<p>ಹೊಸಕೋಟೆ: ಮನೆಯೊಂದರ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ಸುಮಾರು ್ಙ3 ಲಕ್ಷ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ಕಳವು ಮಾಡಿದ್ದಾರೆ.<br /> <br /> ಪಟ್ಟಣದ ವಿನಾಯಕ ನಗರದ ಸಿಂಗ್ ಬಡಾವಣೆಯಲ್ಲಿನ ರಾಮಚಂದ್ರರಾವ್ ಅವರ ಮನೆಯಲ್ಲಿ ಗುರುವಾರ ರಾತ್ರಿ ಈ ಕಳವು ನಡೆದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ರಾಮಚಂದ್ರರಾವ್ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಪತ್ನಿ ಹಾಗೂ ಮಕ್ಕಳು ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ರಾಮಚಂದ್ರರಾವ್ ಪುತ್ರಿ ಹೇಮಾವತಿ ಮನೆಗೆ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂತು.<br /> <br /> <strong>ಕೊಲೆ ಆರೋಪಿಗಳ ಬಂಧನ</strong><br /> ಇಲ್ಲಿಗೆ ಸಮೀಪದ ಕಣ್ಣೂರಹಳ್ಳಿ ಗ್ರಾಮದಲ್ಲಿ ಮಾರ್ಚ್ 28 ರಂದು ನಡೆದ ವೃದ್ಧರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೃದ್ಧರ ಇಬ್ಬರು ಮೊಮ್ಮಕ್ಕಳನ್ನು ಬಂಧಿಸಿದ್ದಾರೆ.<br /> <br /> ಕಣ್ಣೂರಹಳ್ಳಿ ಗ್ರಾಮದ ಕುಮಾರ ಅಂಬೇಡ್ಕರ್ (26) ಹಾಗೂ ದೊಮ್ಮಸಂದ್ರದ ನಾಗರಾಜ್ (26) ಬಂಧಿತರು. ಕೊಲೆಯಾದ ಅಣ್ಣಯ್ಯಪ್ಪ (75) ಒಂಟಿಯಾಗಿ ವಾಸಿಸುತ್ತಿದ್ದು ಅವರಿಗೆ ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.<br /> <br /> ಅವರು ಆಸ್ತಿಯನ್ನು ಪುತ್ರಿಯೊಬ್ಬಳ ಮಗನಿಗೆ ಬರೆದು ಕೊಡಲು ಮುಂದಾಗಿದ್ದ ವಿಚಾರ ಆರೋಪಿಗಳಿಗೆ ಗೊತ್ತಾಯಿತು. ಆಸ್ತಿ ಕಬಳಿಸುವಲ್ಲಿ ಸಂಚು ರೂಪಿಸಿದ ಅವರು ಇನ್ನಿಬ್ಬರ ಜೊತೆ ಸೇರಿ ರಾಡಿನಿಂದ ತಲೆಗೆ ಹೊಡೆದು ತಾತನ ಕೊಲೆ ಮಾಡಿದ್ದರು.<br /> <br /> ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಕೋಟೆ: ಮನೆಯೊಂದರ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ಸುಮಾರು ್ಙ3 ಲಕ್ಷ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ಕಳವು ಮಾಡಿದ್ದಾರೆ.<br /> <br /> ಪಟ್ಟಣದ ವಿನಾಯಕ ನಗರದ ಸಿಂಗ್ ಬಡಾವಣೆಯಲ್ಲಿನ ರಾಮಚಂದ್ರರಾವ್ ಅವರ ಮನೆಯಲ್ಲಿ ಗುರುವಾರ ರಾತ್ರಿ ಈ ಕಳವು ನಡೆದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ರಾಮಚಂದ್ರರಾವ್ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಪತ್ನಿ ಹಾಗೂ ಮಕ್ಕಳು ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ರಾಮಚಂದ್ರರಾವ್ ಪುತ್ರಿ ಹೇಮಾವತಿ ಮನೆಗೆ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂತು.<br /> <br /> <strong>ಕೊಲೆ ಆರೋಪಿಗಳ ಬಂಧನ</strong><br /> ಇಲ್ಲಿಗೆ ಸಮೀಪದ ಕಣ್ಣೂರಹಳ್ಳಿ ಗ್ರಾಮದಲ್ಲಿ ಮಾರ್ಚ್ 28 ರಂದು ನಡೆದ ವೃದ್ಧರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೃದ್ಧರ ಇಬ್ಬರು ಮೊಮ್ಮಕ್ಕಳನ್ನು ಬಂಧಿಸಿದ್ದಾರೆ.<br /> <br /> ಕಣ್ಣೂರಹಳ್ಳಿ ಗ್ರಾಮದ ಕುಮಾರ ಅಂಬೇಡ್ಕರ್ (26) ಹಾಗೂ ದೊಮ್ಮಸಂದ್ರದ ನಾಗರಾಜ್ (26) ಬಂಧಿತರು. ಕೊಲೆಯಾದ ಅಣ್ಣಯ್ಯಪ್ಪ (75) ಒಂಟಿಯಾಗಿ ವಾಸಿಸುತ್ತಿದ್ದು ಅವರಿಗೆ ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.<br /> <br /> ಅವರು ಆಸ್ತಿಯನ್ನು ಪುತ್ರಿಯೊಬ್ಬಳ ಮಗನಿಗೆ ಬರೆದು ಕೊಡಲು ಮುಂದಾಗಿದ್ದ ವಿಚಾರ ಆರೋಪಿಗಳಿಗೆ ಗೊತ್ತಾಯಿತು. ಆಸ್ತಿ ಕಬಳಿಸುವಲ್ಲಿ ಸಂಚು ರೂಪಿಸಿದ ಅವರು ಇನ್ನಿಬ್ಬರ ಜೊತೆ ಸೇರಿ ರಾಡಿನಿಂದ ತಲೆಗೆ ಹೊಡೆದು ತಾತನ ಕೊಲೆ ಮಾಡಿದ್ದರು.<br /> <br /> ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>