ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುತು ಪತ್ತೆ: ಮೃತ ಮೂವರೂ ಬೆಂಗಳೂರಿನವರು

Last Updated 16 ಮೇ 2019, 20:32 IST
ಅಕ್ಷರ ಗಾತ್ರ

ಕಾರವಾರ: ಹೊನ್ನಾವರದ ಮಂಕಿಯ ಕೊಪ್ಪದಮಕ್ಕಿ ಸಮುದ್ರತೀರದಲ್ಲಿ ಇತ್ತೀಚೆಗೆ ಸಿಕ್ಕ ಮೂರೂ ಮೃತದೇಹಗಳ ಗುರುತು ಪತ್ತೆಯಾಗಿದೆ. ಮೃತರನ್ನು ಬೆಂಗಳೂರಿನ ಯಶವಂತಪುರದ ಮೀನಾ ನಾಗರಾಜ್ (37), ಅವರ ಪುತ್ರಿಯರಾದ ಮೋನಿಶಾ (15) ಹಾಗೂ ಕೋಮಲಾ (12) ಎಂದು ಗುರುತಿಸಲಾಗಿದೆ.

ಮೃತ ಮೀನಾ ಅವರ ಸಹೋದರ, ಬೆಂಗಳೂರಿನ ಬಸವೇಶ್ವರನಗರದ ಜಗದೀಶ್ ಮೃತದೇಹಗಳ ಗುರುತು ಪತ್ತೆ ಹಚ್ಚಿ ಊರಿಗೆ ಒಯ್ದಿದ್ದಾರೆ. 'ಭಾವ ನಾಗರಾಜ್ ಅಕ್ಕನನ್ನು ಕೊಲೆ ಮಾಡಿದ್ದಾರೆ. ಆಕೆಗೆ ಅವರು ಚಿತ್ರಹಿಂಸೆ ನೀಡುತ್ತಿದ್ದರು' ಎಂದು ಮಂಕಿ ಠಾಣೆಯಲ್ಲಿ ಜಗದೀಶ್‌ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT