ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್’ (ಜಿತೊ) ಬೆಂಗಳೂರು ವಿಭಾಗವು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಜಿತೊ ಗ್ರೋತ್ ಸಮಿಟ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಯಪ್ರಜ್ಞೆ, ಕಾಯಕನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಭಾವ ಇದ್ದರೆ ಯಶಸ್ಸು ಸಾಧ್ಯ. 127 ವರ್ಷಗಳಿಂದ ಇದನ್ನು ಪಾಲಿಸಿಕೊಂಡು ಬಂದಿರುವ ಮುಂಬೈನ ಡಬ್ಬಾವಾಲಾಗಳೇ ಇದಕ್ಕೆ ನಿದರ್ಶನ ಇವರು ಹೊಂದಿರುವ ಪೂರೈಕೆ ಸರಪಳಿಯು ವಿಶ್ವಕ್ಕೆ ಮಾದರಿ’ ಎಂದರು.