ಬೆಂಗಳೂರು: ಎಸ್ಸೆನ್ ಕಮ್ಯೂನಿಕೇಷನ್ಸ್ ನಗರದ ಅಲಯನ್ಸ್ ಫ್ರಾನ್ಸೆಯಲ್ಲಿ ಶುಕ್ರವಾರ ‘ದಿ ಗ್ರೇಟ್ ಔಟ್ಡೋರ್್ಸ 2014 – ಛಾಯಾ ಚಿತ್ರ ಪ್ರದರ್ಶನ’ ವನ್ನು ಏರ್ಪಡಿಸಿತ್ತು.
ಬೈಕ್ ರೈಡಿಂಗ್, ಹಳ್ಳಿಯ ಕಲ್ಲು ಮಣ್ಣಿನ ರಸ್ತೆಗಳಲ್ಲಿ ಸೈಕಲ್ ರೈಡಿಂಗ್, ಬಂಡೆಗಳನ್ನು ಹತ್ತುವುದು, ಸಮುದ್ರದಲ್ಲಿ ನಡೆಯುವ ಸಾಹಸ ಕ್ರೀಡೆಗಳ ಛಾಯಾಚಿತ್ರಗಳು ಮನಸೆಳೆದವು.
ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ‘ಛಾಯಾಚಿತ್ರಗಳನ್ನು ನೋಡಿದರೆ ಒಂದು ಕ್ಷಣ ಅಲ್ಲಿಗೆ ಹೋಗಿ ಬಂದ ಅನುಭವವಾಗುತ್ತದೆ. ಛಾಯಾಚಿತ್ರಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ’ ಎಂದು ಹೇಳಿದರು.
ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಅನೂರ್ ರೆಡ್ಡಿ, ‘ಸಾಹಸ ಕ್ರೀಡೆ ಅಥವಾ ಆ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಹೋಗುವವರು ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ನೀಡಬೇಕು’ ಎಂದರು.
ಛಾಯಚಿತ್ರಗಾರರಾದ ಅನೀತ್ ಬಿಸ್ವಾಸ್, ಅರುಣಾ ಚಂದರಾಜು, ಬಿ.ಎಸ್.ಪ್ರಸಾದ್, ಹೇಮಂತ್ ಸೋರೆಗ, ಎಸ್.ದೇವೇಂದ್ರ ಕುಮಾರ್, ಟಿ.ಕೇಶವಮೂರ್ತಿ, ಬಿ.ಮುರಳಿ ಕೃಷ್ಣನ್, ರಾಜೇಶ್ ಮಣಕ್ಕಲ್, ಸಿ.ಆರ್.ಸತ್ಯನಾರಾಯಣ, ಕೆ.ಶಿವು, ಸುಶೀಲಾ ನಾಯರ್, ಸುನಾದ್ ಸಂಪತ್, ತೌಶಿಕ್ ಮಂಡಲ್, ದಕ್ಷಿಣ ಆಫ್ರಿಕಾ, ಥೈಲ್ಯಾಂಡ್ನ ಪ್ರವಾಸೋದ್ಯಮ ಇಲಾಖೆ, ಜಂಗಲ್ ಲಾಡ್ಜಸ್, ರೆಸಾರ್ಟ್ಸ್ ಮತ್ತು ಪ್ರವಾಸೋದ್ಯಮ ಇಲಾಖೆಯ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.
ಪ್ರದರ್ಶನವು ವಸಂತನಗರದ ಅಲಯನ್ಸ್ ಫ್ರಾನ್ಸೆಯಲ್ಲಿ ಜನವರಿ 5 ರವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಇರಲಿದೆ. ಪ್ರದರ್ಶನಕ್ಕೆ ಪ್ರವೇಶ ಉಚಿತ.