<p><strong>ಬೆಂಗಳೂರು:</strong> ಹೊಂಗಸಂದ್ರ ಸಮೀಪದ ಮುನೇಶ್ವರಲೇಔಟ್ನಲ್ಲಿ ಸೋದರಿಯರಿಬ್ಬರು ಒಂದೇ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.<br /> <br /> ಚನ್ನಸಂದ್ರದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ತೇಜಸ್ವಿನಿ (22) ಹಾಗೂ ಅವರ ತಂಗಿ ರಂಜಿತಾ (20) ಮೃತರು. ಸೋಮವಾರ ರಾತ್ರಿ 12ರಿಂದ ಬೆಳಗಿನ ಜಾವ 4ರ ಅಂತರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.<br /> <br /> ಅವರ ತಂದೆ ಮಲ್ಲೇಶಪ್ಪ, ಮುನೇಶ್ವರ ಲೇಔಟ್ನಲ್ಲೇ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ.<br /> <br /> ‘ತೇಜಸ್ವಿನಿಗೆ ಮದುವೆ ಮಾಡಲು ನಿರ್ಧರಿಸಿದ್ದೆವು. ಅದಕ್ಕೆ ಒಪ್ಪದ ಆಕೆ, ತಾನು ಕಾಲೇಜಿನಲ್ಲಿ ಒಬ್ಬಾತನನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿದಳು. ಈ ನಡುವೆ ರಂಜಿತಾಳೂ ತಾನು ಸಹ ಹುಡುಗನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದಳು. ಪ್ರೀತಿಸಿದವನ ಜತೆಯೇ ಮದುವೆ ಮಾಡುವಂತೆ ಕೆಲ ದಿನಗಳಿಂದ ಇಬ್ಬರೂ ಹಟಕ್ಕೆ ಬಿದ್ದಿದ್ದರು’ ಎಂದು ಮೃತರ ತಂದೆ ಮಲ್ಲೇಶಪ್ಪ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದರು.<br /> <br /> ‘ಸೋಮವಾರ ರಾತ್ರಿ ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಆಯಿತು. ಆಗ ನಾಳೆ ಆ ಇಬ್ಬರೂ ಹುಡುಗರನ್ನು ಮಡಿವಾಳ ಠಾಣೆಗೆ ಕರೆದುಕೊಂಡು ಬನ್ನಿ. ಪೊಲೀಸರ ಸಮ್ಮುಖದಲ್ಲೇ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದೆ. ಇಷ್ಟೆಲ್ಲ ಮಾತುಕತೆ ಆದ ಮೇಲೆ ಮಲಗುವುದಾಗಿ ಇಬ್ಬರೂ ಕೋಣೆಗೆ ಹೋದರು’ ಎಂದು ಮಲ್ಲೇಶಪ್ಪ ಪೊಲೀಸರಿಗೆ ತಿಳಿಸಿದ್ದಾರೆ.</p>.<p>ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮಲ್ಲೇಶಪ್ಪ ಅವರು ಮೂತ್ರ ವಿಸರ್ಜನೆಗೆ ಎಚ್ಚರಗೊಂಡಿದ್ದಾರೆ. ಒಮ್ಮೆ ಮಕ್ಕಳನ್ನು ನೋಡಿ ಬರಲು ಅವರು ಕೋಣೆಗೆ ಹೋದಾಗ ಇಬ್ಬರೂ ಫ್ಯಾನ್ಗೆ ಸೀರೆಯಿಂದ ನೇಣು ಬಿಗಿದುಕೊಂಡಿರುವುದನ್ನು ಕಂಡು ಚೀರಿಕೊಂಡಿದ್ದಾರೆ.</p>.<p>ನಂತರ ಸ್ಥಳೀಯರ ನೆರವಿನಿಂದ ಮಕ್ಕಳನ್ನು ಕುಣಿಕೆಯಿಂದ ಕೆಳಗಿಳಿಸಿ, ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗಮಧ್ಯೆ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.<br /> <br /> <strong>ಪತ್ರ ಬರೆದಿಟ್ಟಿದ್ದಾರೆ:</strong> ‘ರಾತ್ರಿ ಕೋಣೆ ಸೇರಿದ ಅಕ್ಕ–ತಂಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಪತ್ರ ಬರೆದಿಟ್ಟಿದ್ದಾರೆ.<br /> ‘ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಅಪ್ಪ–ಅಮ್ಮ ನಮ್ಮನ್ನು ಕ್ಷಮಿಸಿ’ ಎಂದು ಅದರಲ್ಲಿ ಹೇಳಿದ್ದಾರೆ. ಘಟನೆ ಸಂಬಂಧ ಮಡಿವಾಳ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ <em><strong>‘ಪ್ರಜಾವಾಣಿ’</strong>ಗೆ</em> ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹೊಂಗಸಂದ್ರ ಸಮೀಪದ ಮುನೇಶ್ವರಲೇಔಟ್ನಲ್ಲಿ ಸೋದರಿಯರಿಬ್ಬರು ಒಂದೇ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.