ದೀಪಾವಳಿ ಪ್ರಯುಕ್ತ ಊರಿಗೆ ತೆರಳಿದ್ದವರು ಹಬ್ಬದ ರಜೆ ಮುಗಿಸಿ ಸೋಮವಾರ ನಗರಕ್ಕೆ ಮರಳಿದ್ದರು. ಇದರಿಂದಾಗಿ ನಾಗಸಂದ್ರ, ಪೀಣ್ಯ, ಯಶವಂತಪುರ ಪ್ರದೇಶಗಳಲ್ಲಿ ಬೆಳಗಿನ ಜಾವ ವಾಹನ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಅನೇಕರು ನಾಗಸಂದ್ರ, ಪೀಣ್ಯ ಹಾಗೂ ಯಶವಂತಪುರ ನಿಲ್ದಾಣಗಳ ಬಳಿ ಬಸ್ಸಿನಿಂದ ಇಳಿದು ಮೆಟ್ರೊ ಮೂಲಕ ಪ್ರಯಾಣಿಸಿದರು. ಇದರಿಂದಾಗಿಮೆಟ್ರೊ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕಿದವು.