ಕೆಂಗೇರಿ: ‘ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಸಾಂಸ್ಕೃತಿಕ ನೆಲೆಗಟ್ಟು ರೂಪಿಸಬೇಕು. ಹೀಗಾಗಿ, ನಮ್ಮ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದು ಒಳ್ಳೆಯ ಬೆಳವಣಿಗೆ ಎಂದು ಬೆಂಗಳೂರು ವಿ.ವಿಯ ನಿವೃತ್ತ ಕುಲಪತಿ ಡಾ. ಸಿದ್ದಪ್ಪ ಹೇಳಿದರು.
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ 2015ನೇ ಸಾಲಿನ ವಿಭಾಗೀಯ ಮಟ್ಟದ ಕಾಲೇಜು ರಂಗೋತ್ಸವ ಉದ್ಘಾಟಿಸಿ ಮಾತನಾಡಿದರು.
‘ಈ ಹಿಂದೆ ರಂಗಭೂಮಿ ಕಲಾವಿದರುಗಳಿಗೆ ಅಷ್ಟೇನೂ ಗೌರವ ಇರಲಿಲ್ಲ. ವಿದ್ಯಾರ್ಥಿ ಜೀವನದಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳನ್ನು ರೂಪಿಸಿಕೊಡುವ ಮತ್ತು ಅದನ್ನು ಉತ್ತೇಜಿಸುವ ಕಾಲೇಜು ಶಿಕ್ಷಣವೂ ಅಗತ್ಯವಾಗಿ ಬೇಕು’ ಎಂದು ಅವರು ಹೇಳಿದರು.
ರಂಗನಟ ಬಿ.ವಿ. ರಾಜರಾಂ, ‘ವ್ಯಕ್ತಿಗೆ ನಾಯಕತ್ವದ ಗುಣ ಹಾಗೂ ಶಕ್ತಿಯನ್ನು ರಂಗಭೂಮಿ ನೀಡಬಲ್ಲದು. ರಂಗಭೂಮಿಯ ಒಡನಾಟದಿಂದಾಗಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವ ಅವಕಾಶಗಳಿವೆ ಎಂದರು.