<p><strong>ಬೆಂಗಳೂರು:</strong> `ಕುವೆಂಪು ಅವರ ದಾರ್ಶನಿಕತೆಯನ್ನು ಹಸಿರಿನ ಪರಿಭಾಷೆಯಲ್ಲಿ ಹೇಳುವ ಪ್ರಯತ್ನ ಕವಿಶೈಲದ ಕವಿತೆಗಳು~ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಹೇಳಿದರು. ನಗರದಲ್ಲಿ ಇತ್ತೀಚೆಗೆ ನಡೆದ ಬೇಲೂರು ರಘುನಂದನ್ ಅವರ `ಕವಿಶೈಲದ ಕವಿತೆಗಳು~ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, `ಹಸಿರಿನ ಪರಿಭಾಷೆಯನ್ನು ಸಮರ್ಥವಾಗಿ ಬಳಸಿರುವ ಕವಿ ಬೇಲೂರು ರಘುನಂದನ್ ಅವರ ಎಲ್ಲ ಕವಿತೆಗಳಲ್ಲೂ ಕುವೆಂಪು ಚಿತ್ರಣ ಹಾಗೂ ಹಸಿರು ಮೈವೆತ್ತಿದೆ~ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.<br /> <br /> ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್, `ಕುವೆಂಪು ಅವರನ್ನು ಒಂದು ಪರಿಮಿತಿಯೊಳಗೆ ಹಿಡಿದಿಡುವಲ್ಲಿ ಕವಿ ಯಶಸ್ವಿಯಾಗಿದ್ದಾರೆ. ಸಂಕಲನದ ವಸ್ತುವಿನಲ್ಲಿ ಮಹತ್ವವಿದೆ. ಕುವೆಂಪು ಅವರ ಬಗ್ಗೆ ಕವಿ ಸೃಷ್ಟಿಸಿರುವ ಉಪಮೆಗಳು ಹೊಸದಾಗಿವೆ. ಕಾವ್ಯದ ಭಾಷೆಗೆ ಕವಿ ಇನ್ನಷ್ಟು ಶ್ರಮ ಪಡಬೇಕು~ ಎಂದರು.<br /> <br /> ಹಿರಿಯ ವರ್ಣಚಿತ್ರ ಕಲಾವಿದ ಎಂ.ಬಿ.ಪಾಟೀಲ್ ಮಾತನಾಡಿ, `ಕವಿ ಮತ್ತು ಕಲಾವಿದನ ಸಂಯೋಜನೆ ಕವಿಶೈಲದಲ್ಲಿ ಅಪೂರ್ವವಾಗಿ ಮೂಡಿಬಂದಿದೆ. ಕುವೆಂಪು ಹಾಗೂ ಕೆ.ಟಿ.ಶಿವಪ್ರಸಾದ್ ಕವಿಶೈಲದಲ್ಲಿ ಸಂಯೋಜನೆಗೊಂಡಂತೆ ಬೇಲೂರು ರಘುನಂದನ್ ಹಾಗೂ ಮುನಿಯಪ್ಪ ಸಂಕಲನದ ಮೂಲಕ ಎರಡು ಕಲೆಗಳ ಸಂಯೋಜನೆಯನ್ನು ಉತ್ತಮವಾಗಿ ಸಾಧಿಸಿದ್ದಾರೆ~ ಎಂದು ನುಡಿದರು.<br /> <br /> ಕುವೆಂಪು ಕವಿತೆಗಳ ಗೀತ ಗಾಯನ ಹಾಗೂ ವರ್ಣಚಿತ್ರ ಕಲಾವಿದ ಮುನಿಯಪ್ಪ ಅವರ ಚಿತ್ರಗಳ ಪ್ರದರ್ಶನ ನಡೆಯಿತು. ಹಿರಿಯ ಸಂಶೋಧಕ ಡಾ.ಹಂಪಾ ನಾಗರಾಜಯ್ಯ, ಸಾಹಿತಿ ಡಾ.