‘ಡಾ.ನಳಿನಿ ಅವರ ಸ್ಥಾನಕ್ಕೆ ಬಂದ ವೈದ್ಯರಿಗೆ ಯಾವುದೇ ಕರ್ತವ್ಯವನ್ನು ಹಸ್ತಾಂತರಿಸಿಲ್ಲ. ಅವರ ಅವಧಿಯಲ್ಲಿ ಹೆರಿಗೆಯಾದ ಮಕ್ಕಳ ಜನನ ಪ್ರಮಾಣ ಪತ್ರಕ್ಕೂ ಸಹಿ ಹಾಕಿಲ್ಲ. ಈಗ ಬಂದಿರುವ ವೈದ್ಯರು ನನಗೆ ಯಾವುದೇ ಕರ್ತವ್ಯ ಹೊಣೆಯನ್ನು ನೀಡದ ಕಾರಣ ಪ್ರಮಾಣ ಪತ್ರಕ್ಕೆ ನಾನು ಸಹಿ ಮಾಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಅಸಮಾಧಾನ ತೋಡಿಕೊಂಡರು ಗ್ರಾಮಸ್ಥರು.