<p><strong>ಬೆಂಗಳೂರು:</strong> ‘ಬಹುದಿನಗಳಿಂದ ನಿರೀಕ್ಷಿಸಿದ್ದ ಸ್ವಾತಂತ್ರ್ಯ ದೇಶ ವಿಭಜನೆ ಮೂಲಕ ಸಿಕ್ಕಿದೆ. ಈಗನಾನು ಹೇಳಲು ಏನು ಉಳಿದಿದೆ? ಗಾಂಧಿಗೆ ಇಂಗ್ಲಿಷ್ ಸಂಪೂರ್ಣವಾಗಿ ಮರೆತುಹೋಗಿದೆ ಎಂದು ಆ ವರದಿಗಾರರಿಗೆ ಹೇಳಿಬಿಡಿ’<br /> <br /> –1947ರ ಆಗಸ್ಟ್ 15ರಂದು ಬಿಬಿಸಿ ಸುದ್ದಿಸಂಸ್ಥೆ ಪ್ರತಿನಿಧಿಗಳು ಹೇಳಿಕೆ ಪಡೆಯಲು ಬಂದಾಗ, ಮಹಾತ್ಮ ಗಾಂಧಿ ತಕ್ಷಣ ಕೊಟ್ಟ ಪ್ರತಿಕ್ರಿಯೆ ಇದಾಗಿತ್ತಂತೆ. ಗಾಂಧೀಜಿ ಬದುಕಿನ ಇಂತಹ ಹಲವು ಸನ್ನಿವೇಶಗಳನ್ನು ಹೆಕ್ಕಿ ತೆಗೆದವರು ಅವರ ಮೊಮ್ಮಗ ರಾಜಮೋಹನ್ ಗಾಂಧಿ.<br /> <br /> ನಗರದ ಬಾರ್ಟನ್, ಸನ್ ಅಂಡ್ ಕಂಪೆನಿ ಭಾನುವಾರ ಏರ್ಪಡಿಸಿದ್ದ ‘ಮಹಾತ್ಮ ಗಾಂಧಿ: ಎಟರ್ನಲ್ ಇನ್ಸ್ಪಿರೇಷನ್’ ಕೃತಿ ಹಾಗೂ ಗಾಂಧೀಜಿ ಜೀವನಗಾಥೆ ಸಾರುವ ಬೆಳ್ಳಿ ಪದಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ದೇಶ ವಿಭಜನೆ ಮಹಾತ್ಮನಿಗೆ ಬೇಕಿರಲಿಲ್ಲ. ಹೀಗಾಗಿ ಅಖಂಡ ಭಾರತಕ್ಕೆ ಮಹಮ್ಮದ್ ಅಲಿ ಜಿನ್ನಾ ಅವರನ್ನು ಪ್ರಧಾನಿ ಮಾಡಲು ಅವರು ಹೊರಟಿ<br /> ದ್ದರು. ಆದರೆ, ಅಷ್ಟರಲ್ಲಾಗಲೇ ದೇಶ ವಿಭಜನೆಗೆ ಯೋಜನೆ ರೂಪಿಸಿದ್ದ ಲಾರ್ಡ್ ಮೌಂಟ್ ಬ್ಯಾಟನ್, ಆ ಕನಸು ಕೈಗೂಡದಂತೆ ಮಾಡಿದರು’ ಎಂದರು.<br /> ‘1947ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲಿ ಆಚರಿಸಬೇಕು ಎನ್ನುವ ಗೊಂದಲ ಗಾಂಧೀಜಿಗೆ ಇತ್ತು. ಕೊನೆಗೆ ಅವರು ಕೋಮು ಸಂಘರ್ಷ ಹೆಚ್ಚಾಗಿದ್ದ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಕಳೆಯಲು ನಿರ್ಧರಿಸಿದರು’ ಎಂದು ಅವರು ವಿವರಿಸಿದರು.<br /> <br /> ‘ಸ್ವಾತಂತ್ರ್ಯ ಸಿಕ್ಕ ಮೂರೇ ದಿನದಲ್ಲಿ ಗಾಂಧೀಜಿ, ಈದ್ ಹಬ್ಬದ ಅಂಗವಾಗಿ ಪ್ರಾರ್ಥನೆ ಸಂಘಟಿಸಿದಾಗ ಸುಮಾರು ಐದು ಲಕ್ಷ ಹಿಂದೂ – ಮುಸ್ಲಿಮರು ನೆರೆದಿದ್ದರು’ ಎಂದು ಹೇಳಿದರು. ‘ನಮ್ಮಂತೆಯೇ ಸಾಮಾನ್ಯ ವ್ಯಕ್ತಿಯಾಗಿದ್ದ ಗಾಂಧೀಜಿ ಅಸಾಮಾನ್ಯ ಎನಿಸಿದ್ದನ್ನು ಸಾಧಿಸಿ ತೋರಿದರು’ ಎಂದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ಬಾರ್ಟನ್, ಸನ್ ಅಂಡ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಭರತ್ ಮೆಹ್ತಾ, ‘ಶಾಲಾ ದಿನಗಳಲ್ಲಿ ಅಂಜುಬುರುಕ ಹುಡುಗನಾಗಿದ್ದ ಮೋಹನದಾಸ್, ಜಗತ್ತೇ ಆರಾಧಿಸುವಂತಹ ಮಹಾತ್ಮನಾಗಿ ಬೆಳೆದ ಕಥೆ ನನ್ನನ್ನು ಮತ್ತೆ ಮತ್ತೆ ಕಾಡಿದೆ. ನನ್ನೊಳಗಿನ ಆ ತುಮುಲ ಈಗ ಪುಸ್ತಕವಾಗಿ ಹೊರಬಂದಿದೆ’ ಎಂದರು.<br /> <br /> ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸರ್ವೋದಯ ಇಂಟರ್ನ್ಯಾಷನಲ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಪಿ.ಎ.ನಸರತ್, ‘ಕೋಮು ಸಾಮರಸ್ಯಕ್ಕೆ ನಾವೆಲ್ಲ ಕಾರಣವಾಗುವ ಮೂಲಕ ಗಾಂಧೀಜಿ ಈ ದೇಶದಲ್ಲಿ ಮತ್ತೆ ನಗುವಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ’ ಎಂದರು.<br /> <br /> ಬಯೊಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ‘ಗಾಂಧಿ ತತ್ವಗಳು ಇಂದಿನ ಜಗತ್ತಿಗೆ ಹೊಂದುವುದಿಲ್ಲ ಎಂಬ ಮಾತುಗಳಲ್ಲಿ ಯಾವುದೇ ಹುರು<br /> ಳಿಲ್ಲ. ಶಿಕ್ಷಣ, ವ್ಯಾಪಾರ, ರಾಜಕಾರಣ ಕುರಿತಂತೆ ಅವರು ಹೇಳಿದ ಏಳು ಪಾಪಗಳಿಂದ ದೂರವಿದ್ದರೆ ಸಾಕು, ದೇಶದ ಚಿತ್ರಣವೇ ಬದಲಾಗುತ್ತದೆ’ ಎಂದರು.<br /> <br /> <strong>ಬೆಳ್ಳಿ ಪದಕ</strong><br /> ಬೆಳ್ಳಿ ಸಾಮಗ್ರಿಗಳ ತಯಾರಕರೂ ಆಗಿರುವ ಭರತ್ ಮೆಹ್ತಾ ಗಾಂಧೀಜಿ ಅವರ ಜೀವನಗಾಥೆ ಸಾರುವ ಬೆಳ್ಳಿ ಪದಕ ತಯಾರಿಸಿದ್ದಾರೆ. ಮೂರು ಇಂಚು ಸುತ್ತಳತೆಯ ಈ ಪದಕದ ಒಂದು ಬದಿಯಲ್ಲಿ ಗಾಂಧೀಜಿ ಅವರ ದೊಡ್ಡ ಚಿತ್ರವಿದೆ. ಅದರ ಇನ್ನೊಂದು ಬದಿಯಲ್ಲಿ ಗಾಂಧೀಜಿ ಅವರ ಸತ್ಯ, ಸತ್ಯಾಗ್ರಹ ಹಾಗೂ ಸ್ವದೇಶಿ ತತ್ವಗಳನ್ನು ಬಿಂಬಿಸುವ ರೂಪಕಗಳಿವೆ.</p>.<p>ಈ ಪದಕ ಹಾಗೂ ‘ಮಹಾತ್ಮ ಗಾಂಧಿ: ಎಟರ್ನಲ್ ಇನ್ಸ್ಪಿರೇಷನ್’ ಕೃತಿ ಇರುವ ಕಟ್ಟಿಗೆಯ ಕೇಸ್ಗೆ ₹ 2,700 ಬೆಲೆ ನಿಗದಿ ಮಾಡಲಾಗಿದೆ. ಪದಕ ಮಾರಾಟಕ್ಕೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದೆ. ಮಾರಾಟದಿಂದ ಬಂದ ಲಾಭಾಂಶದ ಶೇ 20 ಹಣವನ್ನು ಸಬರಮತಿ ಆಶ್ರಮ ಹಾಗೂ ಮಣಿ ಭವನಕ್ಕೆ ದೇಣಿಗೆ ನೀಡಲಾಗುತ್ತದೆ ಎಂದು ಮೆಹ್ತಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಬಹುದಿನಗಳಿಂದ ನಿರೀಕ್ಷಿಸಿದ್ದ ಸ್ವಾತಂತ್ರ್ಯ ದೇಶ ವಿಭಜನೆ ಮೂಲಕ ಸಿಕ್ಕಿದೆ. ಈಗನಾನು ಹೇಳಲು ಏನು ಉಳಿದಿದೆ? ಗಾಂಧಿಗೆ ಇಂಗ್ಲಿಷ್ ಸಂಪೂರ್ಣವಾಗಿ ಮರೆತುಹೋಗಿದೆ ಎಂದು ಆ ವರದಿಗಾರರಿಗೆ ಹೇಳಿಬಿಡಿ’<br /> <br /> –1947ರ ಆಗಸ್ಟ್ 15ರಂದು ಬಿಬಿಸಿ ಸುದ್ದಿಸಂಸ್ಥೆ ಪ್ರತಿನಿಧಿಗಳು ಹೇಳಿಕೆ ಪಡೆಯಲು ಬಂದಾಗ, ಮಹಾತ್ಮ ಗಾಂಧಿ ತಕ್ಷಣ ಕೊಟ್ಟ ಪ್ರತಿಕ್ರಿಯೆ ಇದಾಗಿತ್ತಂತೆ. ಗಾಂಧೀಜಿ ಬದುಕಿನ ಇಂತಹ ಹಲವು ಸನ್ನಿವೇಶಗಳನ್ನು ಹೆಕ್ಕಿ ತೆಗೆದವರು ಅವರ ಮೊಮ್ಮಗ ರಾಜಮೋಹನ್ ಗಾಂಧಿ.<br /> <br /> ನಗರದ ಬಾರ್ಟನ್, ಸನ್ ಅಂಡ್ ಕಂಪೆನಿ ಭಾನುವಾರ ಏರ್ಪಡಿಸಿದ್ದ ‘ಮಹಾತ್ಮ ಗಾಂಧಿ: ಎಟರ್ನಲ್ ಇನ್ಸ್ಪಿರೇಷನ್’ ಕೃತಿ ಹಾಗೂ ಗಾಂಧೀಜಿ ಜೀವನಗಾಥೆ ಸಾರುವ ಬೆಳ್ಳಿ ಪದಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ದೇಶ ವಿಭಜನೆ ಮಹಾತ್ಮನಿಗೆ ಬೇಕಿರಲಿಲ್ಲ. ಹೀಗಾಗಿ ಅಖಂಡ ಭಾರತಕ್ಕೆ ಮಹಮ್ಮದ್ ಅಲಿ ಜಿನ್ನಾ ಅವರನ್ನು ಪ್ರಧಾನಿ ಮಾಡಲು ಅವರು ಹೊರಟಿ<br /> ದ್ದರು. ಆದರೆ, ಅಷ್ಟರಲ್ಲಾಗಲೇ ದೇಶ ವಿಭಜನೆಗೆ ಯೋಜನೆ ರೂಪಿಸಿದ್ದ ಲಾರ್ಡ್ ಮೌಂಟ್ ಬ್ಯಾಟನ್, ಆ ಕನಸು ಕೈಗೂಡದಂತೆ ಮಾಡಿದರು’ ಎಂದರು.<br /> ‘1947ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲಿ ಆಚರಿಸಬೇಕು ಎನ್ನುವ ಗೊಂದಲ ಗಾಂಧೀಜಿಗೆ ಇತ್ತು. ಕೊನೆಗೆ ಅವರು ಕೋಮು ಸಂಘರ್ಷ ಹೆಚ್ಚಾಗಿದ್ದ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಕಳೆಯಲು ನಿರ್ಧರಿಸಿದರು’ ಎಂದು ಅವರು ವಿವರಿಸಿದರು.<br /> <br /> ‘ಸ್ವಾತಂತ್ರ್ಯ ಸಿಕ್ಕ ಮೂರೇ ದಿನದಲ್ಲಿ ಗಾಂಧೀಜಿ, ಈದ್ ಹಬ್ಬದ ಅಂಗವಾಗಿ ಪ್ರಾರ್ಥನೆ ಸಂಘಟಿಸಿದಾಗ ಸುಮಾರು ಐದು ಲಕ್ಷ ಹಿಂದೂ – ಮುಸ್ಲಿಮರು ನೆರೆದಿದ್ದರು’ ಎಂದು ಹೇಳಿದರು. ‘ನಮ್ಮಂತೆಯೇ ಸಾಮಾನ್ಯ ವ್ಯಕ್ತಿಯಾಗಿದ್ದ ಗಾಂಧೀಜಿ ಅಸಾಮಾನ್ಯ ಎನಿಸಿದ್ದನ್ನು ಸಾಧಿಸಿ ತೋರಿದರು’ ಎಂದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ಬಾರ್ಟನ್, ಸನ್ ಅಂಡ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಭರತ್ ಮೆಹ್ತಾ, ‘ಶಾಲಾ ದಿನಗಳಲ್ಲಿ ಅಂಜುಬುರುಕ ಹುಡುಗನಾಗಿದ್ದ ಮೋಹನದಾಸ್, ಜಗತ್ತೇ ಆರಾಧಿಸುವಂತಹ ಮಹಾತ್ಮನಾಗಿ ಬೆಳೆದ ಕಥೆ ನನ್ನನ್ನು ಮತ್ತೆ ಮತ್ತೆ ಕಾಡಿದೆ. ನನ್ನೊಳಗಿನ ಆ ತುಮುಲ ಈಗ ಪುಸ್ತಕವಾಗಿ ಹೊರಬಂದಿದೆ’ ಎಂದರು.