<p><strong>ಬೆಂಗಳೂರು:</strong> ನೆರೆಹೊರೆಯವರಿಗೆ ಹೊರೆಯಾಗಿ ನೆಲಕಚ್ಚಬೇಕಿದ್ದ ನೇರಳೆಮರವೊಂದು ವೃಕ್ಷಪ್ರೇಮಿಯ ಕಾಳಜಿಯಿಂದಾಗಿ ಮರುಹುಟ್ಟು ಪಡೆದಿದೆ.</p>.<p>ಆಸುಪಾಸಿನ ಮನೆಯವರು ಕಡಿಯಲು ಉದ್ದೇಶಿಸಿದ್ದ ಮರವನ್ನು ಮತ್ತೊಂದೆಡೆ ಸ್ಥಳಾಂತರಿಸುವ ಮೂಲಕ ಅದಕ್ಕೆ ಮರುಹುಟ್ಟು ನೀಡಿದ ವೃಕ್ಷಪ್ರೇಮಿ ದೇವರಾಜ್ ಅವರ ಪರಿಸರ ಕಾಳಜಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹೊಸ ಪಾಠವನ್ನೂ ಕಲಿಸಿತು.</p>.<p>ಸರ್ಜಾಪುರದಲ್ಲಿ ಗಲ್ಲಿಯೊಂದರಲ್ಲಿ ಬೆಳೆದ ನೇರಳೆ ಮರವು ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಕಾರಣಕ್ಕೆ ಅದನ್ನು ಕಡಿಯಲು ಆಸುಪಾಸಿನ ಮನೆಯವರು ನಿರ್ಧರಿಸಿದ್ದರು. ಈ ವಿಚಾರ ದೇವರಾಜ್ ಅವರ ಕಿವಿಗೆ ಬಿದ್ದಿತ್ತು. ಅವರು ಆ ಮನೆಯವರ ಮನವೊಲಿಸಿ ಆ ಮರವನ್ನು ಸ್ಥಳಾಂತರಿಸಲು ಮುಂದಾದರು.</p>.<p>ದೇವರಾಜ್ ಅವರು ಮರದ ಬುಡವನ್ನು ಸ್ವತಃ ಬಿಡಿಸಿ, ಸ್ಥಳಾಂತರಕ್ಕೆ ಸಿದ್ಧಗೊಳಿಸಿದ್ದರು. ಅದನ್ನು ಸೋಮವಾರ ಜೆಸಿಬಿ ಸಹಾಯದಿಂದ ಮೇಲಕ್ಕೆತ್ತಲಾಯಿತು. ನಂತರ ಟ್ರ್ಯಾಕ್ಟರ್ನಲ್ಲಿ ಅದನ್ನು ಸರ್ಜಾಪುರ ಸರ್ಕಾರಿ ಆಟದ ಮೈದಾನಕ್ಕೆ ಸ್ಥಳಾಂತರಿಸಿ ಅಲ್ಲಿ ಮರುನಾಟಿ ಮಾಡಲಾಯಿತು.</p>.<p>ಶಾಲಾ ವಿದ್ಯಾರ್ಥಿಗಳಲ್ಲೂ ಮರಗಳನ್ನು ಉಳಿಸುವ ಕಾಳಜಿ ಬೆಳೆಸಬೇಕು ಎಂಬ ಉದ್ದೇಶದಿಂದ ಮರ ಸ್ಥಳಾಂತರ ಪ್ರಕ್ರಿಯೆಯನ್ನು ವೀಕ್ಷಿಸಲು ಸ್ಥಳೀಯ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಯಿತು. ಸರ್ಜಾಪುರದ ಸರ್ಕಾರಿ ಪ್ರೌಢಶಾಲೆಯ 150 ವಿದ್ಯಾರ್ಥಿಗಳು ಹಾಗೂ ಸರ್ದಾರ್ ವಲ್ಲಭಬಾಯಿ ಪ್ರೌಢಶಾಲೆಯ 300 ವಿದ್ಯಾರ್ಥಿಗಳು ಈ ಇಡೀ ಪ್ರಕ್ರಿಯೆಯನ್ನು ಕಣ್ತುಂಬಿಕೊಂಡರು.</p>.<p><strong>ಯಾರು ಈ ವೃಕ್ಷಪ್ರೇಮಿ? :</strong> ‘ದೇವರಾಜ್ ಅವರು ಈ ಹಿಂದೆ ಮರಗಳನ್ನು ಕಡಿಯುವ ವೃತ್ತಿಯಲ್ಲಿ ತೊಡಗಿದ್ದರು. ಇತ್ತೀಚೆಗೆ ಈ ಕಾಯಕವನ್ನು ಸಂಪೂರ್ಣ ತ್ಯಜಿಸಿರುವ ಅವರು ಮರಗಳನ್ನು ಕಡಿಯುವ ಬದಲು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ’ ಎನ್ನುತ್ತಾರೆ ಸರ್ಜಾಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜಾಯ್.</p>.<p>‘ಮರವನ್ನು ಸ್ಥಳಾಂತರಿಸುವುದಕ್ಕೂ ಸಾವಿರಾರು ರೂಪಾಯಿ ಹಣ ಬೇಕು. ದೇವರಾಜ್ ಅವರು ಸ್ವಂತ ಹಣ ವ್ಯಯ ಮಾಡಿ ಮರಗಳ ಸ್ಥಳಾಂತರ ಮಾಡುತ್ತಾರೆ’ ಎಂದರು.</p>.<p>ನೇರಳೆ ಮರವನ್ನು ಸ್ಥಳಾಂತರಿಸುವಾಗ ಅನಿರೀಕ್ಷಿತವಾಗಿ ಸ್ಥಳಕ್ಕೆ ಬಂದ ಉದ್ಯಮಿಯೊಬ್ಬರು ಈ ಕಾರ್ಯಕ್ಕಾಗಿ ₹ 5,000 ನೀಡಿದರು.<br /> ‘ಸಾರ್ವಜನಿಕರು ಇಂತಹ ಪುಣ್ಯಕಾರ್ಯದಲ್ಲಿ ಕೈಜೋಡಿಸಿದರೆ, ದೇವರಾಜ್ ಅವರಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ’ ಎನ್ನುತ್ತಾರೆ ಜಾಯ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನೆರೆಹೊರೆಯವರಿಗೆ ಹೊರೆಯಾಗಿ ನೆಲಕಚ್ಚಬೇಕಿದ್ದ ನೇರಳೆಮರವೊಂದು ವೃಕ್ಷಪ್ರೇಮಿಯ ಕಾಳಜಿಯಿಂದಾಗಿ ಮರುಹುಟ್ಟು ಪಡೆದಿದೆ.</p>.<p>ಆಸುಪಾಸಿನ ಮನೆಯವರು ಕಡಿಯಲು ಉದ್ದೇಶಿಸಿದ್ದ ಮರವನ್ನು ಮತ್ತೊಂದೆಡೆ ಸ್ಥಳಾಂತರಿಸುವ ಮೂಲಕ ಅದಕ್ಕೆ ಮರುಹುಟ್ಟು ನೀಡಿದ ವೃಕ್ಷಪ್ರೇಮಿ ದೇವರಾಜ್ ಅವರ ಪರಿಸರ ಕಾಳಜಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹೊಸ ಪಾಠವನ್ನೂ ಕಲಿಸಿತು.</p>.<p>ಸರ್ಜಾಪುರದಲ್ಲಿ ಗಲ್ಲಿಯೊಂದರಲ್ಲಿ ಬೆಳೆದ ನೇರಳೆ ಮರವು ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಕಾರಣಕ್ಕೆ ಅದನ್ನು ಕಡಿಯಲು ಆಸುಪಾಸಿನ ಮನೆಯವರು ನಿರ್ಧರಿಸಿದ್ದರು. ಈ ವಿಚಾರ ದೇವರಾಜ್ ಅವರ ಕಿವಿಗೆ ಬಿದ್ದಿತ್ತು. ಅವರು ಆ ಮನೆಯವರ ಮನವೊಲಿಸಿ ಆ ಮರವನ್ನು ಸ್ಥಳಾಂತರಿಸಲು ಮುಂದಾದರು.</p>.