‘ವಾಸ್ತವದ ನೆಲೆಗಟ್ಟಿನಲ್ಲಿ ಕರಡು ರಚನೆ ಮಾಡಲಾಗಿದೆ. ಈ ಕರಡು ನೀತಿಯನ್ನು ಒಪ್ಪಿಕೊಳ್ಳಿ ಎಂದು ನಾನು ಹೇಳುವುದಿಲ್ಲ. ಮೊದಲು ಅದನ್ನುಸ್ವೀಕರಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಯಾವುದೋ ಒಂದು ಸಾಲನ್ನು ಹಿಡಿದು ಇಡೀ ನೀತಿಯನ್ನೇ ಜರಿಯಬೇಡಿ’ ಎಂದರು.‘ಭಾರತೀಯರ ಆತ್ಮ ಬಲ ಕುಗ್ಗಿಸುವ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟಿಷರು ಜಾರಿಗೆ ತಂದಿದ್ದರು. ವಸಾಹತುಶಾಹಿ ಸಂಸ್ಕೃತಿ ಮತ್ತು ಪರಂಪರೆಯನ್ನು ನಾಶಪಡಿಸುವ ಪ್ರಯತ್ನವನ್ನು ನಾವು ಹೊಸ ಶಿಕ್ಷಣ ನೀತಿಯಲ್ಲಿ ಮಾಡಿದ್ದೇವೆ.ಇದರಲ್ಲಿ ಖಂಡಿತವಾಗಿ ನಾವುವಸಾಹತು ಅಥವಾ ಭಾರತೀಯ ಎಂಬ ಪದವನ್ನು ಬಳಸಲಿಲ್ಲ. ಆ ಪದ ಬಳಸುವುದು ಮುಖ್ಯವಲ್ಲ, ಸಾರ ಮತ್ತು ಆತ್ಮ ಮುಖ್ಯ’ ಎಂದರು.