<p><strong>ಬೆಂಗಳೂರು:</strong> `ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸಿ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಪ್ರತಿ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸಲು ಸಜ್ಜಾಗಿರಬೇಕು' ಎಂದು ಖ್ಯಾತ ಚೆಸ್ ಸ್ಪರ್ಧಿ ವಿಶ್ವನಾಥನ್ ಆನಂದ್ ಕಿವಿಮಾತು ಹೇಳಿದರು.<br /> <br /> ಸ್ಯಾಪ್ ಲ್ಯಾಬ್ಸ್ ಆಫ್ ಇಂಡಿಯಾ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಸಂಬಂಧಿ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲು ವೈಟ್ಫಿಲ್ಡ್ ಕೈಗಾರಿಕಾ ಪ್ರದೇಶದ ಕರ್ನಾಟಕ ಟ್ರೇಡ್ ಪ್ರಮೋಷನ್ ಸೆಂಟರ್ನಲ್ಲಿ ಸೋಮವಾರ ಆಯೋಜಿಸಿದ್ದ `ಸ್ಯಾಪ್ ಟೆಕ್ನಿವರ್ಸಿಟಿ-2012' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `ಚೆಸ್ನಲ್ಲಿ ಈಗ ಕಂಪ್ಯೂಟರ್ ಪ್ರಮುಖ ಪಾತ್ರ ವಹಿಸುತ್ತಿದೆ. ಚೆಸ್ನಲ್ಲಿ ಯೋಜನೆ ರೂಪಿಸುವುದಕ್ಕಿಂತ ಎದುರಾಳಿಯ ನಡೆಗೆ ತಕ್ಕಂತೆ ವೇಗವಾಗಿ ಆಡುವುದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಭಾರತದ ಗ್ರ್ಯಾಂಡ್ ಮಾಸ್ಟರ್ ಅಭಿಪ್ರಾಯಪಟ್ಟರು.<br /> ಗೂಗಲ್ ಇಂಡಿಯಾ ಔಟ್ರೀಚ್ ಪ್ರೊಗ್ರಾನ ಮುಖ್ಯಸ್ಥ ಸುನೀಲ್ ರಾವ್ ಮಾತನಾಡಿ, `ಇಂಟರ್ನೆಟ್ ಬಳಕೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ ಮೂರನೇ ಸ್ಥಾನ. ಮೊಬೈಲ್ ಬಳಸುವವರಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು. ದೇಶದಲ್ಲಿ 120 ದಶಲಕ್ಷ ಇಂಟರ್ನೆಟ್ ಬಳಕೆದಾರರಿದ್ದು, ಇದರಲ್ಲಿ 70 ದಶಲಕ್ಷ ಮಂದಿ ಮೊಬೈಲ್ ಮೂಲಕವೇ ಇಂಟರ್ನೆಟ್ ಬಳಸುತ್ತಿದ್ದಾರೆ' ಎಂದರು. <br /> <br /> ಕ್ಯಾಪ್ಗೆಮಿನಿ ಇಂಡಿಯಾದ ನೇಮಕಾತಿ ವಿಭಾಗದ ಉಪಾಧ್ಯಕ್ಷ ಶ್ರೀನಿವಾಸ ರಾವ್, `ವಿದ್ಯಾರ್ಥಿಗಳಿಂದ ಉದ್ಯೋಗಿಗಳವರೆಗೂ ಕಲಿಕೆಯ ಹಸಿವೆ ಇರಬೇಕು. ಸಂಸ್ಥೆಗಳು ಸಿಬ್ಬಂದಿಯಿಂದ ಜ್ಞಾನದಾಹವನ್ನು ನಿರೀಕ್ಷೆ ಮಾಡುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯದ ಸವಾಲುಗಳನ್ನು ಎದುರಿಸಲು ಕಾಲಕಾಲಕ್ಕೆ ತಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದರು.