ಕಾರವಾರ: ಹೊನ್ನಾವರದ ಮಂಕಿಯ ಕೊಪ್ಪದಮಕ್ಕಿ ಸಮುದ್ರತೀರದಲ್ಲಿ ಇತ್ತೀಚೆಗೆ ಸಿಕ್ಕ ಮೂರೂ ಮೃತದೇಹಗಳ ಗುರುತು ಪತ್ತೆಯಾಗಿದೆ. ಮೃತರನ್ನು ಬೆಂಗಳೂರಿನ ಯಶವಂತಪುರದ ಮೀನಾ ನಾಗರಾಜ್ (37), ಅವರ ಪುತ್ರಿಯರಾದ ಮೋನಿಶಾ (15) ಹಾಗೂ ಕೋಮಲಾ (12) ಎಂದು ಗುರುತಿಸಲಾಗಿದೆ.
ಮೃತ ಮೀನಾ ಅವರ ಸಹೋದರ, ಬೆಂಗಳೂರಿನ ಬಸವೇಶ್ವರನಗರದ ಜಗದೀಶ್ ಮೃತದೇಹಗಳ ಗುರುತು ಪತ್ತೆ ಹಚ್ಚಿ ಊರಿಗೆ ಒಯ್ದಿದ್ದಾರೆ. 'ಭಾವ ನಾಗರಾಜ್ ಅಕ್ಕನನ್ನು ಕೊಲೆ ಮಾಡಿದ್ದಾರೆ. ಆಕೆಗೆ ಅವರು ಚಿತ್ರಹಿಂಸೆ ನೀಡುತ್ತಿದ್ದರು' ಎಂದು ಮಂಕಿ ಠಾಣೆಯಲ್ಲಿ ಜಗದೀಶ್ ದೂರು ನೀಡಿದ್ದಾರೆ.