ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಸನ್ನಡತೆ; 100 ಜನ ರೌಡಿಶೀಟರ್‌ನಿಂದ ಹೊರಕ್ಕೆ

Published 19 ಫೆಬ್ರುವರಿ 2024, 4:50 IST
Last Updated 19 ಫೆಬ್ರುವರಿ 2024, 4:50 IST
ಅಕ್ಷರ ಗಾತ್ರ

ಬೀದರ್‌: ಸನ್ನಢತೆ ಆಧರಿಸಿ 100 ಜನರ ಹೆಸರುಗಳನ್ನು ರೌಡಿಶೀಟರ್‌ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನಗರದ ಜಿಲ್ಲಾ ಪೊಲೀಸ್‌ ಕಚೇರಿ ಆವರಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ‘ಸಮಾಜಮುಖಿ ಮನಪರಿವರ್ತನೆ’ ಹಾಗೂ ಸರ್ವಧರ್ಮ ಗುರುಗಳಿಂದ ಹಿತವಚನ, ಸದ್ವರ್ತನೆ ಶಪಥ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೀದರ್‌ ಜಿಲ್ಲಾ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಸಮಾಜಘಾತುಕ ಶಕ್ತಿಗಳ ಮೇಲೆ, ಅಪರಾಧಿಕ ಹಿನ್ನೆಲೆ ಹೊಂದಿದವರ ಮೇಲೆ ನಿಗಾ ಇಡಲು ರೌಡಿಶೀಟರ್‌ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರು. ಯಾರು ಮನಃಪರಿವರ್ತನೆಗೊಂಡು ಅವರ ವ್ಯಕ್ತಿತ್ವ ಬದಲಿಸಿಕೊಂಡಿದ್ದಾರೋ ಅಂತಹವರು ಹಾಗೂ ಉನ್ನತ ಶಿಕ್ಷಣ ಪಡೆದು ಖಾಸಗಿ ಕಂಪನಿಗಳಲ್ಲಿ ನೌಕರಿಯಿಂದ ವಂಚಿತರಾಗುತ್ತಿರುವವರ ಉತ್ತಮ ನಡತೆ ನೋಡಿಕೊಂಡು ಒಟ್ಟು 100 ಜನರ ಹೆಸರು ರೌಡಿಶೀಟರ್‌ನಿಂದ ಕೈಬಿಡಲಾಗಿದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಇದೊಂದು ಉತ್ತಮ ಅವಕಾಶವಿದ್ದು, ಅದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಬೆಲ್ದಾಳ ಸಿದ್ದರಾಮ ಶರಣರು, ರಾಜಯೋಗಿನಿ ಪ್ರತಿಮಾ ಬಹೇನಜಿ, ಭಂತೆ ಜ್ಞಾನಸಾಗರ, ಗ್ಯಾನಿ ದರಬಾರ ಸಿಂಗ್, ಆಸಿಫೋದ್ದಿನ್‌, ನೆಲ್ಸನ್ ಸುಮಿತ್ರ ಅವರು ಸರ್ವ ಧರ್ಮಗಳ ಮಹತ್ವ, ಶಾಂತಿ, ದಯೆ ಮಹತ್ವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT