2010ರಿಂದ ಕೆರೆಯ ಸರ್ವೇಯೇ ನಡೆದಿಲ್ಲ. ಈ ಬಗ್ಗೆ ಪಾಲಿಕೆ ಸದಸ್ಯ ಎಸ್. ಮುನಿಸ್ವಾಮಿ ಅವರನ್ನು ಕೇಳಿದಾಗ, ‘ಹೌದು, ಬಹಳ ವರ್ಷಗಳಿಂದ ಕೆರೆಯ ಸಮೀಕ್ಷೆ ನಡೆದಿಲ್ಲ. ಜಲಮೂಲದ ಸುತ್ತಲೂ ಬೇಲಿ ಹಾಕಿಸಿ, ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಕಲ್ಪಿಸಿಕೊಡಲು ಯೋಜಿಸಲಾಗಿತ್ತು. ಆದರೆ, ಕೆರೆಯ ಪಕ್ಕದಲ್ಲಿಯೇ ಸಚಿವರೊಬ್ಬರ ಜಾಗವಿದೆ. ಹಾಗಾಗಿ ಕೆರೆಗೆ ಏನೇ ಮಾಡಿದರೂ ತಡೆಯಿಲ್ಲದಂತಾಗಿದೆ’ ಎಂದು ಹೇಳಿದರು.