ಮಹದೇವಪುರ: ಬಿದರಹಳ್ಳಿ ಹೋಬಳಿಯ ಚೀಮಸಂದ್ರ ಗ್ರಾಮದ ಸರ್ವೆ ನಂ.77ರ ಗೋಮಾಳದಲ್ಲಿ ರಾಜಕೀಯ ಮುಖಂಡರೊಬ್ಬರು ಅನಧಿಕೃತವಾಗಿ ಬಡಾವಣೆ ನಿರ್ಮಿಸುತ್ತಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
‘ಸರ್ವೆ ನಂ.77ರಲ್ಲಿ ಒಟ್ಟು 154 ಎಕರೆ 11 ಗುಂಟೆ ಜಾಗವಿದೆ. ಈ ಜಾಗ ಗೋಮಾಳ. ಈ ಜಾಗದಲ್ಲಿ ಸ್ಥಳೀಯ ರಾಜಕೀಯ ಮುಖಂಡರು ರಾಜಾರೋಷವಾಗಿ ಬಡಾವಣೆ ನಿರ್ಮಿಸುತ್ತಿದ್ದಾರೆ. ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ಬಿಜೆಪಿ ಮುಖಂಡ ರಾಜಣ್ಣ ಆಗ್ರಹಿಸಿದರು.
‘ಗೋಮಾಳದಲ್ಲಿ 40 ಅಡಿ ಅಗಲದ ರಸ್ತೆ ನಿರ್ಮಿಸಲು ಜಾಗ ಕಾಯ್ದಿರಿಸುವಂತೆ 2007ರಲ್ಲಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ, ಈ ಜಾಗದಲ್ಲೇ ಬಡಾವಣೆ ನಿರ್ಮಾಣವಾಗುತ್ತಿದೆ’ ಎಂದು ಅವರು ದೂರಿದರು.