<br /> ಸ್ಯಾಪ್ ನೇಮಕಾತಿ ವಿಭಾಗದ ಜಾಗತಿಕ ಮುಖ್ಯಸ್ಥ ಅನಿಲ್ ವಾರಿಯರ್, `ಹತ್ತಾರು ವರ್ಷ ಅನುಭವ ಗಳಿಸಿದ ಬಳಿಕವೂ ಉದ್ಯೋಗಿಗಳಲ್ಲಿ ವಿಷಯಪರಿಣಿತಿ ಕಂಡುಬರುತ್ತಿಲ್ಲ. ಇದು ಉದ್ಯಮಗಳಿಗೆ ಎದುರಾಗಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಕಲಿಕೆ ನಿರಂತರ ಪ್ರಕ್ರಿಯೆಯಾಗಬೇಕು. ವಿದ್ಯಾರ್ಥಿಗಳು ಇಷ್ಟದ ವಿಷಯಗಳಲ್ಲಿ ವಿಷಯಪರಿಣಿತಿ ಗಳಿಸಲು ಮೊದಲ ಆದ್ಯತೆ ನೀಡಬೇಕು' ಎಂದು ಸಲಹೆ ನೀಡಿದರು.<br /> <br /> ಸ್ಯಾಪ್ ಉಪಾಧ್ಯಕ್ಷ (ಮಾರುಕಟ್ಟೆ ಹಾಗೂ ಸಂವಹನ ವಿಭಾಗ) ಸುಂದರ್ ಮದಕ್ಷಿರ ಮಾತನಾಡಿ, `ವಿದ್ಯಾರ್ಥಿಗಳಲ್ಲಿ ಉದ್ಯೋಗ ಸಿದ್ಧತೆಯನ್ನು ಹೆಚ್ಚಿಸಲು ಸ್ಯಾಪ್ ಗಮನ ಹರಿಸುತ್ತಿದೆ. ಯುವಜನರಿಗೆ ಸ್ವಉದ್ಯೋಗಕ್ಕೆ ಪ್ರೇರಣೆ ನೀಡಲು, ಉದ್ಯಮ ಹಾಗೂ ಶಿಕ್ಷಣ ನಡುವಿನ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದರು.<br /> <br /> `ವಿದ್ಯಾರ್ಥಿಗಳು ತಂತ್ರಜ್ಞಾನದ ಶೋಧಗಳನ್ನು ಕಲಿಯಲು ತಯಾರಿದ್ದು, ತ್ವರಿತಗತಿಯಲ್ಲಿ ಕೌಶಲವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಸ್ಯಾಪ್ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ತಿಳಿಸಿದರು.<br /> <br /> ಏಳು ರಾಜ್ಯಗಳ 200ಕ್ಕೂ ಅಧಿಕ ಕಾಲೇಜುಗಳ 5,200 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿವಿಧ ತಂತ್ರಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸಿ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಪ್ರತಿ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸಲು ಸಜ್ಜಾಗಿರಬೇಕು' ಎಂದು ಖ್ಯಾತ ಚೆಸ್ ಸ್ಪರ್ಧಿ ವಿಶ್ವನಾಥನ್ ಆನಂದ್ ಕಿವಿಮಾತು ಹೇಳಿದರು.<br /> <br /> ಸ್ಯಾಪ್ ಲ್ಯಾಬ್ಸ್ ಆಫ್ ಇಂಡಿಯಾ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಸಂಬಂಧಿ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲು ವೈಟ್ಫಿಲ್ಡ್ ಕೈಗಾರಿಕಾ ಪ್ರದೇಶದ ಕರ್ನಾಟಕ ಟ್ರೇಡ್ ಪ್ರಮೋಷನ್ ಸೆಂಟರ್ನಲ್ಲಿ ಸೋಮವಾರ ಆಯೋಜಿಸಿದ್ದ `ಸ್ಯಾಪ್ ಟೆಕ್ನಿವರ್ಸಿಟಿ-2012' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `ಚೆಸ್ನಲ್ಲಿ ಈಗ ಕಂಪ್ಯೂಟರ್ ಪ್ರಮುಖ ಪಾತ್ರ ವಹಿಸುತ್ತಿದೆ. ಚೆಸ್ನಲ್ಲಿ ಯೋಜನೆ ರೂಪಿಸುವುದಕ್ಕಿಂತ ಎದುರಾಳಿಯ ನಡೆಗೆ ತಕ್ಕಂತೆ ವೇಗವಾಗಿ ಆಡುವುದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಭಾರತದ ಗ್ರ್ಯಾಂಡ್ ಮಾಸ್ಟರ್ ಅಭಿಪ್ರಾಯಪಟ್ಟರು.