<p>ದೇವರಾಜ್ ಅವರು ಮರದ ಬುಡವನ್ನು ಸ್ವತಃ ಬಿಡಿಸಿ, ಸ್ಥಳಾಂತರಕ್ಕೆ ಸಿದ್ಧಗೊಳಿಸಿದ್ದರು. ಅದನ್ನು ಸೋಮವಾರ ಜೆಸಿಬಿ ಸಹಾಯದಿಂದ ಮೇಲಕ್ಕೆತ್ತಲಾಯಿತು. ನಂತರ ಟ್ರ್ಯಾಕ್ಟರ್ನಲ್ಲಿ ಅದನ್ನು ಸರ್ಜಾಪುರ ಸರ್ಕಾರಿ ಆಟದ ಮೈದಾನಕ್ಕೆ ಸ್ಥಳಾಂತರಿಸಿ ಅಲ್ಲಿ ಮರುನಾಟಿ ಮಾಡಲಾಯಿತು.</p>.<p>ಶಾಲಾ ವಿದ್ಯಾರ್ಥಿಗಳಲ್ಲೂ ಮರಗಳನ್ನು ಉಳಿಸುವ ಕಾಳಜಿ ಬೆಳೆಸಬೇಕು ಎಂಬ ಉದ್ದೇಶದಿಂದ ಮರ ಸ್ಥಳಾಂತರ ಪ್ರಕ್ರಿಯೆಯನ್ನು ವೀಕ್ಷಿಸಲು ಸ್ಥಳೀಯ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಯಿತು. ಸರ್ಜಾಪುರದ ಸರ್ಕಾರಿ ಪ್ರೌಢಶಾಲೆಯ 150 ವಿದ್ಯಾರ್ಥಿಗಳು ಹಾಗೂ ಸರ್ದಾರ್ ವಲ್ಲಭಬಾಯಿ ಪ್ರೌಢಶಾಲೆಯ 300 ವಿದ್ಯಾರ್ಥಿಗಳು ಈ ಇಡೀ ಪ್ರಕ್ರಿಯೆಯನ್ನು ಕಣ್ತುಂಬಿಕೊಂಡರು.</p>.<p><strong>ಯಾರು ಈ ವೃಕ್ಷಪ್ರೇಮಿ? :</strong> ‘ದೇವರಾಜ್ ಅವರು ಈ ಹಿಂದೆ ಮರಗಳನ್ನು ಕಡಿಯುವ ವೃತ್ತಿಯಲ್ಲಿ ತೊಡಗಿದ್ದರು. ಇತ್ತೀಚೆಗೆ ಈ ಕಾಯಕವನ್ನು ಸಂಪೂರ್ಣ ತ್ಯಜಿಸಿರುವ ಅವರು ಮರಗಳನ್ನು ಕಡಿಯುವ ಬದಲು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ’ ಎನ್ನುತ್ತಾರೆ ಸರ್ಜಾಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜಾಯ್.</p>.<p>‘ಮರವನ್ನು ಸ್ಥಳಾಂತರಿಸುವುದಕ್ಕೂ ಸಾವಿರಾರು ರೂಪಾಯಿ ಹಣ ಬೇಕು. ದೇವರಾಜ್ ಅವರು ಸ್ವಂತ ಹಣ ವ್ಯಯ ಮಾಡಿ ಮರಗಳ ಸ್ಥಳಾಂತರ ಮಾಡುತ್ತಾರೆ’ ಎಂದರು.</p>.<p>ನೇರಳೆ ಮರವನ್ನು ಸ್ಥಳಾಂತರಿಸುವಾಗ ಅನಿರೀಕ್ಷಿತವಾಗಿ ಸ್ಥಳಕ್ಕೆ ಬಂದ ಉದ್ಯಮಿಯೊಬ್ಬರು ಈ ಕಾರ್ಯಕ್ಕಾಗಿ ₹ 5,000 ನೀಡಿದರು.<br /> ‘ಸಾರ್ವಜನಿಕರು ಇಂತಹ ಪುಣ್ಯಕಾರ್ಯದಲ್ಲಿ ಕೈಜೋಡಿಸಿದರೆ, ದೇವರಾಜ್ ಅವರಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ’ ಎನ್ನುತ್ತಾರೆ ಜಾಯ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>