<p><span style="color: #ff0000"><strong>ಬೆಂಗಳೂರಿನ ಸೌಂದರ್ಯ ಕಾಪಾಡಿಕೊಳ್ಳಿ</strong></span><br /> `ಮಧ್ಯಪ್ರದೇಶದವನಾದ ನನ್ನ ದೃಷ್ಟಿಯಲ್ಲಿ ಬೆಂಗಳೂರು ಸುಂದರ ನಗರ. ಕರ್ನಾಟಕ ಉತ್ತಮ ರಾಜ್ಯ. ಬೆಳವಣಿಗೆಯ ಭರಾಟೆಯಲ್ಲಿ ಬೆಂಗಳೂರಿನ ಸೌಂದರ್ಯ ಹಾಳಾಗದಂತೆ ಎಚ್ಚರ ವಹಿಸಿ. ವ್ಯವಸ್ಥಿತವಾಗಿ ವೈಜ್ಞಾನಿಕವಾಗಿ ಬೆಳವಣಿಗೆ ಆಗುವಂತೆ ನೋಡಿಕೊಳ್ಳಿ.~<br /> <strong>- ಕಮಲ್ನಾಥ್, ಕೇಂದ್ರ ನಗರಾಭಿವೃದ್ಧಿ ಸಚಿವ</strong><br /> <br /> <span style="color: #ff0000"><strong>ಗರಿಷ್ಠ ಪ್ರಯೋಜನ ಪಡೆದುಕೊಳ್ಳಿ</strong></span><br /> `ನಾಗರಿಕರು ಸುರಕ್ಷತೆಗೆ ಸಂಬಂಧಿಸಿದಂತೆ ಮೆಟ್ರೊ ನಿಗಮ ವಿಧಿಸಿರುವ ನಿಬಂಧನೆಗಳನ್ನು ಪಾಲಿಸಬೇಕು. ನಿಲ್ದಾಣ ಮತ್ತು ರೈಲುಗಳ ಒಳಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮೆಟ್ರೊದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕು~<br /> <strong>- ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ</strong><br /> <br /> <span style="color: #ff0000"><strong>ಪ್ರಾಣತೆತ್ತ ಕಾರ್ಮಿಕರಿಗೆ ನಮನ</strong></span><br /> ಮೆಟ್ರೊ ಕನಸು ನನಸಾಗಲು ಹಗಲು ರಾತ್ರಿ ದುಡಿದಿದ್ದಲ್ಲದೇ ತಮ್ಮ ಪ್ರಾಣವನ್ನೂ ಕಳೆದುಕೊಂಡ ಕಾರ್ಮಿಕರಿಗೆ ನನ್ನ ಅನಂತ ನಮನಗಳು.<br /> <strong>- ಎಸ್.ಸುರೇಶಕುಮಾರ್, ಕಾನೂನು ಸಚಿವ</strong></p>.<p><span style="color: #ff0000"><strong>ಮೆಟ್ರೊ ಬಳಕೆ ಹೆಚ್ಚಾಗಲಿ</strong></span><br /> ದ್ವಿಚಕ್ರ ವಾಹನ, ಕಾರುಗಳ ಬಳಕೆಯನ್ನು ಸಾಧ್ಯವಾದ ಮಟ್ಟಿಗೆ ಕಡಿಮೆ ಮಾಡಬೇಕು. ಮೆಟ್ರೊ ಖಾಸಗಿ ವಾಹನದಷ್ಟೇ ಆರಾಮದಾಯಕ ಅನುಭವ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಮೆಟ್ರೊ ಬಳಕೆಗೆ ಹೆಚ್ಚು ಜನ ಮುಂದಾಗಬೇಕು. <br /> <strong>- ಜ್ಯೋತಿ ಪ್ರಕಾಶ್ ಮಿರ್ಜಿ, ನಗರ ಪೊಲೀಸ್ ಕಮಿಷನರ್</strong><br /> <br /> ನಮ್ಮ ಮೆಟ್ರೊ ನಮ್ಮ ಆಸ್ತಿ. ಅದರ ರಕ್ಷಣೆ ನಮ್ಮ ಕರ್ತವ್ಯ. ಸಾರ್ವಜನಿಕರು ಯಾವುದೇ ತೊಂದರೆ ಉಂಟಾಗದ ರೀತಿಯಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕಿದೆ.