ಮಧು ಬಂಗಾರಪ್ಪ ಪರ ಪ್ರಚಾರ ನಡೆಸುತ್ತಿರುವ ಗೀತಾ ಶಿವರಾಜ್ ಕುಮಾರ್ ಯಡಿಯೂರಪ್ಪ ಅವರ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ಶಿವಮೊಗ್ಗದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಬಿ.ವೈ.ರಾಘವೇಂದ್ರ ಅವರು ರೈಲ್ವೆ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಮಂಜುಳಾ, ಪದ್ಮಿನಿ, ಅನಿತಾ ರವಿಶಂಕರ್, ವಿದ್ಯಾ ಲಕ್ಷ್ಮೀಪತಿ, ಸುವರ್ಣ ಶಂಕರ್, ಹೇಮಾವತಿ, ಗೀತಾ ಮಲ್ಲಿಕಾರ್ಜುನಾ, ಶೋಭಾ, ಸುಧಾಮಣಿ ಉಪಸ್ಥಿತರಿದ್ದರು.