<br /> ಗೂಗಲ್ ಇಂಡಿಯಾ ಔಟ್ರೀಚ್ ಪ್ರೊಗ್ರಾನ ಮುಖ್ಯಸ್ಥ ಸುನೀಲ್ ರಾವ್ ಮಾತನಾಡಿ, `ಇಂಟರ್ನೆಟ್ ಬಳಕೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ ಮೂರನೇ ಸ್ಥಾನ. ಮೊಬೈಲ್ ಬಳಸುವವರಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು. ದೇಶದಲ್ಲಿ 120 ದಶಲಕ್ಷ ಇಂಟರ್ನೆಟ್ ಬಳಕೆದಾರರಿದ್ದು, ಇದರಲ್ಲಿ 70 ದಶಲಕ್ಷ ಮಂದಿ ಮೊಬೈಲ್ ಮೂಲಕವೇ ಇಂಟರ್ನೆಟ್ ಬಳಸುತ್ತಿದ್ದಾರೆ' ಎಂದರು. <br /> <br /> ಕ್ಯಾಪ್ಗೆಮಿನಿ ಇಂಡಿಯಾದ ನೇಮಕಾತಿ ವಿಭಾಗದ ಉಪಾಧ್ಯಕ್ಷ ಶ್ರೀನಿವಾಸ ರಾವ್, `ವಿದ್ಯಾರ್ಥಿಗಳಿಂದ ಉದ್ಯೋಗಿಗಳವರೆಗೂ ಕಲಿಕೆಯ ಹಸಿವೆ ಇರಬೇಕು. ಸಂಸ್ಥೆಗಳು ಸಿಬ್ಬಂದಿಯಿಂದ ಜ್ಞಾನದಾಹವನ್ನು ನಿರೀಕ್ಷೆ ಮಾಡುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯದ ಸವಾಲುಗಳನ್ನು ಎದುರಿಸಲು ಕಾಲಕಾಲಕ್ಕೆ ತಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದರು.<br /> ಸ್ಯಾಪ್ ನೇಮಕಾತಿ ವಿಭಾಗದ ಜಾಗತಿಕ ಮುಖ್ಯಸ್ಥ ಅನಿಲ್ ವಾರಿಯರ್, `ಹತ್ತಾರು ವರ್ಷ ಅನುಭವ ಗಳಿಸಿದ ಬಳಿಕವೂ ಉದ್ಯೋಗಿಗಳಲ್ಲಿ ವಿಷಯಪರಿಣಿತಿ ಕಂಡುಬರುತ್ತಿಲ್ಲ. ಇದು ಉದ್ಯಮಗಳಿಗೆ ಎದುರಾಗಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಕಲಿಕೆ ನಿರಂತರ ಪ್ರಕ್ರಿಯೆಯಾಗಬೇಕು. ವಿದ್ಯಾರ್ಥಿಗಳು ಇಷ್ಟದ ವಿಷಯಗಳಲ್ಲಿ ವಿಷಯಪರಿಣಿತಿ ಗಳಿಸಲು ಮೊದಲ ಆದ್ಯತೆ ನೀಡಬೇಕು' ಎಂದು ಸಲಹೆ ನೀಡಿದರು.<br /> <br /> ಸ್ಯಾಪ್ ಉಪಾಧ್ಯಕ್ಷ (ಮಾರುಕಟ್ಟೆ ಹಾಗೂ ಸಂವಹನ ವಿಭಾಗ) ಸುಂದರ್ ಮದಕ್ಷಿರ ಮಾತನಾಡಿ, `ವಿದ್ಯಾರ್ಥಿಗಳಲ್ಲಿ ಉದ್ಯೋಗ ಸಿದ್ಧತೆಯನ್ನು ಹೆಚ್ಚಿಸಲು ಸ್ಯಾಪ್ ಗಮನ ಹರಿಸುತ್ತಿದೆ. ಯುವಜನರಿಗೆ ಸ್ವಉದ್ಯೋಗಕ್ಕೆ ಪ್ರೇರಣೆ ನೀಡಲು, ಉದ್ಯಮ ಹಾಗೂ ಶಿಕ್ಷಣ ನಡುವಿನ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದರು.<br /> <br /> `ವಿದ್ಯಾರ್ಥಿಗಳು ತಂತ್ರಜ್ಞಾನದ ಶೋಧಗಳನ್ನು ಕಲಿಯಲು ತಯಾರಿದ್ದು, ತ್ವರಿತಗತಿಯಲ್ಲಿ ಕೌಶಲವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಸ್ಯಾಪ್ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ತಿಳಿಸಿದರು.<br /> <br /> ಏಳು ರಾಜ್ಯಗಳ 200ಕ್ಕೂ ಅಧಿಕ ಕಾಲೇಜುಗಳ 5,200 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿವಿಧ ತಂತ್ರಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>