<br /> <strong>- ಸುಧಾಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ</strong><br /> <br /> ಕೊನೆಗೂ ಮೆಟ್ರೊ ಸಂಚಾರ ಆರಂಭವಾಗಿರುವುದು ಖುಷಿ ತಂದಿದೆ. ಆದರೆ ಆಗಬೇಕಾದ ಕಾರ್ಯ ಬಹಳಷ್ಟಿದೆ. ಸರ್ಕಾರ ಆದಷ್ಟು ಬೇಗ ಮೆಟ್ರೊ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. <br /> <strong>- ನೆ.ಲ.ನರೇಂದ್ರಬಾಬು, ಶಾಸಕ</strong><br /> <br /> ಮೆಟ್ರೊ ರೈಲು ಎಲ್ಲ ಮಾರ್ಗಗಳಲ್ಲಿ ಸಂಚರಿಸುವಂತಾದರೆ ಸುಮಾರು 15 ಲಕ್ಷ ಜನ ರಸ್ತೆಯಲ್ಲಿ ಸಂಚರಿಸುವುದು ತಪ್ಪುತ್ತದೆ. ಇಬ್ಬರಿಗೆ ಒಂದು ವಾಹನ ಎಂದು ಅಂದಾಜಿಸಿದರೂ ಸುಮಾರು 7 ಲಕ್ಷ ವಾಹನಗಳ ಬಳಕೆ ಕಡಿಮೆಯಾಗುತ್ತದೆ. ಮೆಟ್ರೊ ಬಳಸುವ ಮೂಲಕ ಜನರು ಸಂಚಾರ ದಟ್ಟಣೆ ಕಡಿಮೆ ಮಾಡಬೇಕು.<br /> <strong>- ಪ್ರವೀಣ್ ಸೂದ್, ಪೊಲೀಸ್ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ</strong><br /> <br /> ದೆಹಲಿಯಲ್ಲಿ ಕಂಡಿದ್ದ ಮೆಟ್ರೊ ರೈಲು ನಮ್ಮ ಊರಿಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನನ್ನ ಕೃತಜ್ಞತೆಗಳು.<br /> - ಸೈಯದ್ ಯೂಸೂಫ್, ಶಿವಾಜಿನಗರದ ವ್ಯಾಪಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="color: #ff0000"><strong>ಬೆಂಗಳೂರಿನ ಸೌಂದರ್ಯ ಕಾಪಾಡಿಕೊಳ್ಳಿ</strong></span><br /> `ಮಧ್ಯಪ್ರದೇಶದವನಾದ ನನ್ನ ದೃಷ್ಟಿಯಲ್ಲಿ ಬೆಂಗಳೂರು ಸುಂದರ ನಗರ. ಕರ್ನಾಟಕ ಉತ್ತಮ ರಾಜ್ಯ. ಬೆಳವಣಿಗೆಯ ಭರಾಟೆಯಲ್ಲಿ ಬೆಂಗಳೂರಿನ ಸೌಂದರ್ಯ ಹಾಳಾಗದಂತೆ ಎಚ್ಚರ ವಹಿಸಿ. ವ್ಯವಸ್ಥಿತವಾಗಿ ವೈಜ್ಞಾನಿಕವಾಗಿ ಬೆಳವಣಿಗೆ ಆಗುವಂತೆ ನೋಡಿಕೊಳ್ಳಿ.~<br /> <strong>- ಕಮಲ್ನಾಥ್, ಕೇಂದ್ರ ನಗರಾಭಿವೃದ್ಧಿ ಸಚಿವ</strong><br /> <br /> <span style="color: #ff0000"><strong>ಗರಿಷ್ಠ ಪ್ರಯೋಜನ ಪಡೆದುಕೊಳ್ಳಿ</strong></span><br /> `ನಾಗರಿಕರು ಸುರಕ್ಷತೆಗೆ ಸಂಬಂಧಿಸಿದಂತೆ ಮೆಟ್ರೊ ನಿಗಮ ವಿಧಿಸಿರುವ ನಿಬಂಧನೆಗಳನ್ನು ಪಾಲಿಸಬೇಕು. ನಿಲ್ದಾಣ ಮತ್ತು ರೈಲುಗಳ ಒಳಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮೆಟ್ರೊದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕು~<br /> <strong>- ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ</strong><br /> <br /> <span style="color: #ff0000"><strong>ಪ್ರಾಣತೆತ್ತ ಕಾರ್ಮಿಕರಿಗೆ ನಮನ</strong></span><br /> ಮೆಟ್ರೊ ಕನಸು ನನಸಾಗಲು ಹಗಲು ರಾತ್ರಿ ದುಡಿದಿದ್ದಲ್ಲದೇ ತಮ್ಮ ಪ್ರಾಣವನ್ನೂ ಕಳೆದುಕೊಂಡ ಕಾರ್ಮಿಕರಿಗೆ ನನ್ನ ಅನಂತ ನಮನಗಳು.