ಬೆಂಗಳೂರು: ಜಾಗತಿಕ ತಾಪಮಾನ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ`‘ಅರ್ಥ್ ಅವರ್’ ಅಂಗವಾಗಿ ನಗರದ ಅನೇಕ ಕಡೆಗಳಲ್ಲಿ ಶನಿವಾರ ಒಂದು ಗಂಟೆ ವಿದ್ಯುದ್ದೀಪಗಳನ್ನು ಆರಿಸಲಾಗಿತ್ತು.
ಸಂಜೆ ವಿದ್ಯುದ್ದೀಪಗಳಿಂದ ಜಗಮಗಿಸುವ ಪ್ರಮುಖ ರಸ್ತೆಗಳಲ್ಲಿ ರಾತ್ರಿ 8.30ರಿಂದ 9.30ರವರೆಗೆ ಕತ್ತಲೆ ತುಂಬಿತ್ತು. ಹಲವು ಅಪಾರ್ಟ್ಮೆಂಟ್ಗಳು, ಹೋಟೆಲ್ ಹಾಗೂ ಮನೆಗಳಲ್ಲಿ ವಿದ್ಯುದ್ದೀಪ ಆರಿಸಲಾಗಿತ್ತು.
ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಹಾಗೂ ಕಾರ್ನರ್ಸ್ಟೋನ್ ಪ್ರಾಪರ್ಟಿಸ್ ಸಂಸ್ಥೆ ಸಹಯೋಗದಲ್ಲಿ ಇಂದಿರಾನಗರದಲ್ಲಿ ಅರ್ಥ್ ಅವರ್ ಆಚರಿಸಲಾಯಿತು. ಕಳೆದ ವರ್ಷ ‘ಅರ್ಥ್ ಅವರ್’ ವೇಳೆ 42 ಮೆಗಾವಾಟ್ ವಿದ್ಯುತ್ ಉಳಿತಾಯ ಆಗಿತ್ತು. ಈ ವರ್ಷ 100 ಮೆ.ವಾ ಉಳಿತಾಯದ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.