ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕುಂದೂರಿನ ಸರ್ವೆ ನಂಬರ್ 156ರಲ್ಲಿ 15 ಎಕರೆ ಸರ್ಕಾರಿ ಭೂಮಿಯನ್ನು ಮೋಟಮ್ಮ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್.ಹಿರೇಮಠ ಮಾರ್ಚ್ ತಿಂಗಳಿನಲ್ಲಿ ಆರೋಪಿಸಿದ್ದರು. ‘1980–81ರಲ್ಲಿ ಕಾನೂನು ಪ್ರಕಾರವೇ ಈ ಜಾಗ ಮಂಜೂರು ಆಗಿತ್ತು’ ಎಂದು ಮೋಟಮ್ಮ ತಿಳಿಸಿದ್ದರು.