‘ಕೋಣನಕುಂಟೆ ಕ್ರಾಸ್ ನಲ್ಲಿರುವ ಮಾನಸ ಚಿತ್ರ ಮಂದಿರದ ಮಾಲೀಕರಾದ ಅವರು, ಜಯನಗರದಲ್ಲಿರುವ ತಮ್ಮ ಮನೆಗೆ
ಹಣ ಸಾಗಿಸುತ್ತಿದ್ದರು. ಈ ಹಣಕ್ಕೆ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ, ಅದನ್ನು ವಶಕ್ಕೆ ಪಡೆದು ಆದಾಯ ತೆರಿಗೆ ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಸಂಚಾರಿ ದಳದ ಕಾರ್ಯನಿರ್ವಹಕ ಮ್ಯಾಜಿಸ್ಟ್ರೇಟ್ ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.