ಪಾಲಿಕೆಯ ಸದಸ್ಯೆ ಲಲಿತಾ ನಾರಾಯಣ ಪ್ರತಿಕ್ರಿಯಿಸಿ, ‘ಇಲ್ಲಿ ಬನ್ನೇರುಘಟ್ಟ ರಸ್ತೆಯವರೆಗೆ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಕಲ್ಯಾಣಿ ಮುಚ್ಚುವುದು ಅನಿವಾರ್ಯವಾಗಿದೆ. ಅದಷ್ಟೇ ಅಲ್ಲ ಇಲ್ಲಿನ ಬಿಬಿಎಂಪಿ ಕಚೇರಿ ಆಸುಪಾಸಿನ ಕಟ್ಟಡಗಳನ್ನೂ ತೆಗೆಯಲಾಗುತ್ತದೆ. 150 ಮೀಟರ್ ಉದ್ದದ ಮುಖ್ಯರಸ್ತೆಯಿದು. ₹150 ಕೋಟಿ ವೆಚ್ಚದಲ್ಲಿ ಟೆಂಡರು ನಡೆದಿದೆ. ಚುನಾವಣಾ ನೀತಿ ಸಂಹಿತೆ ಪ್ರಯುಕ್ತ ಕೆಲಕಾಲ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಈಗ ಮುಂದುವರಿಸಲಾಗುತ್ತಿದೆ. ಕಲ್ಯಾಣಿ ನಿರ್ವಹಣೆ ಇಲ್ಲದೇ ಕೆಟ್ಟು ಹೋಗಿತ್ತು. ಕಾಮಗಾರಿ ಮುಂದುವರಿಸುವ ದೃಷ್ಟಿಯಿಂದ ಮುಚ್ಚಬೇಕಾಯಿತು’ ಎಂದರು.