<p><strong>ಬೆಂಗಳೂರು:</strong> ‘ಅಡ್ಡ ಪರಿಣಾಮಗಳಿಲ್ಲದೆ ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ನೀಡುವ ವಿಧಾನವನ್ನು ಭೌತ ವಿಜ್ಞಾನದ ತಂತ್ರಗಳನ್ನು ಬಳಸಿ ಅಭಿವೃದ್ಧಿಪಡಿಸಬಹುದು’ ಎಂದು ಪಿಟ್ಸ್ಬರ್ಗ್ನ ಕಾರ್ನಿಗೀ ಮೆಲನ್ ವಿಶ್ವವಿದ್ಯಾಲಯದ ಅಧ್ಯಕ್ಷ ಸುಬ್ರಾ ಸುರೇಶ್ ಅವರು ಹೇಳಿದರು.<br /> <br /> ಭಾರತೀಯ ವಿಜ್ಞಾನ ಸಂಸ್ಥೆಯು ಬುಧವಾರ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಉಪನ್ಯಾಸ ಮಾಲೆಯಲ್ಲಿ ‘ಎಂಜಿನಿಯರಿಂಗ್, ವಿಜ್ಞಾನ ಮತ್ತು ವೈದ್ಯಕೀಯ ತಂತ್ರಗಾರಿಕೆಗಳಿಂದ ರೋಗಗಳ ಅಧ್ಯಯನ’ ವಿಷಯ ಕುರಿತು ಅವರು ಮಾತನಾಡಿದರು.<br /> <br /> ‘ಕ್ಯಾನ್ಸರ್ ಗುಣಪಡಿಸಲು ಕಿಮೊಥೆರಪಿ ನೀಡುವಾಗ ಆರೋಗ್ಯವಂತ ಜೀವಕೋಶಗಳೂ ಸಾವನ್ನಪ್ಪುತ್ತವೆ. ಕೆಂಪು ರಕ್ತ ಕಣಗಳು ಗಡುಸಾಗುವುದು, ರಕ್ತನಾಳಗಳು ಕುಗ್ಗುವುದು ಮೊದಲಾದ ಅಡ್ಡ ಪರಿಣಾಮಗಳಿಗೆ ರೋಗಿ ತುತ್ತಾಗುತ್ತಾನೆ. ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸಾ ವಿಧಾನವನ್ನು ರೂಪಿಸುವ ನಿಟ್ಟಿನಲ್ಲಿ ಅನ್ವಯಿಕ ವಿಜ್ಞಾನದಲ್ಲಿ ಸಂಶೋಧನೆಗಳು ನಡೆಯುತ್ತಿವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಅಡ್ಡ ಪರಿಣಾಮಗಳಿಲ್ಲದೆ ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ನೀಡುವ ವಿಧಾನವನ್ನು ಭೌತ ವಿಜ್ಞಾನದ ತಂತ್ರಗಳನ್ನು ಬಳಸಿ ಅಭಿವೃದ್ಧಿಪಡಿಸಬಹುದು’ ಎಂದು ಪಿಟ್ಸ್ಬರ್ಗ್ನ ಕಾರ್ನಿಗೀ ಮೆಲನ್ ವಿಶ್ವವಿದ್ಯಾಲಯದ ಅಧ್ಯಕ್ಷ ಸುಬ್ರಾ ಸುರೇಶ್ ಅವರು ಹೇಳಿದರು.<br /> <br /> ಭಾರತೀಯ ವಿಜ್ಞಾನ ಸಂಸ್ಥೆಯು ಬುಧವಾರ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಉಪನ್ಯಾಸ ಮಾಲೆಯಲ್ಲಿ ‘ಎಂಜಿನಿಯರಿಂಗ್, ವಿಜ್ಞಾನ ಮತ್ತು ವೈದ್ಯಕೀಯ ತಂತ್ರಗಾರಿಕೆಗಳಿಂದ ರೋಗಗಳ ಅಧ್ಯಯನ’ ವಿಷಯ ಕುರಿತು ಅವರು ಮಾತನಾಡಿದರು.<br /> <br /> ‘ಕ್ಯಾನ್ಸರ್ ಗುಣಪಡಿಸಲು ಕಿಮೊಥೆರಪಿ ನೀಡುವಾಗ ಆರೋಗ್ಯವಂತ ಜೀವಕೋಶಗಳೂ ಸಾವನ್ನಪ್ಪುತ್ತವೆ. ಕೆಂಪು ರಕ್ತ ಕಣಗಳು ಗಡುಸಾಗುವುದು, ರಕ್ತನಾಳಗಳು ಕುಗ್ಗುವುದು ಮೊದಲಾದ ಅಡ್ಡ ಪರಿಣಾಮಗಳಿಗೆ ರೋಗಿ ತುತ್ತಾಗುತ್ತಾನೆ. ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸಾ ವಿಧಾನವನ್ನು ರೂಪಿಸುವ ನಿಟ್ಟಿನಲ್ಲಿ ಅನ್ವಯಿಕ ವಿಜ್ಞಾನದಲ್ಲಿ ಸಂಶೋಧನೆಗಳು ನಡೆಯುತ್ತಿವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>