ಬೆಂಗಳೂರು: ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಇದೇ ೧೭ ರಂದು ‘ಸಿನಿಮಾ ಉದ್ಯಮ -ಮಾಧ್ಯಮ’ ಕುರಿತ ವಿಚಾರ ಸಂಕಿರಣವನ್ನು ವಾರ್ತಾ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದು, ಇದರಲ್ಲಿ ಭಾಗವಹಿಸುವ ಆಸಕ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪಾಸ್ಗಳನ್ನು ವಿತರಿಸಲಿದೆ.
ಅಂಬೇಡ್ಕರ್ ರಸ್ತೆಯ ವಿಶ್ವೇ ಶ್ವರಯ್ಯ ಕೇಂದ್ರದಲ್ಲಿನ ಮಾಧ್ಯಮ ಅಕಾಡೆಮಿ ಕಚೇರಿಯಲ್ಲಿ ಪಾಸ್ ಪಡೆಯಬಹುದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎನ್.ಆರ್.ವೃತ್ತದ ಬಾದಾಮಿ ಹೌಸ್ನಲ್ಲಿನ ಚಲನಚಿತ್ರ ಅಕಾಡೆಮಿ ಯಲ್ಲೂ ಪಾಸ್ಗಳನ್ನು ಪಡೆಯ ಬಹುದು ಎಂದು ಪ್ರಕಟಣೆ ತಿಳಿಸಿದೆ.