<p><strong>ಪ್ರಜಾವಾಣಿ ಫಲಶ್ರುತಿ</strong></p>.<p><strong>ಮಹದೇವಪುರ</strong>: ವೈಟ್ಫೀಲ್ಡ್ ಸಮೀಪದ ಇಸಿಸಿ ರಸ್ತೆಯ ಪಕ್ಕದ ಚರಂಡಿ ನಿರ್ಮಾಣಕ್ಕಾಗಿ ಬಿಬಿಎಂಪಿಯು ನಡುರಸ್ತೆಯಲ್ಲಿ ಸುರಿದಿದ್ದ ಜಲ್ಲಿ ಮತ್ತು ಮರಳು ಸಾಮಗ್ರಿಗಳನ್ನು ತೆರವುಗೊಳಿಸಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.<br /> <br /> ಒಂದು ತಿಂಗಳಿಂದಲೂ ಇಸಿಸಿ ರಸ್ತೆಯಲ್ಲಿ ಬಿಬಿಎಂಪಿಯು ಚರಂಡಿ ಕಾಮಗಾರಿಗಾಗಿ ತಂದಿದ್ದ ಜಲ್ಲಿ ಮತ್ತು ಮರಳನ್ನು ನಡು ರಸ್ತೆಯಲ್ಲಿ ಸುರಿದಿತ್ತು. ಇದರಿಂದಾಗಿ ನಿತ್ಯವೂ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು. <br /> <br /> ಈ ಬಗ್ಗೆ ಸ್ಥಳೀಯರು ಪಾಲಿಕೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕುರಿತು `ಪ್ರಜಾವಾಣಿ~ಯಲ್ಲಿ ಫೆ. 23ರಂದು `ಚರಂಡಿ ಕಾಮಗಾರಿ: ಸಂಚಾರಕ್ಕೆ ಅಡ್ಡಿ~ ಎಂಬ ಶೀರ್ಷಿಕೆಯಡಿ ಚಿತ್ರ ಸಮೇತ ವರದಿ ಪ್ರಕಟಗೊಂಡಿತ್ತು. ಬಳಿಕ ಎಚ್ಚೆತ್ತುಕೊಂಡ ಪಾಲಿಕೆಯು ಕೂಡಲೇ ನಡುರಸ್ತೆಯಲ್ಲಿದ್ದ ಜಲ್ಲಿ ಮತ್ತು ಮರಳು ತೆರವುಗೊಳಿಸಿದೆ. ಅಲ್ಲದೆ, ಪಾಲಿಕೆಯು ಚರಂಡಿ ಕಾಮಗಾರಿಯನ್ನೂ ಚುರುಕುಗೊಳಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರಜಾವಾಣಿ ಫಲಶ್ರುತಿ</strong></p>.<p><strong>ಮಹದೇವಪುರ</strong>: ವೈಟ್ಫೀಲ್ಡ್ ಸಮೀಪದ ಇಸಿಸಿ ರಸ್ತೆಯ ಪಕ್ಕದ ಚರಂಡಿ ನಿರ್ಮಾಣಕ್ಕಾಗಿ ಬಿಬಿಎಂಪಿಯು ನಡುರಸ್ತೆಯಲ್ಲಿ ಸುರಿದಿದ್ದ ಜಲ್ಲಿ ಮತ್ತು ಮರಳು ಸಾಮಗ್ರಿಗಳನ್ನು ತೆರವುಗೊಳಿಸಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.<br /> <br /> ಒಂದು ತಿಂಗಳಿಂದಲೂ ಇಸಿಸಿ ರಸ್ತೆಯಲ್ಲಿ ಬಿಬಿಎಂಪಿಯು ಚರಂಡಿ ಕಾಮಗಾರಿಗಾಗಿ ತಂದಿದ್ದ ಜಲ್ಲಿ ಮತ್ತು ಮರಳನ್ನು ನಡು ರಸ್ತೆಯಲ್ಲಿ ಸುರಿದಿತ್ತು. ಇದರಿಂದಾಗಿ ನಿತ್ಯವೂ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು. <br /> <br /> ಈ ಬಗ್ಗೆ ಸ್ಥಳೀಯರು ಪಾಲಿಕೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕುರಿತು `ಪ್ರಜಾವಾಣಿ~ಯಲ್ಲಿ ಫೆ. 23ರಂದು `ಚರಂಡಿ ಕಾಮಗಾರಿ: ಸಂಚಾರಕ್ಕೆ ಅಡ್ಡಿ~ ಎಂಬ ಶೀರ್ಷಿಕೆಯಡಿ ಚಿತ್ರ ಸಮೇತ ವರದಿ ಪ್ರಕಟಗೊಂಡಿತ್ತು. ಬಳಿಕ ಎಚ್ಚೆತ್ತುಕೊಂಡ ಪಾಲಿಕೆಯು ಕೂಡಲೇ ನಡುರಸ್ತೆಯಲ್ಲಿದ್ದ ಜಲ್ಲಿ ಮತ್ತು ಮರಳು ತೆರವುಗೊಳಿಸಿದೆ. ಅಲ್ಲದೆ, ಪಾಲಿಕೆಯು ಚರಂಡಿ ಕಾಮಗಾರಿಯನ್ನೂ ಚುರುಕುಗೊಳಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>