<p>ಬೆಂಗಳೂರು: `ನದಿಗಳ ಸಂರಕ್ಷಣೆಯ ಮೂಲಕ ದೇಶದ ಸಂಸ್ಕೃತಿಯ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.<br /> <br /> ರಾಜಭವನದಲ್ಲಿ ಬುಧವಾರ ನಿಯೋಗಿ ಬುಕ್ಸ್ ಹೊರತಂದಿರುವ ಪದ್ಮಾ ಶೇಷಾದ್ರಿ ಹಾಗೂ ಪದ್ಮಾ ಮಾಲಿನಿ ಸುಂದರರಾಘವನ್ ಅವರ `ಕಾವೇರಿ~ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.<br /> <br /> `ನದಿಗಳು ಜನ ಜೀವನದ ಅವಿಭಾಜ್ಯ ಅಂಗ. ನದಿಗಳ ಮೂಲಕವೇ ನಮ್ಮ ನಾಗರಿಕತೆ ಉದಯಿಸಿದೆ. ಜೀವಕ್ಕೆ ಆಧಾರವಾದ ನೀರಿನ ಮೂಲಗಳಾದ ನದಿಗಳನ್ನು ಉಳಿಸಿಕೊಳ್ಳಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಆದರೆ ಆಧುನಿಕತೆಯಿಂದಾಗಿ ನದಿಗಳ ಮಾಲಿನ್ಯ ಹೆಚ್ಚಾಗುತ್ತಿದೆ. ದೇವ ನದಿ ಗಂಗೆ ಮಾಲಿನ್ಯದಿಂದ ಕೊಳಕಾಗಿದೆ. <br /> <br /> ಗಂಗಾನದಿ ನೀರಿನಿಂದ ಅನೇಕ ರೋಗಗಳು ಬರುವ ಮಟ್ಟಕ್ಕೆ ಇಂದು ಗಂಗೆ ಕಲುಷಿತಗೊಂಡಿದೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.<br /> <br /> `ಮಾಲಿನ್ಯಕ್ಕೆ ತುತ್ತಾಗುತ್ತಿರುವ ಕಾವೇರಿ ನದಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದ್ದು ರಾಜ್ಯದ ಎಲ್ಲರ ಜವಾಬ್ದಾರಿ. ಬರಡಾದ ನೆಲಕ್ಕೆ ಜೀವ ಚೈತನ್ಯ ತುಂಬುವ ಅದ್ಭುತ ಶಕ್ತಿ ಇರುವ ನದಿಗಳನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯವಿದೆ~ ಎಂದು ಅವರು ನುಡಿದರು.<br /> <br /> ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, `ದಕ್ಷಿಣ ಭಾರತದ ಜನ ಜೀವನದೊಂದಿಗೆ ಕಾವೇರಿ ನದಿಯ ನೇರ ಸಂಬಂಧವಿದೆ. ಇಲ್ಲಿನ ಮುಖ್ಯ ಘಟ್ಟದ ನಾಗರಿಕತೆ ಬೆಳೆದಿರುವುದೇ ಕಾವೇರಿ ನದಿಯ ತಪ್ಪಲಿನಲ್ಲಿ~ ಎಂದರು.<br /> <br /> ಪುಸ್ತಕದ ಲೇಖಕಿ ಪದ್ಮಾ ಶೇಷಾದ್ರಿ ಮಾತನಾಡಿ, `ನದಿಗಳ ಸಹಜ ಹರಿವನ್ನೇ ಆಧುನಿಕ ನಾಗರಿಕತೆ ಕಸಿದುಕೊಂಡಿದೆ. ಅಣೆಕಟ್ಟೆಗಳನ್ನು ಕಟ್ಟುವ ಮೂಲಕ ನದಿಗಳು ಸಮುದ್ರ ಸೇರುವಲ್ಲಿನ ಸಹಜ ಪ್ರಕ್ರಿಯೆಗೆ ಅಡ್ಡಿ ಮಾಡಿದಂತಾಗಿದೆ~ ಎಂದರು.<br /> <br /> ಪುಸ್ತಕದ ಮತ್ತೊಬ್ಬ ಲೇಖಕಿ ಪದ್ಮಾ ಮಾಲಿನಿ ಸುಂದರರಾಘವನ್, ನಿವೃತ್ತ ಐಎಎಸ್ ಅಧಿಕಾರಿ ಎ.ರಾಮಸ್ವಾಮಿ, ನಿಯೋಗಿ ಬುಕ್ಸ್ನ ಬಿಕಾಶ್ ನಿಯೋಗಿ ಉಪಸ್ಥಿತರಿದ್ದರು. ಪುಸ್ತಕದ ಬೆಲೆ 795 ರೂಪಾಯಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ನದಿಗಳ ಸಂರಕ್ಷಣೆಯ ಮೂಲಕ ದೇಶದ ಸಂಸ್ಕೃತಿಯ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.