<p>‘ಇನ್ನೇನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ನಿಲ್ಲಲಿದೆ’ ಬೈಟು ಬಳಗದ ಚರ್ಚೆಗೆ ಚಾಲನೆ ನೀಡಿದ ತಿಂಗಳೇಶ.</p>.<p>‘ಹೌದು, ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯವರು ತೇರ್ಗಡೆಗೆ 33 ಅಂಕ ನಿಗದಿಪಡಿಸಿ ಮಕ್ಕಳ ಮತ್ತು ಮೌಲ್ಯಮಾಪಕರ ಹೊರೆ ಕಡಿಮೆ ಮಾಡಿದ್ದಾರೆ’.</p>.<p>‘ಇದರಿಂದ ಪೋಷಕರ ಹೊರೆಯೂ ಕಡಿಮೆಯಾಗಲಿದೆ. ಶಾಲೆಯ ಫಲಿತಾಂಶದ ಗುರಿಗಾಗಿ ಸಾಮೂಹಿಕ ನಕಲಿಗೆ ಮೊರೆ ಹೋಗುತ್ತಿದ್ದ ಶಿಕ್ಷಕರ ಭಾರವೂ ಇಳಿಯಲಿದೆ’.</p>.<p>‘ಅಂದ್ರೇ… ನಕಲು ನಿಲ್ಲಿಸುವ ಅಸಲು ಉಪಾಯ!’.</p>.<p>‘ಫಲಿತಾಂಶ ಕುಸಿತದಿಂದ ಪಾರಾಗಬಹುದು. ಆದರೆ, ಲಿಖಿತ ಪರೀಕ್ಷೆಯಲ್ಲಿ 13 ಅಂಕ ಪಡೆದು ಪಾಸಾಗುವ ವಿದ್ಯಾರ್ಥಿಗಳಿಂದ ಶಿಕ್ಷಣದ ಮೌಲ್ಯ ಕುಸಿಯುವುದಿಲ್ಲವೇ?’</p>.<p>‘ಹಾಗೇನಿಲ್ಲ, ಈ ನಿರ್ಧಾರದಲ್ಲಿ ಕುವೆಂಪು ವೈಚಾರಿಕತೆ ಬೆಳೆಸುವ ಉನ್ನತ ಮೌಲ್ಯ ಅಡಗಿದೆ. ಶಿಕ್ಷಣ ಹೆಚ್ಚಾದಷ್ಟೂ ಕಂದಾಚಾರ ಹೆಚ್ಚಾಗಿ ವೈಜ್ಞಾನಿಕ ಪ್ರಜ್ಞೆ ಕಡಿಮೆಯಾಗುವುದನ್ನು ಮುಖ್ಯಮಂತ್ರಿಗಳೇ ಗುರುತಿಸಿಲ್ಲವೇ? ಹಾಗಾಗಿ, ಶಿಕ್ಷಣದ ಗುಣಮಟ್ಟ ಕಡಿಮೆ ಮಾಡಿ ವೈಚಾರಿಕತೆ ಬೆಳೆಸುವ ವಿನೂತನ ಪ್ರಯೋಗವಿದು…’</p>.<p>‘ಆದ್ರೂ… ಮೊಬೈಲ್ಗಳಲ್ಲಿ ಮುಳುಗಿರುವ ವಿದ್ಯಾರ್ಥಿಗಳು 33 ಅಂಕ ಪಡೆಯೋದೂ ಅನುಮಾನ ಅನ್ನಿಸುತ್ತದೆ’.</p>.<p>‘ಅದಕ್ಕೂ ಒಂದು ಪರಿಹಾರ ಕಂಡುಕೊಂಡರೆ ಆಯ್ತು ಬಿಡು’.</p>.<p>‘ಅದೇನಪ್ಪಾ ಅದು… ಅಂಥಾ ಚಮತ್ಕಾರ… ‘ಸೆಪ್ಟೆಂಬರ್ ಕ್ರಾಂತಿ’ ಥರ ಮಾತಾಡ್ತೀಯಾ…!’</p>.<p>‘ಅದು ಅಧಿಕಾರ ಹಸ್ತಾಂತರದಷ್ಟು ಸಂಕೀರ್ಣ ವಿಷಯವಲ್ಲ; ಬಿಕ್ಕಟ್ಟು ನಿವಾರಿಸಲು ಆಯೋಗ ರಚಿಸಿದಷ್ಟೇ ಸುಲಭ. ಎಲ್ಲಾ ಶಾಲೆಗಳ ಗ್ರಂಥಾಲಯಗಳನ್ನು ಖಾಲಿ ಮಾಡಿಸುವುದು ಮೊದಲ ಸ್ಟೆಪ್’.</p>.<p>‘ಮುಖ್ಯಮಂತ್ರಿಗಳ ‘ಕಡಿಮೆ ಶಿಕ್ಷಣ-ಹೆಚ್ಚಿನ ವೈಚಾರಿಕತೆ’ ನೀತಿಗೆ ಅನುಗುಣವಾಗಿದೆ! ಮುಂದ…?’</p>.<p>‘ಗ್ರಂಥಾಲಯಗಳ ಜಾಗದಲ್ಲಿ ಪ್ರಾರ್ಥನಾ ಮಂದಿರಗಳ ಸ್ಥಾಪನೆ ಮಾಡುವುದು ಎರಡನೇ ಸ್ಟೆಪ್’</p>.<p>‘ಓಹ್…! ಉಪ ಮುಖ್ಯಮಂತ್ರಿಗಳ ನೀತಿಯಂತೆ ‘ಕಡಿಮೆ ಪ್ರಯತ್ನ-ಹೆಚ್ಚಿನ ಪ್ರಾರ್ಥನೆ’ ಅಳವಡಿಕೆ!’