<p><strong>ಕನಕಪುರ: </strong>ವೈಯಕ್ತಿಕ ದ್ವೇಷದ ಕಾರಣಕ್ಕೆ ಗುಡಿಸಲಿಗೆ ಬೆಂಕಿ ಹಚ್ಚಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಳ್ಳಿಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.<br /> <br /> ಈ ಗುಡಿಸಲು ಕೂಲಿ ಕಾರ್ಮಿಕ ಮರಿಯಪ್ಪ ಅವರಿಗೆ ಸೇರಿದ್ದಾಗಿದೆ.<br /> <br /> ಇದೇ ಗ್ರಾಮದ ವೆಂಕಟೇಗೌಡ ಅವರ ಮಗ ಶ್ರೀನಿವಾಸ್ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.<br /> <br /> ಮರಿಯಪ್ಪ ಅವರ ಗುಡಿಸಲಿನ ಹಿಂದಿನ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ವೆಂಕಟೇಗೌಡ ಕೃಷಿ ಮಾಡುತ್ತಿದ್ದಾರೆ.<br /> <br /> ‘ರಸ್ತೆಯ ಸಮೀಪವಿರುವ ಮರಿಯಪ್ಪನ ಗುಡಿಸಲನ್ನು ತೆರವುಗೊಳಿಸದರೆ ಆ ಜಾಗವನ್ನು ಒತ್ತುವರಿ ಮಾಡಿಕೊಳ್ಳಬಹುದೆಂಬ ದುರುದ್ದೇಶದಿಂದ ಶ್ರೀನಿವಾಸ ಗುಡಿಸಲಿಗೆ ಬೆಂಕಿ ಹಚ್ಚಿದ್ದಾನೆ’ ಎಂದು ಮರಿಯಪ್ಪನ ಪತ್ನಿ ದೇವಮ್ಮ ದೂರಿದ್ದಾರೆ.<br /> <br /> ಗುಡಿಸಲಿನ ಒಳಗಿದ್ದ ಒಡವೆ ಮತ್ತು ಸಾಮಾನುಗಳು ಸುಟ್ಟು ಹೋಗಿದ್ದು, ಸುಮಾರು ೩೦ ಸಾವಿರ ನಷ್ಟವಾಗಿದೆ ಎನ್ನಲಾಗಿದೆ. ಶ್ರೀನಿವಾಸ್ ವಿರುದ್ಧ ದೂರು ದಾಖಲಾಗಿದೆ. ಪಿ.ಎಸ್ಸೈ ಹೇಮಂತ್ಕುಮಾರ್ ಅವರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ: </strong>ವೈಯಕ್ತಿಕ ದ್ವೇಷದ ಕಾರಣಕ್ಕೆ ಗುಡಿಸಲಿಗೆ ಬೆಂಕಿ ಹಚ್ಚಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಳ್ಳಿಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.<br /> <br /> ಈ ಗುಡಿಸಲು ಕೂಲಿ ಕಾರ್ಮಿಕ ಮರಿಯಪ್ಪ ಅವರಿಗೆ ಸೇರಿದ್ದಾಗಿದೆ.<br /> <br /> ಇದೇ ಗ್ರಾಮದ ವೆಂಕಟೇಗೌಡ ಅವರ ಮಗ ಶ್ರೀನಿವಾಸ್ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.<br /> <br /> ಮರಿಯಪ್ಪ ಅವರ ಗುಡಿಸಲಿನ ಹಿಂದಿನ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ವೆಂಕಟೇಗೌಡ ಕೃಷಿ ಮಾಡುತ್ತಿದ್ದಾರೆ.<br /> <br /> ‘ರಸ್ತೆಯ ಸಮೀಪವಿರುವ ಮರಿಯಪ್ಪನ ಗುಡಿಸಲನ್ನು ತೆರವುಗೊಳಿಸದರೆ ಆ ಜಾಗವನ್ನು ಒತ್ತುವರಿ ಮಾಡಿಕೊಳ್ಳಬಹುದೆಂಬ ದುರುದ್ದೇಶದಿಂದ ಶ್ರೀನಿವಾಸ ಗುಡಿಸಲಿಗೆ ಬೆಂಕಿ ಹಚ್ಚಿದ್ದಾನೆ’ ಎಂದು ಮರಿಯಪ್ಪನ ಪತ್ನಿ ದೇವಮ್ಮ ದೂರಿದ್ದಾರೆ.<br /> <br /> ಗುಡಿಸಲಿನ ಒಳಗಿದ್ದ ಒಡವೆ ಮತ್ತು ಸಾಮಾನುಗಳು ಸುಟ್ಟು ಹೋಗಿದ್ದು, ಸುಮಾರು ೩೦ ಸಾವಿರ ನಷ್ಟವಾಗಿದೆ ಎನ್ನಲಾಗಿದೆ. ಶ್ರೀನಿವಾಸ್ ವಿರುದ್ಧ ದೂರು ದಾಖಲಾಗಿದೆ. ಪಿ.ಎಸ್ಸೈ ಹೇಮಂತ್ಕುಮಾರ್ ಅವರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>