ಕೆರೆಯಲ್ಲಿ ನಡೆಯಿತು.<br /> <br /> ಅಲ್ಯುಮಿನಿಯಂ ಅಸೋಸಿಯೇಷನ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ಅಲ್ಯುಮಿನಿಯಂ ದೋಣಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಆದಿತ್ಯ ಬಿರ್ಲಾ ಸಮೂಹದ ಹಿಂಡಾಲ್ಕೊ ಕಂಪೆನಿಗಾಗಿ ಈ ಪ್ರಾಯೋಗಿಕ ಓಡಾಟ ಆಯೋಜಿಸಲಾಗಿತ್ತು.ಹರಿಗೋಲಿನ ವಿನ್ಯಾಸ ಆಕರ್ಷಕವಾಗಿದೆ. ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗೆ ಈ ವಿನ್ಯಾಸದ ಹರಿಗೋಲನ್ನು ಬಳಸಿಕೊಳ್ಳಬಹುದಾಗಿದೆ ಎಂದು ಕಂಪೆನಿಯ ಸಹಾಯಕ ಉಪಾಧ್ಯಕ್ಷ ವಿ.ರಾಮಸ್ವಾಮಿ ಹೇಳಿದರು.<br /> <br /> ರಾಜ್ಯ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ಮತ್ತು ಮಲ್ಲಘಟ್ಟ ಕೆರೆಗಳಲ್ಲಿ 2012ರ ಜೂನ್ನಲ್ಲಿ ಈ ಹರಿಗೋಲಿನ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ಸಹಾಯಧನ ಯೋಜನೆಯಡಿ ಈ ವಿನ್ಯಾಸದ ಹರಿಗೋಲನ್ನು ಮೀನುಗಾರರಿಗೆ ವಿತರಿಸುವ ಚಿಂತನೆಯೂ ಇದೆ.<br /> <br /> ‘27 ಕೆ.ಜಿ ತೂಕದ 600 ಕೆ.ಜಿ ಭಾರ ಸಾಮರ್ಥ್ಯದ ಹರಿಗೋಲು ಇದಾಗಿದೆ. ಪ್ರತಿ ಹರಿಗೋಲು ನಿರ್ಮಾಣಕ್ಕೆ ₨ 5 ಸಾವಿರ ವೆಚ್ಚವಾಗಲಿದೆ.<br /> ಈ ಹರಿಗೋಲಿನಿಂದ ಮೀನುಗಾರರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಸಿಎಸ್ಐಆರ್ ವಿಜ್ಞಾನಿ ಡಾ.ಎಸ್.ಸೆಲ್ವರಾಜನ್ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>