<br /> <strong>- ಎಸ್.ಸುರೇಶಕುಮಾರ್, ಕಾನೂನು ಸಚಿವ</strong></p>.<p><span style="color: #ff0000"><strong>ಮೆಟ್ರೊ ಬಳಕೆ ಹೆಚ್ಚಾಗಲಿ</strong></span><br /> ದ್ವಿಚಕ್ರ ವಾಹನ, ಕಾರುಗಳ ಬಳಕೆಯನ್ನು ಸಾಧ್ಯವಾದ ಮಟ್ಟಿಗೆ ಕಡಿಮೆ ಮಾಡಬೇಕು. ಮೆಟ್ರೊ ಖಾಸಗಿ ವಾಹನದಷ್ಟೇ ಆರಾಮದಾಯಕ ಅನುಭವ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಮೆಟ್ರೊ ಬಳಕೆಗೆ ಹೆಚ್ಚು ಜನ ಮುಂದಾಗಬೇಕು. <br /> <strong>- ಜ್ಯೋತಿ ಪ್ರಕಾಶ್ ಮಿರ್ಜಿ, ನಗರ ಪೊಲೀಸ್ ಕಮಿಷನರ್</strong><br /> <br /> ನಮ್ಮ ಮೆಟ್ರೊ ನಮ್ಮ ಆಸ್ತಿ. ಅದರ ರಕ್ಷಣೆ ನಮ್ಮ ಕರ್ತವ್ಯ. ಸಾರ್ವಜನಿಕರು ಯಾವುದೇ ತೊಂದರೆ ಉಂಟಾಗದ ರೀತಿಯಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕಿದೆ.<br /> <strong>- ಸುಧಾಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ</strong><br /> <br /> ಕೊನೆಗೂ ಮೆಟ್ರೊ ಸಂಚಾರ ಆರಂಭವಾಗಿರುವುದು ಖುಷಿ ತಂದಿದೆ. ಆದರೆ ಆಗಬೇಕಾದ ಕಾರ್ಯ ಬಹಳಷ್ಟಿದೆ. ಸರ್ಕಾರ ಆದಷ್ಟು ಬೇಗ ಮೆಟ್ರೊ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. <br /> <strong>- ನೆ.ಲ.ನರೇಂದ್ರಬಾಬು, ಶಾಸಕ</strong><br /> <br /> ಮೆಟ್ರೊ ರೈಲು ಎಲ್ಲ ಮಾರ್ಗಗಳಲ್ಲಿ ಸಂಚರಿಸುವಂತಾದರೆ ಸುಮಾರು 15 ಲಕ್ಷ ಜನ ರಸ್ತೆಯಲ್ಲಿ ಸಂಚರಿಸುವುದು ತಪ್ಪುತ್ತದೆ. ಇಬ್ಬರಿಗೆ ಒಂದು ವಾಹನ ಎಂದು ಅಂದಾಜಿಸಿದರೂ ಸುಮಾರು 7 ಲಕ್ಷ ವಾಹನಗಳ ಬಳಕೆ ಕಡಿಮೆಯಾಗುತ್ತದೆ. ಮೆಟ್ರೊ ಬಳಸುವ ಮೂಲಕ ಜನರು ಸಂಚಾರ ದಟ್ಟಣೆ ಕಡಿಮೆ ಮಾಡಬೇಕು.<br /> <strong>- ಪ್ರವೀಣ್ ಸೂದ್, ಪೊಲೀಸ್ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ</strong><br /> <br /> ದೆಹಲಿಯಲ್ಲಿ ಕಂಡಿದ್ದ ಮೆಟ್ರೊ ರೈಲು ನಮ್ಮ ಊರಿಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನನ್ನ ಕೃತಜ್ಞತೆಗಳು.<br /> - ಸೈಯದ್ ಯೂಸೂಫ್, ಶಿವಾಜಿನಗರದ ವ್ಯಾಪಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>