<br /> <br /> ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸರ್ವೋದಯ ಇಂಟರ್ನ್ಯಾಷನಲ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಪಿ.ಎ.ನಸರತ್, ‘ಕೋಮು ಸಾಮರಸ್ಯಕ್ಕೆ ನಾವೆಲ್ಲ ಕಾರಣವಾಗುವ ಮೂಲಕ ಗಾಂಧೀಜಿ ಈ ದೇಶದಲ್ಲಿ ಮತ್ತೆ ನಗುವಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ’ ಎಂದರು.<br /> <br /> ಬಯೊಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ‘ಗಾಂಧಿ ತತ್ವಗಳು ಇಂದಿನ ಜಗತ್ತಿಗೆ ಹೊಂದುವುದಿಲ್ಲ ಎಂಬ ಮಾತುಗಳಲ್ಲಿ ಯಾವುದೇ ಹುರು<br /> ಳಿಲ್ಲ. ಶಿಕ್ಷಣ, ವ್ಯಾಪಾರ, ರಾಜಕಾರಣ ಕುರಿತಂತೆ ಅವರು ಹೇಳಿದ ಏಳು ಪಾಪಗಳಿಂದ ದೂರವಿದ್ದರೆ ಸಾಕು, ದೇಶದ ಚಿತ್ರಣವೇ ಬದಲಾಗುತ್ತದೆ’ ಎಂದರು.<br /> <br /> <strong>ಬೆಳ್ಳಿ ಪದಕ</strong><br /> ಬೆಳ್ಳಿ ಸಾಮಗ್ರಿಗಳ ತಯಾರಕರೂ ಆಗಿರುವ ಭರತ್ ಮೆಹ್ತಾ ಗಾಂಧೀಜಿ ಅವರ ಜೀವನಗಾಥೆ ಸಾರುವ ಬೆಳ್ಳಿ ಪದಕ ತಯಾರಿಸಿದ್ದಾರೆ. ಮೂರು ಇಂಚು ಸುತ್ತಳತೆಯ ಈ ಪದಕದ ಒಂದು ಬದಿಯಲ್ಲಿ ಗಾಂಧೀಜಿ ಅವರ ದೊಡ್ಡ ಚಿತ್ರವಿದೆ. ಅದರ ಇನ್ನೊಂದು ಬದಿಯಲ್ಲಿ ಗಾಂಧೀಜಿ ಅವರ ಸತ್ಯ, ಸತ್ಯಾಗ್ರಹ ಹಾಗೂ ಸ್ವದೇಶಿ ತತ್ವಗಳನ್ನು ಬಿಂಬಿಸುವ ರೂಪಕಗಳಿವೆ.</p>.<p>ಈ ಪದಕ ಹಾಗೂ ‘ಮಹಾತ್ಮ ಗಾಂಧಿ: ಎಟರ್ನಲ್ ಇನ್ಸ್ಪಿರೇಷನ್’ ಕೃತಿ ಇರುವ ಕಟ್ಟಿಗೆಯ ಕೇಸ್ಗೆ ₹ 2,700 ಬೆಲೆ ನಿಗದಿ ಮಾಡಲಾಗಿದೆ. ಪದಕ ಮಾರಾಟಕ್ಕೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದೆ. ಮಾರಾಟದಿಂದ ಬಂದ ಲಾಭಾಂಶದ ಶೇ 20 ಹಣವನ್ನು ಸಬರಮತಿ ಆಶ್ರಮ ಹಾಗೂ ಮಣಿ ಭವನಕ್ಕೆ ದೇಣಿಗೆ ನೀಡಲಾಗುತ್ತದೆ ಎಂದು ಮೆಹ್ತಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>