ಬೆಂಗಳೂರು: ‘ಹೆಚ್ಚುವರಿ ಕೆಲಸಕ್ಕೆ ಬಿಎಂಟಿಸಿ ಭತ್ಯೆ ನೀಡಿಲ್ಲ. ಇದನ್ನು ಕೂಡಲೇ ಪಾವತಿಸಬೇಕು’ ಎಂದು ಆಗ್ರಹಿಸಿ ಮೆಜೆಸ್ಟಿಕ್ ಘಟಕದ(7ನೇ ಘಟಕ) ವೋಲ್ವೊ ಬಸ್ಗಳ ಚಾಲಕರು ಹಾಗೂ ನಿರ್ವಾಹಕರು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಂಗಳ ವಾರ ಬೆಳಿಗ್ಗೆ ದಿಢೀರ್್ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸ್ವಲ್ಪ ಕಾಲ ಬಸ್ ಸಂಚಾರ ವ್ಯತ್ಯಯ ಉಂಟಾಯಿತು.
ಸುಮಾರು 50ಕ್ಕೂ ಅಧಿಕ ಬಸ್ಗಳ ಚಾಲಕರು ಹಾಗೂ ನಿರ್ವಾ ಹಕರು ಬೆಳಿಗ್ಗೆ 7ರಿಂದ 10 ಗಂಟೆವರೆಗೆ ಡಿಪೊ ಹೊರಭಾಗದಲ್ಲಿ ಪ್ರತಿ ಭಟನೆ ನಡೆಸಿದರು. ಇದರಿಂದಾಗಿ ಕಾಡುಗೋಡಿ, ಅತ್ತಿಬೆಲೆ, ಬನ್ನೇರು ಘಟ್ಟ ಮತ್ತಿತರ ಕಡೆಗೆ ತೆರಳುವ ವೋಲ್ವೊ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಇದರಿಂದಾಗಿ ಪ್ರಯಾಣಿಕರು ಪರದಾಡಿದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದರು.
‘ಘಟಕದ ಹಿರಿಯ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಹೆಚ್ಚು ವರಿ ಕೆಲಸ ಮಾಡಿಸಿ ಭತ್ಯೆ ನೀಡು ವುದಿಲ್ಲ. ಈ ಬಗ್ಗೆ ಪ್ರಶ್ನಿಸಿದ ಸಿಬ್ಬಂದಿ ಯನ್ನು ಗುರಿಯಾಗಿಸಿ ಕೊಂಡು ಕಿರುಕುಳ ನೀಡುತ್ತಿದ್ದಾರೆ’ ಎಂದು ಚಾಲಕರು ಹಾಗೂ ನಿರ್ವಾಹಕರು ಅಳಲು ತೋಡಿಕೊಂಡರು.
ನಗರದಲ್ಲಿ ಸಂಚಾರ ದಟ್ಟಣೆಯಿಂದಾಗಿ ನಿಲ್ದಾಣಕ್ಕೆ ಬಸ್ ಬರುವುದು ತಡವಾದರೆ ಬೈಗುಳ ಕೇಳ ಬೇಕಾಗುತ್ತದೆ ಎಂದು ಪ್ರತಿಭಟನಾನಿರತ ಚಾಲಕರು ಮತ್ತು ನಿವಾರ್ಹಕರು ಇದೇ ಸಂದಭರ್ದಲ್ಲಿ ಆರೋಪಿಸಿದರು.