‘ನಟನೆ ಸರಿಯಿಲ್ಲ ಎಂಬ ಕಾರಣ ನೀಡಿ ಚಿತ್ರತಂಡದಿಂದ ಹೊರಹೋಗುವಂತೆ ಸುರೇಶ್ ಅವರು ನನಗೆ ಸೂಚಿಸಿದ್ದಾರೆ. ಈ ರೀತಿ ಅನ್ಯಾಯ ಚಿತ್ರರಂಗದ ಬೇರೆ ಯಾವ ಹೆಣ್ಣುಮಗಳಿಗೂ ಆಗಬಾರದು ಎಂಬ ಕಾರಣಕ್ಕೆ ಈ ವಿಚಾರ ಹಂಚಿಕೊಳ್ಳುತ್ತಿದ್ದೇನೆ’ ಎಂದು ಆವಂತಿಕಾ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದರು. ಈ ವಿಚಾರ ವಿವಾದದ ಸ್ವರೂಪ ಪಡೆದಿತ್ತು. ಇದನ್ನು ಗಮನಿಸಿದ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ನಟಿ ಹಾಗೂ ನಿರ್ಮಾಪಕರನ್ನು ಕರೆದು ಗುರುವಾರ ಸಂಧಾನ ಸಭೆ ನಡೆಸಿದರು.