<br /> <br /> ಚನ್ನಸಂದ್ರದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ತೇಜಸ್ವಿನಿ (22) ಹಾಗೂ ಅವರ ತಂಗಿ ರಂಜಿತಾ (20) ಮೃತರು. ಸೋಮವಾರ ರಾತ್ರಿ 12ರಿಂದ ಬೆಳಗಿನ ಜಾವ 4ರ ಅಂತರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.<br /> <br /> ಅವರ ತಂದೆ ಮಲ್ಲೇಶಪ್ಪ, ಮುನೇಶ್ವರ ಲೇಔಟ್ನಲ್ಲೇ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ.<br /> <br /> ‘ತೇಜಸ್ವಿನಿಗೆ ಮದುವೆ ಮಾಡಲು ನಿರ್ಧರಿಸಿದ್ದೆವು. ಅದಕ್ಕೆ ಒಪ್ಪದ ಆಕೆ, ತಾನು ಕಾಲೇಜಿನಲ್ಲಿ ಒಬ್ಬಾತನನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿದಳು. ಈ ನಡುವೆ ರಂಜಿತಾಳೂ ತಾನು ಸಹ ಹುಡುಗನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದಳು. ಪ್ರೀತಿಸಿದವನ ಜತೆಯೇ ಮದುವೆ ಮಾಡುವಂತೆ ಕೆಲ ದಿನಗಳಿಂದ ಇಬ್ಬರೂ ಹಟಕ್ಕೆ ಬಿದ್ದಿದ್ದರು’ ಎಂದು ಮೃತರ ತಂದೆ ಮಲ್ಲೇಶಪ್ಪ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದರು.<br /> <br /> ‘ಸೋಮವಾರ ರಾತ್ರಿ ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಆಯಿತು. ಆಗ ನಾಳೆ ಆ ಇಬ್ಬರೂ ಹುಡುಗರನ್ನು ಮಡಿವಾಳ ಠಾಣೆಗೆ ಕರೆದುಕೊಂಡು ಬನ್ನಿ. ಪೊಲೀಸರ ಸಮ್ಮುಖದಲ್ಲೇ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದೆ. ಇಷ್ಟೆಲ್ಲ ಮಾತುಕತೆ ಆದ ಮೇಲೆ ಮಲಗುವುದಾಗಿ ಇಬ್ಬರೂ ಕೋಣೆಗೆ ಹೋದರು’ ಎಂದು ಮಲ್ಲೇಶಪ್ಪ ಪೊಲೀಸರಿಗೆ ತಿಳಿಸಿದ್ದಾರೆ.</p>.<p>ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮಲ್ಲೇಶಪ್ಪ ಅವರು ಮೂತ್ರ ವಿಸರ್ಜನೆಗೆ ಎಚ್ಚರಗೊಂಡಿದ್ದಾರೆ. ಒಮ್ಮೆ ಮಕ್ಕಳನ್ನು ನೋಡಿ ಬರಲು ಅವರು ಕೋಣೆಗೆ ಹೋದಾಗ ಇಬ್ಬರೂ ಫ್ಯಾನ್ಗೆ ಸೀರೆಯಿಂದ ನೇಣು ಬಿಗಿದುಕೊಂಡಿರುವುದನ್ನು ಕಂಡು ಚೀರಿಕೊಂಡಿದ್ದಾರೆ.</p>.<p>ನಂತರ ಸ್ಥಳೀಯರ ನೆರವಿನಿಂದ ಮಕ್ಕಳನ್ನು ಕುಣಿಕೆಯಿಂದ ಕೆಳಗಿಳಿಸಿ, ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗಮಧ್ಯೆ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.<br /> <br /> <strong>ಪತ್ರ ಬರೆದಿಟ್ಟಿದ್ದಾರೆ:</strong> ‘ರಾತ್ರಿ ಕೋಣೆ ಸೇರಿದ ಅಕ್ಕ–ತಂಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಪತ್ರ ಬರೆದಿಟ್ಟಿದ್ದಾರೆ.<br /> ‘ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಅಪ್ಪ–ಅಮ್ಮ ನಮ್ಮನ್ನು ಕ್ಷಮಿಸಿ’ ಎಂದು ಅದರಲ್ಲಿ ಹೇಳಿದ್ದಾರೆ. ಘಟನೆ ಸಂಬಂಧ ಮಡಿವಾಳ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ <em><strong>‘ಪ್ರಜಾವಾಣಿ’</strong>ಗೆ</em> ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>