<p><strong>ಬೆಂಗಳೂರು:</strong> ಮೇಯರ್ ನಿಧಿ ಹಂಚಿಕೆಗೆ ಸಂಬಂಧಪಟ್ಟಂತೆ ಸಚಿವರೊಬ್ಬರ ತಾಕೀತಿನಿಂದ ಬೇಸತ್ತ ಮೇಯರ್ ಪಿ.ಶಾರದಮ್ಮ ಅವರು ರಾಜೀನಾಮೆ ನೀಡಲು ಮುಂದಾದ ಪ್ರಸಂಗ ಗುರುವಾರ ನಡೆದಿದೆ ಎಂದು ತಿಳಿದುಬಂದಿದೆ.<br /> <br /> ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಡೆದ ಮೇಯರ್ ನಿಧಿ ಹಂಚಿಕೆ ಸಂಬಂಧಪಟ್ಟ ಮಾತುಕತೆ ಸಂದರ್ಭದಲ್ಲಿ ಗೃಹ ಸಚಿವ ಆರ್.ಅಶೋಕ ಅವರ ಮಾತಿಗೆ ಬೇಸರಗೊಂಡ ಮೇಯರ್ ಕಣ್ಣೀರಿಟ್ಟು ಹೊರನಡೆದರು ಎನ್ನಲಾಗಿದೆ.<br /> <br /> ಮೇಯರ್ ನಿಧಿಯಲ್ಲಿ ಹೆಚ್ಚಿನ ಮೊತ್ತವನ್ನು ತಾವು ಸೂಚಿಸಿದವರಿಗೆ ನೀಡಬೇಕೆಂದು ಸಚಿವರು ಸೂಚಿಸಿದ್ದರು. ಆದರೆ ಇದಕ್ಕೆ ಮೇಯರ್ ಒಪ್ಪಲಿಲ್ಲ. ಇದನ್ನೇ ತರಾಟೆ ತೆಗೆದುಕೊಂಡ ಸಚಿವರು ಮೇಯರ್ ಪ್ರತಿಕ್ರಿಯೆಗೆ ತೀಕ್ಷವಾಗಿ ಉತ್ತರಿಸಿದರು ಎನ್ನಲಾಗಿದೆ. <br /> <br /> ಅಲ್ಲದೇ ಸಚಿವರು ತಾವು ಸೂಚನೆ ನೀಡಿದರಿಗೆ ಹೆಚ್ಚಿನ ಮೊತ್ತ ಕೊಡದೇ ಹೋದಲ್ಲಿ ಮೇಯರ್ ನಿಧಿಯ ಮೊತ್ತವನ್ನು ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. <br /> <br /> ಆದರೆ ಮೇಯರ್ ಇತರರಿಗೆ ಸಮನಾಗಿ ಮೊತ್ತವನ್ನು ಹಂಚುವುದಕ್ಕೆ ಬದ್ದರಾಗಿರುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಇತರರಿಗೆ ಹೆಚ್ಚಿನ ಮೊತ್ತ ನೀಡುವ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.<br /> ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಯರ್ `ಇಂತಹ ಯಾವುದೇ ಘಟನೆ ನಡೆದಿಲ್ಲ. ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸಿಲ್ಲ~ ಎಂದು ಸ್ಪಷ್ಟಪಡಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮೇಯರ್ ನಿಧಿ ಹಂಚಿಕೆಗೆ ಸಂಬಂಧಪಟ್ಟಂತೆ ಸಚಿವರೊಬ್ಬರ ತಾಕೀತಿನಿಂದ ಬೇಸತ್ತ ಮೇಯರ್ ಪಿ.ಶಾರದಮ್ಮ ಅವರು ರಾಜೀನಾಮೆ ನೀಡಲು ಮುಂದಾದ ಪ್ರಸಂಗ ಗುರುವಾರ ನಡೆದಿದೆ ಎಂದು ತಿಳಿದುಬಂದಿದೆ.<br /> <br /> ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಡೆದ ಮೇಯರ್ ನಿಧಿ ಹಂಚಿಕೆ ಸಂಬಂಧಪಟ್ಟ ಮಾತುಕತೆ ಸಂದರ್ಭದಲ್ಲಿ ಗೃಹ ಸಚಿವ ಆರ್.ಅಶೋಕ ಅವರ ಮಾತಿಗೆ ಬೇಸರಗೊಂಡ ಮೇಯರ್ ಕಣ್ಣೀರಿಟ್ಟು ಹೊರನಡೆದರು ಎನ್ನಲಾಗಿದೆ.<br /> <br /> ಮೇಯರ್ ನಿಧಿಯಲ್ಲಿ ಹೆಚ್ಚಿನ ಮೊತ್ತವನ್ನು ತಾವು ಸೂಚಿಸಿದವರಿಗೆ ನೀಡಬೇಕೆಂದು ಸಚಿವರು ಸೂಚಿಸಿದ್ದರು. ಆದರೆ ಇದಕ್ಕೆ ಮೇಯರ್ ಒಪ್ಪಲಿಲ್ಲ. ಇದನ್ನೇ ತರಾಟೆ ತೆಗೆದುಕೊಂಡ ಸಚಿವರು ಮೇಯರ್ ಪ್ರತಿಕ್ರಿಯೆಗೆ ತೀಕ್ಷವಾಗಿ ಉತ್ತರಿಸಿದರು ಎನ್ನಲಾಗಿದೆ. <br /> <br /> ಅಲ್ಲದೇ ಸಚಿವರು ತಾವು ಸೂಚನೆ ನೀಡಿದರಿಗೆ ಹೆಚ್ಚಿನ ಮೊತ್ತ ಕೊಡದೇ ಹೋದಲ್ಲಿ ಮೇಯರ್ ನಿಧಿಯ ಮೊತ್ತವನ್ನು ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. <br /> <br /> ಆದರೆ ಮೇಯರ್ ಇತರರಿಗೆ ಸಮನಾಗಿ ಮೊತ್ತವನ್ನು ಹಂಚುವುದಕ್ಕೆ ಬದ್ದರಾಗಿರುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಇತರರಿಗೆ ಹೆಚ್ಚಿನ ಮೊತ್ತ ನೀಡುವ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.<br /> ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಯರ್ `ಇಂತಹ ಯಾವುದೇ ಘಟನೆ ನಡೆದಿಲ್ಲ. ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸಿಲ್ಲ~ ಎಂದು ಸ್ಪಷ್ಟಪಡಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>