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇನ್ನೇನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ನಿಲ್ಲಲಿದೆ’ ಬೈಟು ಬಳಗದ ಚರ್ಚೆಗೆ ಚಾಲನೆ ನೀಡಿದ ತಿಂಗಳೇಶ.</p>.<p>‘ಹೌದು, ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯವರು ತೇರ್ಗಡೆಗೆ 33 ಅಂಕ ನಿಗದಿಪಡಿಸಿ ಮಕ್ಕಳ ಮತ್ತು ಮೌಲ್ಯಮಾಪಕರ ಹೊರೆ ಕಡಿಮೆ ಮಾಡಿದ್ದಾರೆ’.</p>.<p>‘ಇದರಿಂದ ಪೋಷಕರ ಹೊರೆಯೂ ಕಡಿಮೆಯಾಗಲಿದೆ. ಶಾಲೆಯ ಫಲಿತಾಂಶದ ಗುರಿಗಾಗಿ ಸಾಮೂಹಿಕ ನಕಲಿಗೆ ಮೊರೆ ಹೋಗುತ್ತಿದ್ದ ಶಿಕ್ಷಕರ ಭಾರವೂ ಇಳಿಯಲಿದೆ’.</p>.<p>‘ಅಂದ್ರೇ… ನಕಲು ನಿಲ್ಲಿಸುವ ಅಸಲು ಉಪಾಯ!’.</p>.<p>‘ಫಲಿತಾಂಶ ಕುಸಿತದಿಂದ ಪಾರಾಗಬಹುದು. ಆದರೆ, ಲಿಖಿತ ಪರೀಕ್ಷೆಯಲ್ಲಿ 13 ಅಂಕ ಪಡೆದು ಪಾಸಾಗುವ ವಿದ್ಯಾರ್ಥಿಗಳಿಂದ ಶಿಕ್ಷಣದ ಮೌಲ್ಯ ಕುಸಿಯುವುದಿಲ್ಲವೇ?’</p>.<p>‘ಹಾಗೇನಿಲ್ಲ, ಈ ನಿರ್ಧಾರದಲ್ಲಿ ಕುವೆಂಪು ವೈಚಾರಿಕತೆ ಬೆಳೆಸುವ ಉನ್ನತ ಮೌಲ್ಯ ಅಡಗಿದೆ. ಶಿಕ್ಷಣ ಹೆಚ್ಚಾದಷ್ಟೂ ಕಂದಾಚಾರ ಹೆಚ್ಚಾಗಿ ವೈಜ್ಞಾನಿಕ ಪ್ರಜ್ಞೆ ಕಡಿಮೆಯಾಗುವುದನ್ನು ಮುಖ್ಯಮಂತ್ರಿಗಳೇ ಗುರುತಿಸಿಲ್ಲವೇ? ಹಾಗಾಗಿ, ಶಿಕ್ಷಣದ ಗುಣಮಟ್ಟ ಕಡಿಮೆ ಮಾಡಿ ವೈಚಾರಿಕತೆ ಬೆಳೆಸುವ ವಿನೂತನ ಪ್ರಯೋಗವಿದು…’</p>.<p>‘ಆದ್ರೂ… ಮೊಬೈಲ್ಗಳಲ್ಲಿ ಮುಳುಗಿರುವ ವಿದ್ಯಾರ್ಥಿಗಳು 33 ಅಂಕ ಪಡೆಯೋದೂ ಅನುಮಾನ ಅನ್ನಿಸುತ್ತದೆ’.</p>.<p>‘ಅದಕ್ಕೂ ಒಂದು ಪರಿಹಾರ ಕಂಡುಕೊಂಡರೆ ಆಯ್ತು ಬಿಡು’.</p>.<p>‘ಅದೇನಪ್ಪಾ ಅದು… ಅಂಥಾ ಚಮತ್ಕಾರ… ‘ಸೆಪ್ಟೆಂಬರ್ ಕ್ರಾಂತಿ’ ಥರ ಮಾತಾಡ್ತೀಯಾ…!’</p>.<p>‘ಅದು ಅಧಿಕಾರ ಹಸ್ತಾಂತರದಷ್ಟು ಸಂಕೀರ್ಣ ವಿಷಯವಲ್ಲ; ಬಿಕ್ಕಟ್ಟು ನಿವಾರಿಸಲು ಆಯೋಗ ರಚಿಸಿದಷ್ಟೇ ಸುಲಭ. ಎಲ್ಲಾ ಶಾಲೆಗಳ ಗ್ರಂಥಾಲಯಗಳನ್ನು ಖಾಲಿ ಮಾಡಿಸುವುದು ಮೊದಲ ಸ್ಟೆಪ್’.</p>.<p>‘ಮುಖ್ಯಮಂತ್ರಿಗಳ ‘ಕಡಿಮೆ ಶಿಕ್ಷಣ-ಹೆಚ್ಚಿನ ವೈಚಾರಿಕತೆ’ ನೀತಿಗೆ ಅನುಗುಣವಾಗಿದೆ! ಮುಂದ…?’</p>.<p>‘ಗ್ರಂಥಾಲಯಗಳ ಜಾಗದಲ್ಲಿ ಪ್ರಾರ್ಥನಾ ಮಂದಿರಗಳ ಸ್ಥಾಪನೆ ಮಾಡುವುದು ಎರಡನೇ ಸ್ಟೆಪ್’</p>.<p>‘ಓಹ್…! ಉಪ ಮುಖ್ಯಮಂತ್ರಿಗಳ ನೀತಿಯಂತೆ ‘ಕಡಿಮೆ ಪ್ರಯತ್ನ-ಹೆಚ್ಚಿನ ಪ್ರಾರ್ಥನೆ’ ಅಳವಡಿಕೆ!’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>