<p><strong>ಬೆಂಗಳೂರು: ‘</strong>ಭಾಷೆಯ ಮೂಲಕವೇ ದೇಶಕ್ಕೆ ಕೀರ್ತಿ ತಂದುಕೊಟ್ಟವರು ನಮ್ಮ ಹಿರಿಯ ಸಾಹಿತಿಗಳು. ಅಂತವರ ಸಾಲಿನಲ್ಲಿ ಸಿದ್ಧಯ್ಯ ಪುರಾಣಿಕರು ಪ್ರಮುಖರು’ ಎಂದು ವಿದ್ವಾಂಸ ಪ್ರೊ. ಅ.ರಾ. ಮಿತ್ರ ಹೇಳಿದರು. </p>.<p>ಹೊಂಬಾಳೆ ಪ್ರತಿಭಾರಂಗ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ನಡೆದ ‘ಕವಿದನಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅವರು ಓದಿದ್ದು ಉರ್ದು ಭಾಷೆಯಲ್ಲಾದರೂ, ಕನ್ನಡದಲ್ಲಿ ಉತ್ಕೃಷ್ಟ ಸಾಹಿತ್ಯ ರಚಿಸಿದ್ದಾರೆ. ಬಂಗಾರದಂತಹ ವ್ಯಕ್ತಿತ್ವ ಹೊಂದಿದ್ದ ಪುರಾಣಿಕರನ್ನು ಬಂಗಾರದ ಮನುಷ್ಯ ಎಂದು ಕರೆಯಲು ಇಚ್ಛಿಸುತ್ತೆನೆ’ ಎಂದರು.</p>.<p>ಕನ್ನಡ ಉಪನ್ಯಾಸಕ ರುದ್ರೇಶ್ ಬಿ.ಅದರಂಗಿ ಅವರು ‘ಅಜ್ಜನ ಕೋಲಿದು ನನ್ನಯ ಕುದುರೆ’ ಮತ್ತು ‘ವಚನೋದ್ಯಾನ’ದ ಕೆಲವು ವಚನಗಳನ್ನು ವಾಚಿಸಿದರು. ಗಾಯಕ ದೇವೇಂದ್ರ ಕುಮಾರ ಪತ್ತಾರ್ ಅವರು ‘ಕರುಣೆಯೇ ಕಾಶಿ, ದಯೆಯೇ ಗಯೆ’ , ‘ಸುತ್ತಿರುವ ಸದ್ದಿನಲಿ ಸುತ್ತಲಿನ ಗದ್ದಲಲಿ’ ಸೇರಿದಂತೆ ಹಲವು ಕವಿತೆಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಭಾಷೆಯ ಮೂಲಕವೇ ದೇಶಕ್ಕೆ ಕೀರ್ತಿ ತಂದುಕೊಟ್ಟವರು ನಮ್ಮ ಹಿರಿಯ ಸಾಹಿತಿಗಳು. ಅಂತವರ ಸಾಲಿನಲ್ಲಿ ಸಿದ್ಧಯ್ಯ ಪುರಾಣಿಕರು ಪ್ರಮುಖರು’ ಎಂದು ವಿದ್ವಾಂಸ ಪ್ರೊ. ಅ.ರಾ. ಮಿತ್ರ ಹೇಳಿದರು. </p>.<p>ಹೊಂಬಾಳೆ ಪ್ರತಿಭಾರಂಗ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ನಡೆದ ‘ಕವಿದನಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅವರು ಓದಿದ್ದು ಉರ್ದು ಭಾಷೆಯಲ್ಲಾದರೂ, ಕನ್ನಡದಲ್ಲಿ ಉತ್ಕೃಷ್ಟ ಸಾಹಿತ್ಯ ರಚಿಸಿದ್ದಾರೆ. ಬಂಗಾರದಂತಹ ವ್ಯಕ್ತಿತ್ವ ಹೊಂದಿದ್ದ ಪುರಾಣಿಕರನ್ನು ಬಂಗಾರದ ಮನುಷ್ಯ ಎಂದು ಕರೆಯಲು ಇಚ್ಛಿಸುತ್ತೆನೆ’ ಎಂದರು.</p>.<p>ಕನ್ನಡ ಉಪನ್ಯಾಸಕ ರುದ್ರೇಶ್ ಬಿ.ಅದರಂಗಿ ಅವರು ‘ಅಜ್ಜನ ಕೋಲಿದು ನನ್ನಯ ಕುದುರೆ’ ಮತ್ತು ‘ವಚನೋದ್ಯಾನ’ದ ಕೆಲವು ವಚನಗಳನ್ನು ವಾಚಿಸಿದರು. ಗಾಯಕ ದೇವೇಂದ್ರ ಕುಮಾರ ಪತ್ತಾರ್ ಅವರು ‘ಕರುಣೆಯೇ ಕಾಶಿ, ದಯೆಯೇ ಗಯೆ’ , ‘ಸುತ್ತಿರುವ ಸದ್ದಿನಲಿ ಸುತ್ತಲಿನ ಗದ್ದಲಲಿ’ ಸೇರಿದಂತೆ ಹಲವು ಕವಿತೆಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>