<br /> <br /> ರಾಜಭವನದಲ್ಲಿ ಬುಧವಾರ ನಿಯೋಗಿ ಬುಕ್ಸ್ ಹೊರತಂದಿರುವ ಪದ್ಮಾ ಶೇಷಾದ್ರಿ ಹಾಗೂ ಪದ್ಮಾ ಮಾಲಿನಿ ಸುಂದರರಾಘವನ್ ಅವರ `ಕಾವೇರಿ~ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.<br /> <br /> `ನದಿಗಳು ಜನ ಜೀವನದ ಅವಿಭಾಜ್ಯ ಅಂಗ. ನದಿಗಳ ಮೂಲಕವೇ ನಮ್ಮ ನಾಗರಿಕತೆ ಉದಯಿಸಿದೆ. ಜೀವಕ್ಕೆ ಆಧಾರವಾದ ನೀರಿನ ಮೂಲಗಳಾದ ನದಿಗಳನ್ನು ಉಳಿಸಿಕೊಳ್ಳಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಆದರೆ ಆಧುನಿಕತೆಯಿಂದಾಗಿ ನದಿಗಳ ಮಾಲಿನ್ಯ ಹೆಚ್ಚಾಗುತ್ತಿದೆ. ದೇವ ನದಿ ಗಂಗೆ ಮಾಲಿನ್ಯದಿಂದ ಕೊಳಕಾಗಿದೆ. <br /> <br /> ಗಂಗಾನದಿ ನೀರಿನಿಂದ ಅನೇಕ ರೋಗಗಳು ಬರುವ ಮಟ್ಟಕ್ಕೆ ಇಂದು ಗಂಗೆ ಕಲುಷಿತಗೊಂಡಿದೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.<br /> <br /> `ಮಾಲಿನ್ಯಕ್ಕೆ ತುತ್ತಾಗುತ್ತಿರುವ ಕಾವೇರಿ ನದಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದ್ದು ರಾಜ್ಯದ ಎಲ್ಲರ ಜವಾಬ್ದಾರಿ. ಬರಡಾದ ನೆಲಕ್ಕೆ ಜೀವ ಚೈತನ್ಯ ತುಂಬುವ ಅದ್ಭುತ ಶಕ್ತಿ ಇರುವ ನದಿಗಳನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯವಿದೆ~ ಎಂದು ಅವರು ನುಡಿದರು.<br /> <br /> ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, `ದಕ್ಷಿಣ ಭಾರತದ ಜನ ಜೀವನದೊಂದಿಗೆ ಕಾವೇರಿ ನದಿಯ ನೇರ ಸಂಬಂಧವಿದೆ. ಇಲ್ಲಿನ ಮುಖ್ಯ ಘಟ್ಟದ ನಾಗರಿಕತೆ ಬೆಳೆದಿರುವುದೇ ಕಾವೇರಿ ನದಿಯ ತಪ್ಪಲಿನಲ್ಲಿ~ ಎಂದರು.<br /> <br /> ಪುಸ್ತಕದ ಲೇಖಕಿ ಪದ್ಮಾ ಶೇಷಾದ್ರಿ ಮಾತನಾಡಿ, `ನದಿಗಳ ಸಹಜ ಹರಿವನ್ನೇ ಆಧುನಿಕ ನಾಗರಿಕತೆ ಕಸಿದುಕೊಂಡಿದೆ. ಅಣೆಕಟ್ಟೆಗಳನ್ನು ಕಟ್ಟುವ ಮೂಲಕ ನದಿಗಳು ಸಮುದ್ರ ಸೇರುವಲ್ಲಿನ ಸಹಜ ಪ್ರಕ್ರಿಯೆಗೆ ಅಡ್ಡಿ ಮಾಡಿದಂತಾಗಿದೆ~ ಎಂದರು.<br /> <br /> ಪುಸ್ತಕದ ಮತ್ತೊಬ್ಬ ಲೇಖಕಿ ಪದ್ಮಾ ಮಾಲಿನಿ ಸುಂದರರಾಘವನ್, ನಿವೃತ್ತ ಐಎಎಸ್ ಅಧಿಕಾರಿ ಎ.ರಾಮಸ್ವಾಮಿ, ನಿಯೋಗಿ ಬುಕ್ಸ್ನ ಬಿಕಾಶ್ ನಿಯೋಗಿ ಉಪಸ್ಥಿತರಿದ್ದರು. ಪುಸ್ತಕದ ಬೆಲೆ 795 ರೂಪಾಯಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>