<p><strong>ಬೆಂಗಳೂರು: </strong>ಸರ್ಕಾರದ ಎಲ್ಲ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಮತ್ತು ಸಮಾನಾಂತರ ಹುದ್ದೆಗಳಿಗೆ ಪದವಿ ಶಿಕ್ಷಣವನ್ನು ಅರ್ಹತೆಯನ್ನಾಗಿ ಪರಿಗಣಿಸಬೇಕೆಂಬ ಅಧಿಕಾರಿಗಳ ವೇತನ ಸಮಿತಿಯ ಶಿಫಾರಸಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.<br /> <br /> ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪದವೀಧರರು ಇರುವುದರಿಂದ ಎಸ್ಡಿಎ ಮತ್ತು ಸಮಾನಾಂತರ ಹುದ್ದೆಗಳಿಗೆ ಪದವಿ ಶಿಕ್ಷಣ ಪೂರೈಸಿರುವುದನ್ನು ಪ್ರಾಥಮಿಕ ಅರ್ಹತೆಯಾಗಿ ಪರಿಗಣಿಸಬೇಕೆಂಬ ಶಿಫಾರಸು ವರದಿುಲ್ಲಿದೆ. ಪ್ರಸ್ತುತ ಎಸ್ಸೆಸ್ಸೆಲ್ಸಿ ಸಾಮಾನ್ಯ ಅರ್ಹತೆಯಾಗಿದೆ. `ಡಿ~ ದರ್ಜೆ ನೌಕರರಿಗೆ ಎಸ್ಸೆಸ್ಸೆಲ್ಸಿ ಪೂರೈಸಿರುವುದನ್ನು ಪ್ರಾಥಮಿಕ ಅರ್ಹತೆಯನ್ನಾಗಿ ನಿಗದಿ ಮಾಡಬೇಕೆಂಬ ಶಿಫಾರಸು ಇದೆ. ಹಾಲಿ ಏಳನೇ ತರಗತಿ ಪೂರೈಸಿರಬೇಕೆಂಬ ನಿಯಮವಿದೆ.<br /> <br /> ಈ ಶಿಫಾರಸುಗಳಿಗೆ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ, `ಸಮಿತಿಯ ಶಿಫಾರಸು ಅನುಷ್ಠಾನ ಯೋಗ್ಯವಾದುದಲ್ಲ. ಎಸ್ಡಿಎ ಹುದ್ದೆಗೆ ಪದವಿ ಕಡ್ಡಾಯಗೊಳಿಸಿದರೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಸ್ನಾತಕೋತ್ತರ ಪದವಿಯನ್ನು ಅರ್ಹತೆಯನ್ನಾಗಿ ಪರಿಗಣಿಸಬೇಕಾಗುತ್ತದೆ. <br /> <br /> ಪ್ರಸ್ತುತಗ್ರಾಮೀಣ ಪ್ರದೇಶದ ಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿಸುವುದಕ್ಕೂ ಕಷ್ಟಪಡುತ್ತಿದ್ದಾರೆ. ನಾವು ಈ ಶಿಫಾರಸನ್ನು ಒಪ್ಪಿಕೊಳ್ಳುವುದಿಲ್ಲ. ಈ ಸಂಬಂಧ ಸಿಎಂ ಬೇಟಿ ಮಾಡಿ ಚರ್ಚಿಸಲು ಸಮಯ ಕೇಳಿದ್ದೇವೆ~ ಎಂದರು.<br /> ಕೆಲಸದ ಅವಧಿ ಬದಲಾವಣೆ ಮಾಡಬೇಕೆಂಬ ಶಿಫಾರಸು ಕುರಿತು, `ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೇ ರಜೆ ಸೌಲಭ್ಯ ನೀಡುವುದಾದರೆ ಕೆಲಸ ವೇಳೆ ಬದಲಾವಣೆಗೆ ಯಾವುದೇ ಅಭ್ಯಂತರವಿಲ್ಲ~ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸರ್ಕಾರದ ಎಲ್ಲ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಮತ್ತು ಸಮಾನಾಂತರ ಹುದ್ದೆಗಳಿಗೆ ಪದವಿ ಶಿಕ್ಷಣವನ್ನು ಅರ್ಹತೆಯನ್ನಾಗಿ ಪರಿಗಣಿಸಬೇಕೆಂಬ ಅಧಿಕಾರಿಗಳ ವೇತನ ಸಮಿತಿಯ ಶಿಫಾರಸಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.<br /> <br /> ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪದವೀಧರರು ಇರುವುದರಿಂದ ಎಸ್ಡಿಎ ಮತ್ತು ಸಮಾನಾಂತರ ಹುದ್ದೆಗಳಿಗೆ ಪದವಿ ಶಿಕ್ಷಣ ಪೂರೈಸಿರುವುದನ್ನು ಪ್ರಾಥಮಿಕ ಅರ್ಹತೆಯಾಗಿ ಪರಿಗಣಿಸಬೇಕೆಂಬ ಶಿಫಾರಸು ವರದಿುಲ್ಲಿದೆ. ಪ್ರಸ್ತುತ ಎಸ್ಸೆಸ್ಸೆಲ್ಸಿ ಸಾಮಾನ್ಯ ಅರ್ಹತೆಯಾಗಿದೆ. `ಡಿ~ ದರ್ಜೆ ನೌಕರರಿಗೆ ಎಸ್ಸೆಸ್ಸೆಲ್ಸಿ ಪೂರೈಸಿರುವುದನ್ನು ಪ್ರಾಥಮಿಕ ಅರ್ಹತೆಯನ್ನಾಗಿ ನಿಗದಿ ಮಾಡಬೇಕೆಂಬ ಶಿಫಾರಸು ಇದೆ. ಹಾಲಿ ಏಳನೇ ತರಗತಿ ಪೂರೈಸಿರಬೇಕೆಂಬ ನಿಯಮವಿದೆ.<br /> <br /> ಈ ಶಿಫಾರಸುಗಳಿಗೆ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ, `ಸಮಿತಿಯ ಶಿಫಾರಸು ಅನುಷ್ಠಾನ ಯೋಗ್ಯವಾದುದಲ್ಲ. ಎಸ್ಡಿಎ ಹುದ್ದೆಗೆ ಪದವಿ ಕಡ್ಡಾಯಗೊಳಿಸಿದರೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಸ್ನಾತಕೋತ್ತರ ಪದವಿಯನ್ನು ಅರ್ಹತೆಯನ್ನಾಗಿ ಪರಿಗಣಿಸಬೇಕಾಗುತ್ತದೆ. <br /> <br /> ಪ್ರಸ್ತುತಗ್ರಾಮೀಣ ಪ್ರದೇಶದ ಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿಸುವುದಕ್ಕೂ ಕಷ್ಟಪಡುತ್ತಿದ್ದಾರೆ. ನಾವು ಈ ಶಿಫಾರಸನ್ನು ಒಪ್ಪಿಕೊಳ್ಳುವುದಿಲ್ಲ. ಈ ಸಂಬಂಧ ಸಿಎಂ ಬೇಟಿ ಮಾಡಿ ಚರ್ಚಿಸಲು ಸಮಯ ಕೇಳಿದ್ದೇವೆ~ ಎಂದರು.<br /> ಕೆಲಸದ ಅವಧಿ ಬದಲಾವಣೆ ಮಾಡಬೇಕೆಂಬ ಶಿಫಾರಸು ಕುರಿತು, `ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೇ ರಜೆ ಸೌಲಭ್ಯ ನೀಡುವುದಾದರೆ ಕೆಲಸ ವೇಳೆ ಬದಲಾವಣೆಗೆ ಯಾವುದೇ ಅಭ್ಯಂತರವಿಲ್ಲ~ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>