<p>ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಮಾತ್ರ ಕಂಡು ಬರುವ ‘ಜಾಲರಿ’ ಮರ ಈಗ ತನ್ನ ಸುವಾಸಿತ ಹೂಗಳ ಸುಗಂಧದಿಂದ ನಳನಳಿಸುತ್ತಿದೆ. <br /> <br /> ವೈಜ್ಞಾನಿಕವಾಗಿ ಶೋರಿಯಾ ಟಲುರಾ ಎಂದು ಹೆಸರಿಸಲಾದ ಈ ಮರವು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣೆ ಸಂಘಟನೆಯ ಕೆಂಪು ಪಟ್ಟಿಯಲ್ಲಿ ಈ ಮರವು ಸ್ಥಾನ ಪಡೆದಿದ್ದು, ನಗರದ ನಿರಂತರ ‘ಅಭಿವೃದ್ಧಿ’ಯಿಂದಾಗಿ ಅಳಿವಿನಂಚಿಗೆ ತಲುಪಿದೆ. ಆದರೆ ಜಾಲರಿ ಮರವು ಈಗ ಹಸಿರನ್ನು ಮೈಮೇಲೆ ಹೊದ್ದು ನಿಂತಿದೆ. <br /> <br /> ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಐಎನ್ಸಿಇಆರ್ಟಿ) ಅಧ್ಯಕ್ಷ ಅ.ನ.ಯಲ್ಲಪ್ಪರೆಡ್ಡಿ ಅವರು ಬುಧವಾರ ಕೆಲವೇ ಕೆಲವು ಮರಗಳಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಮಾಧ್ಯಮದವರನ್ನು ಕರೆದೊಯ್ದು ಈ ಬಗ್ಗೆ ಮಾಹಿತಿ ನೀಡಿದರು.<br /> <br /> ಈ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ ಅವರು, ಈ ಮರವು ಇಲ್ಲಿಯದೇ ಆಗಿರುವುದರಿಂದ ಇದನ್ನು ‘ಬೆಂಗಳೂರಿನ ಹೆಮ್ಮೆ’ ಎಂದು ಘೋಷಿಸುವಂತೆ ಒತ್ತಾಯಿಸಿದರು. <br /> <br /> ಐಎನ್ಸಿಇಆರ್ಟಿಯು ಲಾಲ್ಬಾಗ್, ಕಬ್ಬನ್ ಪಾರ್ಕ್ನಲ್ಲಿ ಈ ಸಸಿಗಳನ್ನು ನೆಡಲು ಬಯಸಿದೆ ಎಂದೂ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಮಾತ್ರ ಕಂಡು ಬರುವ ‘ಜಾಲರಿ’ ಮರ ಈಗ ತನ್ನ ಸುವಾಸಿತ ಹೂಗಳ ಸುಗಂಧದಿಂದ ನಳನಳಿಸುತ್ತಿದೆ. <br /> <br /> ವೈಜ್ಞಾನಿಕವಾಗಿ ಶೋರಿಯಾ ಟಲುರಾ ಎಂದು ಹೆಸರಿಸಲಾದ ಈ ಮರವು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣೆ ಸಂಘಟನೆಯ ಕೆಂಪು ಪಟ್ಟಿಯಲ್ಲಿ ಈ ಮರವು ಸ್ಥಾನ ಪಡೆದಿದ್ದು, ನಗರದ ನಿರಂತರ ‘ಅಭಿವೃದ್ಧಿ’ಯಿಂದಾಗಿ ಅಳಿವಿನಂಚಿಗೆ ತಲುಪಿದೆ. ಆದರೆ ಜಾಲರಿ ಮರವು ಈಗ ಹಸಿರನ್ನು ಮೈಮೇಲೆ ಹೊದ್ದು ನಿಂತಿದೆ. <br /> <br /> ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಐಎನ್ಸಿಇಆರ್ಟಿ) ಅಧ್ಯಕ್ಷ ಅ.ನ.ಯಲ್ಲಪ್ಪರೆಡ್ಡಿ ಅವರು ಬುಧವಾರ ಕೆಲವೇ ಕೆಲವು ಮರಗಳಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಮಾಧ್ಯಮದವರನ್ನು ಕರೆದೊಯ್ದು ಈ ಬಗ್ಗೆ ಮಾಹಿತಿ ನೀಡಿದರು.<br /> <br /> ಈ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ ಅವರು, ಈ ಮರವು ಇಲ್ಲಿಯದೇ ಆಗಿರುವುದರಿಂದ ಇದನ್ನು ‘ಬೆಂಗಳೂರಿನ ಹೆಮ್ಮೆ’ ಎಂದು ಘೋಷಿಸುವಂತೆ ಒತ್ತಾಯಿಸಿದರು. <br /> <br /> ಐಎನ್ಸಿಇಆರ್ಟಿಯು ಲಾಲ್ಬಾಗ್, ಕಬ್ಬನ್ ಪಾರ್ಕ್ನಲ್ಲಿ ಈ ಸಸಿಗಳನ್ನು ನೆಡಲು ಬಯಸಿದೆ ಎಂದೂ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>