ಫ್ಲ್ಯಾಟ್ನೊಳಗೆ ಹೋಗಿದ್ದಕ್ಕಾಗಿ ರಾಕೇಶ್ ಜತೆ ಜಗಳ ತೆಗೆದಿದ್ದ ವೆಂಕಟೇಶ್ ಹಾಗೂ ಅವರ ಬೆಂಬಲಿಗರು, ಹಲ್ಲೆ ಮಾಡಿದ್ದರು. ಅದನ್ನು ಬಿಡಿಸಲು ಬಂದವರಿಗೆ ಜೀವ ಬೆದರಿಕೆವೊಡ್ಡಿದ್ದರು. ಈ ಸಂಬಂಧ ರಾಕೇಶ್ ನೀಡಿದ್ದ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ವೆಂಕಟೇಶ್ ಜತೆಗೆ ರಘು, ಮಂಜುನಾಥ್, ಮೋಹನ್ ಹಾಗೂ ಕಿರಣ್ ಸುನಂದ ಎಂಬುವರನ್ನೂ ಬಂಧಿಸಿದ್ದಾರೆ.