<p>ಬೆಂಗಳೂರು: ‘ಒಂದು ಪೆನ್ನು ಬೇಕೆಂದರೂ ನಮ್ಮೂರಿನಿಂದ 20 ಮೈಲು ದೂರ ಹೋಗಬೇಕು’ ಎಂದು ಬಿಹಾರ್ನ ಓರಾನ್ ಬುಡಕಟ್ಟಿನ ಸರವಣ ಕುಮಾರ್ ಬೇಸರ ವ್ಯಕ್ತಪಡಿಸಿದರು.<br /> <br /> ನೆಹರೂ ಯುವ ಕೇಂದ್ರ ಸಂಘಟನೆ (ಎನ್ವೈಕೆಎಸ್) ಮತ್ತು ಕೇಂದ್ರ ಗೃಹ ಸಚಿವಾಲಯದ ಸಹಯೋಗದಲ್ಲಿ ಗುರುವಾರ ಯವನಿಕಾದಲ್ಲಿ ಏರ್ಪಡಿಸಿದ್ದ 6ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದ ಸಮಾರೋಪದ ನಂತರ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು.<br /> <br /> ‘ಮೊದಲ ಬಾರಿ ಬೆಂಗಳೂರಿನಂತಹ ದೊಡ್ಡ ನಗರವನ್ನು ನೋಡುತ್ತಿದ್ದೇನೆ. ಇಲ್ಲಿ ಎಲ್ಲವೂ ಸಿಗುತ್ತದೆ. ಶಿಬಿರದಲ್ಲಿ ನಮ್ಮ ಸಂಸ್ಕೃತಿ, ಜೀವನ ಮತ್ತು ಸಮಸ್ಯೆಗಳನ್ನು ಹಂಚಿಕೊಂಡೆವು. ಇಲ್ಲಿರುವ ಅಭಿವೃದ್ಧಿ ನಮ್ಮಲ್ಲಿ ಏಕಿಲ್ಲ’ ಎಂದು ಪ್ರಶ್ನಿಸಿದರು.<br /> <br /> ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ.ಎ.ಗಣಪತಿ ಮಾತನಾಡಿ, ‘ಛತ್ತೀಸ್ಗಡ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಲ್ಲಿ ಜನರು ಒಂದೆಡೆ ನಕ್ಸಲರು ಮತ್ತೊಂದೆಡೆ ಪೊಲೀಸರ ಬಂದೂಕಿನ ಅಡಿಯಲ್ಲಿ ಬದುಕುತ್ತಿದ್ದಾರೆ. ಭದ್ರತೆ ಸಮಸ್ಯೆಯ ಕಾರಣದಿಂದ ಎಲ್ಲಾ ಸಾಮಾಜಿಕ ಸಂಘಟನೆಗಳು, ಅಭಿವೃದ್ಧಿಪರ ಸಂಸ್ಥೆಗಳು ಈ ರಾಜ್ಯಗಳಿಗೆ ಹೋಗಲು ಹಿಂದೇಟು ಹಾಕುತ್ತಿವೆ’ ಎಂದರು.<br /> <br /> ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ‘ಶೈಕ್ಷಣಿಕ ನೀತಿ, ಕೌಶಲ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮುಂತಾದ ನೀತಿಗಳನ್ನು ರೂಪಿಸುವಾಗ ಇಂತಹ ಕಾರ್ಯಕ್ರಮಗಳು ಸರ್ಕಾರದ ನೆರವಿಗೆ ಬರುತ್ತವೆ. ಬುಡಕಟ್ಟು ಯುವಕರನ್ನು ಮುಖ್ಯವಾಹಿನಿಗೆ ತರಲು ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಬೇಕು’ ಎಂದರು.<br /> <br /> ಬಿಹಾರ, ಛತ್ತೀಸ್ಗಡ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಿಂದ ಬಂದಿದ್ದ ಶಿಬಿರಾರ್ಥಿಗಳು ಸಹಶಿಬಿರಾರ್ಥಿಗಳನ್ನು ಬೀಳ್ಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.<br /> <br /> ‘ಇತರರ ಭಾಷೆ ಅರ್ಥವಾಗದಿದ್ದಾಗ ಸಮಸ್ಯೆಯಾಗುತ್ತಿತ್ತು. ಎಷ್ಟೋ ಬಾರಿ ಆಂಗಿಕ ಅಭಿನಯದ ಮೂಲಕವೇ ಮಾತನಾಡಿದ್ದೇನೆ. ಪಕ್ಕದ ಊರಿನವರೇ ತಿಳಿದಿರದ ನಮಗೆ ಇಲ್ಲಿ ಅನೇಕ ವಿಷಯಗಳನ್ನು ತಿಳಿಸಿದರು’ ಎನ್ನುತ್ತಾರೆ ಜಾರ್ಖಂಡ್ನ ಸೊಹ್ದಾಗ್ ಬುಡಕಟ್ಟಿನ ಜೂಮರ್ ಕಲಾವಿದ ಗುಲ್ಶನ್.<br /> <br /> ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಅಭಯ್ ಚಂದ್ರ ಜೈನ್, ಎನ್ವೈಕೆಎಸ್ನ ನಿರ್ದೇಶಕ ಡಾ. ಪ್ರಭಾ ಕಾಂತ್, ಎನ್ವೈಕೆಎಸ್ನ ದಕ್ಷಿಣ ವಲಯದ ನಿರ್ದೇಶಕ ಆರ್.ನಟರಾಜನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಒಂದು ಪೆನ್ನು ಬೇಕೆಂದರೂ ನಮ್ಮೂರಿನಿಂದ 20 ಮೈಲು ದೂರ ಹೋಗಬೇಕು’ ಎಂದು ಬಿಹಾರ್ನ ಓರಾನ್ ಬುಡಕಟ್ಟಿನ ಸರವಣ ಕುಮಾರ್ ಬೇಸರ ವ್ಯಕ್ತಪಡಿಸಿದರು.<br /> <br /> ನೆಹರೂ ಯುವ ಕೇಂದ್ರ ಸಂಘಟನೆ (ಎನ್ವೈಕೆಎಸ್) ಮತ್ತು ಕೇಂದ್ರ ಗೃಹ ಸಚಿವಾಲಯದ ಸಹಯೋಗದಲ್ಲಿ ಗುರುವಾರ ಯವನಿಕಾದಲ್ಲಿ ಏರ್ಪಡಿಸಿದ್ದ 6ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದ ಸಮಾರೋಪದ ನಂತರ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು.<br /> <br /> ‘ಮೊದಲ ಬಾರಿ ಬೆಂಗಳೂರಿನಂತಹ ದೊಡ್ಡ ನಗರವನ್ನು ನೋಡುತ್ತಿದ್ದೇನೆ. ಇಲ್ಲಿ ಎಲ್ಲವೂ ಸಿಗುತ್ತದೆ. ಶಿಬಿರದಲ್ಲಿ ನಮ್ಮ ಸಂಸ್ಕೃತಿ, ಜೀವನ ಮತ್ತು ಸಮಸ್ಯೆಗಳನ್ನು ಹಂಚಿಕೊಂಡೆವು. ಇಲ್ಲಿರುವ ಅಭಿವೃದ್ಧಿ ನಮ್ಮಲ್ಲಿ ಏಕಿಲ್ಲ’ ಎಂದು ಪ್ರಶ್ನಿಸಿದರು.<br /> <br /> ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ.ಎ.ಗಣಪತಿ ಮಾತನಾಡಿ, ‘ಛತ್ತೀಸ್ಗಡ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಲ್ಲಿ ಜನರು ಒಂದೆಡೆ ನಕ್ಸಲರು ಮತ್ತೊಂದೆಡೆ ಪೊಲೀಸರ ಬಂದೂಕಿನ ಅಡಿಯಲ್ಲಿ ಬದುಕುತ್ತಿದ್ದಾರೆ. ಭದ್ರತೆ ಸಮಸ್ಯೆಯ ಕಾರಣದಿಂದ ಎಲ್ಲಾ ಸಾಮಾಜಿಕ ಸಂಘಟನೆಗಳು, ಅಭಿವೃದ್ಧಿಪರ ಸಂಸ್ಥೆಗಳು ಈ ರಾಜ್ಯಗಳಿಗೆ ಹೋಗಲು ಹಿಂದೇಟು ಹಾಕುತ್ತಿವೆ’ ಎಂದರು.<br /> <br /> ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ‘ಶೈಕ್ಷಣಿಕ ನೀತಿ, ಕೌಶಲ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮುಂತಾದ ನೀತಿಗಳನ್ನು ರೂಪಿಸುವಾಗ ಇಂತಹ ಕಾರ್ಯಕ್ರಮಗಳು ಸರ್ಕಾರದ ನೆರವಿಗೆ ಬರುತ್ತವೆ. ಬುಡಕಟ್ಟು ಯುವಕರನ್ನು ಮುಖ್ಯವಾಹಿನಿಗೆ ತರಲು ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಬೇಕು’ ಎಂದರು.<br /> <br /> ಬಿಹಾರ, ಛತ್ತೀಸ್ಗಡ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಿಂದ ಬಂದಿದ್ದ ಶಿಬಿರಾರ್ಥಿಗಳು ಸಹಶಿಬಿರಾರ್ಥಿಗಳನ್ನು ಬೀಳ್ಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.<br /> <br /> ‘ಇತರರ ಭಾಷೆ ಅರ್ಥವಾಗದಿದ್ದಾಗ ಸಮಸ್ಯೆಯಾಗುತ್ತಿತ್ತು. ಎಷ್ಟೋ ಬಾರಿ ಆಂಗಿಕ ಅಭಿನಯದ ಮೂಲಕವೇ ಮಾತನಾಡಿದ್ದೇನೆ. ಪಕ್ಕದ ಊರಿನವರೇ ತಿಳಿದಿರದ ನಮಗೆ ಇಲ್ಲಿ ಅನೇಕ ವಿಷಯಗಳನ್ನು ತಿಳಿಸಿದರು’ ಎನ್ನುತ್ತಾರೆ ಜಾರ್ಖಂಡ್ನ ಸೊಹ್ದಾಗ್ ಬುಡಕಟ್ಟಿನ ಜೂಮರ್ ಕಲಾವಿದ ಗುಲ್ಶನ್.<br /> <br /> ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಅಭಯ್ ಚಂದ್ರ ಜೈನ್, ಎನ್ವೈಕೆಎಸ್ನ ನಿರ್ದೇಶಕ ಡಾ. ಪ್ರಭಾ ಕಾಂತ್, ಎನ್ವೈಕೆಎಸ್ನ ದಕ್ಷಿಣ ವಲಯದ ನಿರ್ದೇಶಕ ಆರ್.ನಟರಾಜನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>