ಒಡಿಶಾ ಮೂಲದ ದಿಲೀಪ್ (30), ರಶ್ಮಿತ್ ದೀಪ್ (25), ಮಿಲೆಲ್ಲಾ ಬೊರಿಹಾ (35) ಸುರೇಶ್ ಬೊಹಿರಾ (40) ಅವರು ಜೀತದಿಂದ ವಿಮುಕ್ತರಾದವರು. ಗ್ರಾಮದ ಇಟ್ಟಿಗೆ ಕಾರ್ಖಾನೆಯ ಮಾಲೀಕ ಸಿದ್ದರಾಜು ಹಾಗೂ ಆತನ ಸಂಬಂಧಿ ರಂಜಿತ್ ಎಂಬುವರು ಒಂದು ವರ್ಷದಿಂದ ಈ ನಾಲ್ವರನ್ನು ಗೃಹ ಬಂಧನದಲ್ಲಿರಿಸಿ ಜೀತ ಮಾಡಿಸಿಕೊಳ್ಳುತ್ತಿರುವ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ.