<p><strong>ಬೆಂಗಳೂರು:</strong> ‘ಕುವೆಂಪು ಕರ್ನಾಟಕದ ರವೀಂದ್ರನಾಥ ಟ್ಯಾಗೋರ್. ಸಾಹಿತ್ಯದ ಮೂಲಕವೇ ತತ್ವಜ್ಞಾನ ವನ್ನು ಪಸರಿಸಿದ ರಸಋಷಿ ಅವರು’ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಬಣ್ಣಿಸಿದರು.<br /> <br /> ಬೆಂಗಳೂರು ದೂರದರ್ಶನ ಕೇಂದ್ರವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ದೂರದರ್ಶನ ಚಂದನ ಪ್ರಶಸ್ತಿ 2013’ ಪ್ರದಾನ ಮಾಡಿ ಅವರು ಮಾತನಾಡಿದರು.<br /> <br /> ‘ರಾಷ್ಟ್ರಗೀತೆ ಇರುವಾಗ ನಾಡಗೀತೆ ಏಕೆ ಬೇಕು? ಎಂದು ರಾಜ್ಯಪಾಲನಾದ ಆರಂಭದ ದಿನಗಳಲ್ಲಿ ಅನಿಸಿತ್ತು. ಆದರೆ, ಕುವೆಂಪು ಹಾಗೂ ಅವರು ರಚಿಸಿದ ಕೃತಿಗಳನ್ನು ತಿಳಿದುಕೊಳ್ಳುವ ಸಲುವಾಗಿಯೇ ಮೈಸೂರಿಗೆ ತೆರಳಿದ್ದೆ. ನಾಡು ಕಂಡ ಬಹುದೊಡ್ಡ ಸಾಹಿತಿ ಅವರು’ ಎಂದು ಶ್ಲಾಘಿಸಿದರು.<br /> <br /> ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಕಮಲಾ ಹಂಪನಾ, ‘ದೂರದರ್ಶನ ಕೇಂದ್ರವು ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಅರ್ಹ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತೋಷ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.<br /> <br /> ‘ಎಲ್ಲ ಖಾಸಗಿ ಶಾಲೆಗಳನ್ನು ರಾಷ್ಟ್ರೀಕರಣಗೊಳಿಸ ಬೇಕು. ಅಲ್ಲದೇ ಸಮಾನ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕು. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ದೊರೆ ತರೆ ಇನ್ನಷ್ಟು ಸೃಜನಶೀಲ ಮನಸ್ಸುಗಳನ್ನು ಹುಟ್ಟು ಹಾಕಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.<br /> <br /> ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವ ರಾಜ್ ವಿ.ಪಾಟೀಲ, ‘5,000 ಮಂದಿ ಕುಳಿತುಕೊಳ್ಳ ಲು ಸ್ಥಳಾವಕಾಶವಿರುವಷ್ಟು ದೊಡ್ಡ ಸಭಾಂಗಣ ವೊಂ ದನ್ನು ನಗರದಲ್ಲಿ ನಿರ್ಮಾಣ ಮಾಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ’ ಎಂದರು.<br /> <br /> ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕುವೆಂಪು ಕರ್ನಾಟಕದ ರವೀಂದ್ರನಾಥ ಟ್ಯಾಗೋರ್. ಸಾಹಿತ್ಯದ ಮೂಲಕವೇ ತತ್ವಜ್ಞಾನ ವನ್ನು ಪಸರಿಸಿದ ರಸಋಷಿ ಅವರು’ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಬಣ್ಣಿಸಿದರು.<br /> <br /> ಬೆಂಗಳೂರು ದೂರದರ್ಶನ ಕೇಂದ್ರವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ದೂರದರ್ಶನ ಚಂದನ ಪ್ರಶಸ್ತಿ 2013’ ಪ್ರದಾನ ಮಾಡಿ ಅವರು ಮಾತನಾಡಿದರು.<br /> <br /> ‘ರಾಷ್ಟ್ರಗೀತೆ ಇರುವಾಗ ನಾಡಗೀತೆ ಏಕೆ ಬೇಕು? ಎಂದು ರಾಜ್ಯಪಾಲನಾದ ಆರಂಭದ ದಿನಗಳಲ್ಲಿ ಅನಿಸಿತ್ತು. ಆದರೆ, ಕುವೆಂಪು ಹಾಗೂ ಅವರು ರಚಿಸಿದ ಕೃತಿಗಳನ್ನು ತಿಳಿದುಕೊಳ್ಳುವ ಸಲುವಾಗಿಯೇ ಮೈಸೂರಿಗೆ ತೆರಳಿದ್ದೆ. ನಾಡು ಕಂಡ ಬಹುದೊಡ್ಡ ಸಾಹಿತಿ ಅವರು’ ಎಂದು ಶ್ಲಾಘಿಸಿದರು.<br /> <br /> ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಕಮಲಾ ಹಂಪನಾ, ‘ದೂರದರ್ಶನ ಕೇಂದ್ರವು ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಅರ್ಹ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತೋಷ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.<br /> <br /> ‘ಎಲ್ಲ ಖಾಸಗಿ ಶಾಲೆಗಳನ್ನು ರಾಷ್ಟ್ರೀಕರಣಗೊಳಿಸ ಬೇಕು. ಅಲ್ಲದೇ ಸಮಾನ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕು. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ದೊರೆ ತರೆ ಇನ್ನಷ್ಟು ಸೃಜನಶೀಲ ಮನಸ್ಸುಗಳನ್ನು ಹುಟ್ಟು ಹಾಕಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.<br /> <br /> ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವ ರಾಜ್ ವಿ.ಪಾಟೀಲ, ‘5,000 ಮಂದಿ ಕುಳಿತುಕೊಳ್ಳ ಲು ಸ್ಥಳಾವಕಾಶವಿರುವಷ್ಟು ದೊಡ್ಡ ಸಭಾಂಗಣ ವೊಂ ದನ್ನು ನಗರದಲ್ಲಿ ನಿರ್ಮಾಣ ಮಾಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ’ ಎಂದರು.<br /> <br /> ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>