ಮಳಲಿ ವಸಂತಕುಮಾರ್, ಸಂಕಲನದ ಕರ್ತೃ ಬೇಲೂರು ರಘುನಂದನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಕುವೆಂಪು ಅವರ ದಾರ್ಶನಿಕತೆಯನ್ನು ಹಸಿರಿನ ಪರಿಭಾಷೆಯಲ್ಲಿ ಹೇಳುವ ಪ್ರಯತ್ನ ಕವಿಶೈಲದ ಕವಿತೆಗಳು~ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಹೇಳಿದರು. ನಗರದಲ್ಲಿ ಇತ್ತೀಚೆಗೆ ನಡೆದ ಬೇಲೂರು ರಘುನಂದನ್ ಅವರ `ಕವಿಶೈಲದ ಕವಿತೆಗಳು~ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, `ಹಸಿರಿನ ಪರಿಭಾಷೆಯನ್ನು ಸಮರ್ಥವಾಗಿ ಬಳಸಿರುವ ಕವಿ ಬೇಲೂರು ರಘುನಂದನ್ ಅವರ ಎಲ್ಲ ಕವಿತೆಗಳಲ್ಲೂ ಕುವೆಂಪು ಚಿತ್ರಣ ಹಾಗೂ ಹಸಿರು ಮೈವೆತ್ತಿದೆ~ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.<br /> <br /> ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್, `ಕುವೆಂಪು ಅವರನ್ನು ಒಂದು ಪರಿಮಿತಿಯೊಳಗೆ ಹಿಡಿದಿಡುವಲ್ಲಿ ಕವಿ ಯಶಸ್ವಿಯಾಗಿದ್ದಾರೆ. ಸಂಕಲನದ ವಸ್ತುವಿನಲ್ಲಿ ಮಹತ್ವವಿದೆ. ಕುವೆಂಪು ಅವರ ಬಗ್ಗೆ ಕವಿ ಸೃಷ್ಟಿಸಿರುವ ಉಪಮೆಗಳು ಹೊಸದಾಗಿವೆ. ಕಾವ್ಯದ ಭಾಷೆಗೆ ಕವಿ ಇನ್ನಷ್ಟು ಶ್ರಮ ಪಡಬೇಕು~ ಎಂದರು.<br /> <br /> ಹಿರಿಯ ವರ್ಣಚಿತ್ರ ಕಲಾವಿದ ಎಂ.ಬಿ.ಪಾಟೀಲ್ ಮಾತನಾಡಿ, `ಕವಿ ಮತ್ತು ಕಲಾವಿದನ ಸಂಯೋಜನೆ ಕವಿಶೈಲದಲ್ಲಿ ಅಪೂರ್ವವಾಗಿ ಮೂಡಿಬಂದಿದೆ. ಕುವೆಂಪು ಹಾಗೂ ಕೆ.ಟಿ.ಶಿವಪ್ರಸಾದ್ ಕವಿಶೈಲದಲ್ಲಿ ಸಂಯೋಜನೆಗೊಂಡಂತೆ ಬೇಲೂರು ರಘುನಂದನ್ ಹಾಗೂ ಮುನಿಯಪ್ಪ ಸಂಕಲನದ ಮೂಲಕ ಎರಡು ಕಲೆಗಳ ಸಂಯೋಜನೆಯನ್ನು ಉತ್ತಮವಾಗಿ ಸಾಧಿಸಿದ್ದಾರೆ~ ಎಂದು ನುಡಿದರು.<br /> <br /> ಕುವೆಂಪು ಕವಿತೆಗಳ ಗೀತ ಗಾಯನ ಹಾಗೂ ವರ್ಣಚಿತ್ರ ಕಲಾವಿದ ಮುನಿಯಪ್ಪ ಅವರ ಚಿತ್ರಗಳ ಪ್ರದರ್ಶನ ನಡೆಯಿತು. ಹಿರಿಯ ಸಂಶೋಧಕ ಡಾ.ಹಂಪಾ ನಾಗರಾಜಯ್ಯ, ಸಾಹಿತಿ ಡಾ.ಮಳಲಿ ವಸಂತಕುಮಾರ್, ಸಂಕಲನದ ಕರ್ತೃ ಬೇಲೂರು ರಘುನಂದನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>